<p><em><strong>ರೋಗನಿರೋಧಕ ಶಕ್ತಿ ಅಥವಾ ವ್ಯಾಧಿ ಕ್ಷಮತೆ ಹೆಚ್ಚಿದ್ದರೆ ಹಲವು ಕಾಯಿಲೆಗಳನ್ನು ಸಮರ್ಥವಾಗಿ ಎದುರಿಸಬಹುದು. ಇಂತಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಂಬಾರು ಪದಾರ್ಥಗಳು ಹಾಗೂ ಹಣ್ಣು– ತರಕಾರಿಗಳು ನಮ್ಮ ನಡುವೆ ಬೇಕಾದಷ್ಟಿವೆ. ಅವುಗಳ ಬಗ್ಗೆ ವಿವರ ಇಲ್ಲಿದೆ.</strong></em></p>.<p>ರೋಗನಿರೋಧಕ ಶಕ್ತಿ ಎಂದರೆ ವ್ಯಕ್ತಿಗೆ ರೋಗಗಳು ಬಾರದಂತೆ ಕಾಪಾಡುವ ಆಂತರಿಕ ಶಕ್ತಿ. ಇದು ಹುಟ್ಟಿದಾಗಿನಿಂದ ಸಾಯುವವರೆಗೂ ಸದಾ ಕೆಲಸ ಮಾಡುತ್ತಲೇ ಇರುತ್ತದೆ. ಚಿಕ್ಕ ಮಕ್ಕಳಲ್ಲಿ ಹಾಗೂ 65– 70 ವರ್ಷ ವಯಸ್ಸಾದವರಲ್ಲಿ, ಮಧುಮೇಹದಂತಹ ಕಾಯಿಲೆ ಇರುವವರಲ್ಲಿ ಈ ಶಕ್ತಿ ಕಡಿಮೆ ಇರಬಹುದು.</p>.<p>ರೋಗನಿರೋಧಕ ಶಕ್ತಿಯನ್ನು ಸರಿಯಾದ ಆಹಾರ ಕ್ರಮಗಳಿಂದ ಹಾಗೂ ಇತರೆ ಒಳ್ಳೆಯ ಅಭ್ಯಾಸಗಳಿಂದ ವೃದ್ಧಿಸಿಕೊಂಡರೆ ನಾವು ಆರೋಗ್ಯವಂತರಾಗಿರಬಹುದು. ಕಾಯಿಲೆ ವಿರುದ್ಧ ಯಶಸ್ವಿಯಾಗಿ ಹೋರಾಡಬಹುದು. ಯಾವ ಆಹಾರಗಳು ಈ ರೋಗನಿರೋಧಕ ಶಕ್ತಿಯನ್ನು ಕಾಪಾಡಲು ಹಾಗೂ ವೃದ್ಧಿಸಲು ಸಹಾಯಕ ಎಂದು ತಿಳಿಯೋಣ .</p>.<p><strong>ಅರಿಸಿನ:</strong> ವೈರಸ್ ಪ್ರತಿಬಂಧಕ, ಉರಿಯೂತ ಹಾಗೂ ಸೂಕ್ಷ್ಮಾಣು ಜೀವಿ ನಿರೋಧಕ ಗುಣಗಳನ್ನು ಹೊಂದಿದ್ದು ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ತುಂಬಾ ಸಹಾಯಕಾರಿ. ನಿತ್ಯ ಅಡುಗೆಯಲ್ಲಿ ಬಳಸಬಹುದು.</p>.<p><strong>ಮೆಣಸಿನಕಾಯಿ:</strong> ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಏಜಿಂಗ್ ಗುಣ ಇದರಲ್ಲಿದ್ದು, ವಿಟಮಿನ್ ಸಿ ಹೇರಳವಾಗಿರುತ್ತದೆ. ಇದರ ದಿನನಿತ್ಯ ಸೇವನೆಯಿಂದ ಮೇಲಿಂದ ಮೇಲೆ ಬರುವ ನೆಗಡಿ, ಸೈನುಸೈಟಿಸ್ ನಿಯಂತ್ರಿಸಬಹುದು.</p>.<p><strong>ಕಾಳುಮೆಣಸು:</strong> ಇದು ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ. ಕಫದ ತೊಂದರೆ ಇರುವವರು ಆಹಾರದಲ್ಲಿ ಖಾರದ ಪುಡಿಯ ಬದಲಾಗಿ ಇದನ್ನು ಬಳಸಿದರೆ ಒಳ್ಳೆಯದು.</p>.<p><strong>ಲವಂಗ:</strong> ಇದರಲ್ಲಿ ಹೆಚ್ಚಾಗಿ ಆ್ಯಂಟಿ ಆಕ್ಸಿಡೆಂಟ್ ಇರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ .</p>.<p><strong>ಶುಂಠಿ:</strong> ಸೂಕ್ಷ್ಮಾಣು ಪ್ರತಿಬಂಧಕ ಗುಣ ಹೊಂದಿರುವ ಕಾರಣದಿಂದಾಗಿ ರೋಗಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯ ಶುಂಠಿಯಲ್ಲಡಗಿದೆ. ಇದನ್ನು ಆಹಾರದಲ್ಲಿ ಹಾಗೂ ಚಹಾದ ಜೊತೆಗೆ ಕುದಿಸಿ ಸೇವಿಸಬಹುದು.</p>.<p><strong>ಬೆಳ್ಳುಳ್ಳಿ:</strong> ಇದು ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಬಾರದಂತೆ ತಡೆಗಟ್ಟುತ್ತದೆ. ಇದರಲ್ಲಿ ವಿಟಮಿನ್ ಸಿ , ಬಿ1, ಬಿ6 ಮತ್ತು ಆಲಿಸನ್ ಎಂಬ ವಸ್ತು ಇರುವುದರಿಂದ ಅತ್ಯುತ್ತಮ ರೋಗನಿರೋಧಕವಾಗಿದೆ. ಜೀರಿಗೆ ಮತ್ತು ಚಕ್ಕೆ ಕೂಡಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.</p>.<p class="Briefhead"><strong>ಹಣ್ಣುಗಳು</strong></p>.<p><strong>ಸಿಟ್ರಸ್ ಹಣ್ಣುಗಳು:</strong> ವಿಟಮಿನ್ ಸಿ ಇರುವುದರಿಂದ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ. ನಿಂಬೆ ಹಣ್ಣು, ದ್ರಾಕ್ಷಿ, ಕಿತ್ತಳೆ ಹಣ್ಣು, ಪಪ್ಪಾಯಿ, ಸೀಬೆ ಹಣ್ಣು, ಕೆಂಪು ಮತ್ತು ಹಳದಿ ದಪ್ಪ ಮೆಣಸು ಇತ್ಯಾದಿಗಳನ್ನು ದಿನನಿತ್ಯ ಸೇವಿಸಬೇಕು .</p>.<p><strong>ತೆಂಗಿನಕಾಯಿ:</strong> ಇದರಲ್ಲಿ (ನೀರು, ಎಣ್ಣೆ ಹಾಗೂ ತಿರುಳಿನಲ್ಲಿ) ಸೂಕ್ಷ್ಮ ಪೋಷಕಾಂಶಗಳು ಹೇರಳವಾಗಿರುವುದರಿಂದ ದಿನಾ ಅಡುಗೆಯಲ್ಲಿ ಬಳಸಬಹುದು. ತೆಂಗಿನಎಣ್ಣೆಯನ್ನು ಉತ್ತಮವಾದ ಕೊಬ್ಬು ಎನ್ನುತ್ತಾರೆ ಹಾಗೂ ಉಳಿದೆಲ್ಲ ಎಣ್ಣೆಗಳಿಗಿಂತ ತೆಂಗಿನಎಣ್ಣೆಯಿಂದ ಅಡುಗೆ ಮಾಡುವುದು ಅತ್ಯುತ್ತಮ ಎನ್ನಲಾಗಿದೆ.</p>.<p><strong>ಗೆಣಸು:</strong> ಇದರಿಂದ ವಿಟಮಿನ್ ಎ ಸಿಗುತ್ತದೆ, ಚರ್ಮದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.</p>.<p class="Briefhead"><strong>ನಿತ್ಯ ಸೇವಿಸುವ ಆಹಾರಗಳು</strong></p>.<p><strong>ಅಕ್ಕಿ:</strong> ಪಾಲಿಷ್ ಮಾಡದೇ ಇರುವ ಹಳೆಯ ಕೆಂಪು ಅಕ್ಕಿಯು ಹೆಚ್ಚು ವೀರ್ಯ ಉಳ್ಳದ್ದು ಹಾಗೂ ಜೀರ್ಣವಾಗಲು ಹಗುರ. ಇದು ಉತ್ತಮವಾದ ಪೌಷ್ಟಿಕ ಆಹಾರ.</p>.<p><strong>ಗೋಧಿ:</strong> ಹೆಚ್ಚು ಫೈಬರ್, ಕಡಿಮೆ ಕಾರ್ಬೊಹೈಡ್ರೇಟ್ ಹೊಂದಿದೆ.</p>.<p><strong>ಹೆಸರುಬೇಳೆ:</strong> ಬೇಯಿಸಿದ ಬೇಳೆಯಲ್ಲಿ ಹೆಚ್ಚು ಪೌಷ್ಟಿಕಾಂಶವಿದ್ದು, ಫೈಬರ್ ಕೂಡ ಇರುತ್ತದೆ. ಆದರೆ ಬೇಯಿಸದೆ ತಿನ್ನಬಾರದು.</p>.<p><strong>ಬಾರ್ಲಿ:</strong> ಈಗಿನ ಜೀವನಶೈಲಿಗೆ ಇದೊಂದು ಅತ್ಯುತ್ತಮ ದಿನನಿತ್ಯದ ಆಹಾರ. ಇದರಲ್ಲಿರುವ ಕಡಿಮೆ ಕೊಬ್ಬು, ಕಡಿಮೆ ಕಾರ್ಬೊಹೈಡ್ರೇಟ್ / ಪಿಷ್ಟ ಹಾಗೂ ಸಕ್ಕರೆಯಿಂದಾಗಿ ಕಾಯಿಲೆಯನ್ನುತಡೆಗಟ್ಟಲು ಉತ್ತಮ ಆಹಾರ ಎನ್ನಬಹುದು. ಇದನ್ನು ಗಂಜಿ ಅಥವಾ ಹುರಿದು ಸ್ನ್ಯಾಕ್ ರೂಪದಲ್ಲಿ ತಿನ್ನಬಹುದು.</p>.<p><strong>ತುಪ್ಪ:</strong> ನಿತ್ಯ ಸೇವಿಸಬಹುದಾದ ಒಳ್ಳೆಯ ಕೊಬ್ಬು. ಒಳ್ಳೆಯ ಕೊಲೆಸ್ಟ್ರಾಲ್ ತಯಾರಿಸಲು ಉತ್ತೇಜಿಸು<br />ತ್ತದೆ. ಮಕ್ಕಳಿಗೆ ಕೊಡಲೇಬೇಕಾದ ದ್ರವ್ಯ. ಇದನ್ನು ಬುದ್ಧಿವರ್ಧಕ ಎಂದೂ ಕರೆಯುವುದು ರೂಢಿ.</p>.<p><strong>ಸೈಂಧವ ಲವಣ:</strong> ಸಂಸ್ಕರಿಸದ ಕಲ್ಲುಪ್ಪು. ನಿತ್ಯ ಬಳಕೆಗೆ ಉತ್ತಮ. ಐದು ಬಗೆಯ ಉಪ್ಪುಗಳಲ್ಲಿಯೇ ಶ್ರೇಷ್ಠ ಹಾಗೂ ರಸಾಯನ ಎಂದೂ ಕರೆಯುವ ರೂಢಿಯಿದೆ.</p>.<p><strong>ಜೇನುತುಪ್ಪ:</strong> ಸೂಕ್ಷ್ಮಾಣು ಪ್ರತಿಬಂಧಕ, ಫಂಗಸ್ ನಿರೋಧಕ ಹಾಗೂ ಆ್ಯಂಟಿ ಆಕ್ಸಿಡೆಂಟ್ ಗುಣಧರ್ಮ<br />ಗಳಿಂದ ಭರ್ತಿಯಾಗಿರುವುದರಿಂದ ಇದು ರೋಗನಿರೋಧಕ.</p>.<p class="Briefhead"><strong>ಸೇವಿಸಬಾರದ/ ಹಾನಿಕಾರಕ ಆಹಾರಗಳು</strong></p>.<p>ಕಡಲೆ ಬೇಳೆ,ಕೆಂಪು ಮಾಂಸ,ಸೋಡಾ,ಸಂಸ್ಕರಿಸಿದ (ಪ್ಯಾಕೆಟ್) ಆಹಾರ,ಹೆಚ್ಚಾಗಿ ಸಕ್ಕರೆ ಇರುವ ಆಹಾರ ಮತ್ತು ಪಾನೀಯ,<br />ಮದ್ಯ.</p>.<p>ಇವೆಲ್ಲವನ್ನು ಹೊರತುಪಡಿಸಿ ಪ್ರಾದೇಶಿಕವಾಗಿ ಬೆಳೆದ ಆಹಾರ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳು ಆಯಾ ಪ್ರದೇಶಗಳ ಜನರಿಗೆ ತುಂಬಾ ಯೋಗ್ಯವಾದದ್ದು.</p>.<p><strong>ನೀರು:</strong> ಎಲ್ಲ ಕಾಲಗಳಲ್ಲಿಯೂ ಉಗುರುಬೆಚ್ಚಗಿನ ನೀರನ್ನು ಕುಡಿದರೆ ಚಯಾಪಚಯ ಕ್ರಿಯೆ ಹೆಚ್ಚಾಗಿ, ರೋಗನಿರೋಧಕ ಶಕ್ತಿ ಕಾಪಿಡುತ್ತದೆ. .</p>.<p><em><strong>(ಲೇಖಕಿ ವೈದ್ಯೆ, ಲೋಟಸ್ ಆಯುರ್ಕೇರ್ ಆಯುರ್ವೇದ ಆಸ್ಪತ್ರೆ, ಬೆಂಗಳೂರು)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ರೋಗನಿರೋಧಕ ಶಕ್ತಿ ಅಥವಾ ವ್ಯಾಧಿ ಕ್ಷಮತೆ ಹೆಚ್ಚಿದ್ದರೆ ಹಲವು ಕಾಯಿಲೆಗಳನ್ನು ಸಮರ್ಥವಾಗಿ ಎದುರಿಸಬಹುದು. ಇಂತಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಂಬಾರು ಪದಾರ್ಥಗಳು ಹಾಗೂ ಹಣ್ಣು– ತರಕಾರಿಗಳು ನಮ್ಮ ನಡುವೆ ಬೇಕಾದಷ್ಟಿವೆ. ಅವುಗಳ ಬಗ್ಗೆ ವಿವರ ಇಲ್ಲಿದೆ.</strong></em></p>.<p>ರೋಗನಿರೋಧಕ ಶಕ್ತಿ ಎಂದರೆ ವ್ಯಕ್ತಿಗೆ ರೋಗಗಳು ಬಾರದಂತೆ ಕಾಪಾಡುವ ಆಂತರಿಕ ಶಕ್ತಿ. ಇದು ಹುಟ್ಟಿದಾಗಿನಿಂದ ಸಾಯುವವರೆಗೂ ಸದಾ ಕೆಲಸ ಮಾಡುತ್ತಲೇ ಇರುತ್ತದೆ. ಚಿಕ್ಕ ಮಕ್ಕಳಲ್ಲಿ ಹಾಗೂ 65– 70 ವರ್ಷ ವಯಸ್ಸಾದವರಲ್ಲಿ, ಮಧುಮೇಹದಂತಹ ಕಾಯಿಲೆ ಇರುವವರಲ್ಲಿ ಈ ಶಕ್ತಿ ಕಡಿಮೆ ಇರಬಹುದು.</p>.<p>ರೋಗನಿರೋಧಕ ಶಕ್ತಿಯನ್ನು ಸರಿಯಾದ ಆಹಾರ ಕ್ರಮಗಳಿಂದ ಹಾಗೂ ಇತರೆ ಒಳ್ಳೆಯ ಅಭ್ಯಾಸಗಳಿಂದ ವೃದ್ಧಿಸಿಕೊಂಡರೆ ನಾವು ಆರೋಗ್ಯವಂತರಾಗಿರಬಹುದು. ಕಾಯಿಲೆ ವಿರುದ್ಧ ಯಶಸ್ವಿಯಾಗಿ ಹೋರಾಡಬಹುದು. ಯಾವ ಆಹಾರಗಳು ಈ ರೋಗನಿರೋಧಕ ಶಕ್ತಿಯನ್ನು ಕಾಪಾಡಲು ಹಾಗೂ ವೃದ್ಧಿಸಲು ಸಹಾಯಕ ಎಂದು ತಿಳಿಯೋಣ .</p>.<p><strong>ಅರಿಸಿನ:</strong> ವೈರಸ್ ಪ್ರತಿಬಂಧಕ, ಉರಿಯೂತ ಹಾಗೂ ಸೂಕ್ಷ್ಮಾಣು ಜೀವಿ ನಿರೋಧಕ ಗುಣಗಳನ್ನು ಹೊಂದಿದ್ದು ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ತುಂಬಾ ಸಹಾಯಕಾರಿ. ನಿತ್ಯ ಅಡುಗೆಯಲ್ಲಿ ಬಳಸಬಹುದು.</p>.<p><strong>ಮೆಣಸಿನಕಾಯಿ:</strong> ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಏಜಿಂಗ್ ಗುಣ ಇದರಲ್ಲಿದ್ದು, ವಿಟಮಿನ್ ಸಿ ಹೇರಳವಾಗಿರುತ್ತದೆ. ಇದರ ದಿನನಿತ್ಯ ಸೇವನೆಯಿಂದ ಮೇಲಿಂದ ಮೇಲೆ ಬರುವ ನೆಗಡಿ, ಸೈನುಸೈಟಿಸ್ ನಿಯಂತ್ರಿಸಬಹುದು.</p>.<p><strong>ಕಾಳುಮೆಣಸು:</strong> ಇದು ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ. ಕಫದ ತೊಂದರೆ ಇರುವವರು ಆಹಾರದಲ್ಲಿ ಖಾರದ ಪುಡಿಯ ಬದಲಾಗಿ ಇದನ್ನು ಬಳಸಿದರೆ ಒಳ್ಳೆಯದು.</p>.<p><strong>ಲವಂಗ:</strong> ಇದರಲ್ಲಿ ಹೆಚ್ಚಾಗಿ ಆ್ಯಂಟಿ ಆಕ್ಸಿಡೆಂಟ್ ಇರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ .</p>.<p><strong>ಶುಂಠಿ:</strong> ಸೂಕ್ಷ್ಮಾಣು ಪ್ರತಿಬಂಧಕ ಗುಣ ಹೊಂದಿರುವ ಕಾರಣದಿಂದಾಗಿ ರೋಗಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯ ಶುಂಠಿಯಲ್ಲಡಗಿದೆ. ಇದನ್ನು ಆಹಾರದಲ್ಲಿ ಹಾಗೂ ಚಹಾದ ಜೊತೆಗೆ ಕುದಿಸಿ ಸೇವಿಸಬಹುದು.</p>.<p><strong>ಬೆಳ್ಳುಳ್ಳಿ:</strong> ಇದು ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಬಾರದಂತೆ ತಡೆಗಟ್ಟುತ್ತದೆ. ಇದರಲ್ಲಿ ವಿಟಮಿನ್ ಸಿ , ಬಿ1, ಬಿ6 ಮತ್ತು ಆಲಿಸನ್ ಎಂಬ ವಸ್ತು ಇರುವುದರಿಂದ ಅತ್ಯುತ್ತಮ ರೋಗನಿರೋಧಕವಾಗಿದೆ. ಜೀರಿಗೆ ಮತ್ತು ಚಕ್ಕೆ ಕೂಡಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.</p>.<p class="Briefhead"><strong>ಹಣ್ಣುಗಳು</strong></p>.<p><strong>ಸಿಟ್ರಸ್ ಹಣ್ಣುಗಳು:</strong> ವಿಟಮಿನ್ ಸಿ ಇರುವುದರಿಂದ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ. ನಿಂಬೆ ಹಣ್ಣು, ದ್ರಾಕ್ಷಿ, ಕಿತ್ತಳೆ ಹಣ್ಣು, ಪಪ್ಪಾಯಿ, ಸೀಬೆ ಹಣ್ಣು, ಕೆಂಪು ಮತ್ತು ಹಳದಿ ದಪ್ಪ ಮೆಣಸು ಇತ್ಯಾದಿಗಳನ್ನು ದಿನನಿತ್ಯ ಸೇವಿಸಬೇಕು .</p>.<p><strong>ತೆಂಗಿನಕಾಯಿ:</strong> ಇದರಲ್ಲಿ (ನೀರು, ಎಣ್ಣೆ ಹಾಗೂ ತಿರುಳಿನಲ್ಲಿ) ಸೂಕ್ಷ್ಮ ಪೋಷಕಾಂಶಗಳು ಹೇರಳವಾಗಿರುವುದರಿಂದ ದಿನಾ ಅಡುಗೆಯಲ್ಲಿ ಬಳಸಬಹುದು. ತೆಂಗಿನಎಣ್ಣೆಯನ್ನು ಉತ್ತಮವಾದ ಕೊಬ್ಬು ಎನ್ನುತ್ತಾರೆ ಹಾಗೂ ಉಳಿದೆಲ್ಲ ಎಣ್ಣೆಗಳಿಗಿಂತ ತೆಂಗಿನಎಣ್ಣೆಯಿಂದ ಅಡುಗೆ ಮಾಡುವುದು ಅತ್ಯುತ್ತಮ ಎನ್ನಲಾಗಿದೆ.</p>.<p><strong>ಗೆಣಸು:</strong> ಇದರಿಂದ ವಿಟಮಿನ್ ಎ ಸಿಗುತ್ತದೆ, ಚರ್ಮದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.</p>.<p class="Briefhead"><strong>ನಿತ್ಯ ಸೇವಿಸುವ ಆಹಾರಗಳು</strong></p>.<p><strong>ಅಕ್ಕಿ:</strong> ಪಾಲಿಷ್ ಮಾಡದೇ ಇರುವ ಹಳೆಯ ಕೆಂಪು ಅಕ್ಕಿಯು ಹೆಚ್ಚು ವೀರ್ಯ ಉಳ್ಳದ್ದು ಹಾಗೂ ಜೀರ್ಣವಾಗಲು ಹಗುರ. ಇದು ಉತ್ತಮವಾದ ಪೌಷ್ಟಿಕ ಆಹಾರ.</p>.<p><strong>ಗೋಧಿ:</strong> ಹೆಚ್ಚು ಫೈಬರ್, ಕಡಿಮೆ ಕಾರ್ಬೊಹೈಡ್ರೇಟ್ ಹೊಂದಿದೆ.</p>.<p><strong>ಹೆಸರುಬೇಳೆ:</strong> ಬೇಯಿಸಿದ ಬೇಳೆಯಲ್ಲಿ ಹೆಚ್ಚು ಪೌಷ್ಟಿಕಾಂಶವಿದ್ದು, ಫೈಬರ್ ಕೂಡ ಇರುತ್ತದೆ. ಆದರೆ ಬೇಯಿಸದೆ ತಿನ್ನಬಾರದು.</p>.<p><strong>ಬಾರ್ಲಿ:</strong> ಈಗಿನ ಜೀವನಶೈಲಿಗೆ ಇದೊಂದು ಅತ್ಯುತ್ತಮ ದಿನನಿತ್ಯದ ಆಹಾರ. ಇದರಲ್ಲಿರುವ ಕಡಿಮೆ ಕೊಬ್ಬು, ಕಡಿಮೆ ಕಾರ್ಬೊಹೈಡ್ರೇಟ್ / ಪಿಷ್ಟ ಹಾಗೂ ಸಕ್ಕರೆಯಿಂದಾಗಿ ಕಾಯಿಲೆಯನ್ನುತಡೆಗಟ್ಟಲು ಉತ್ತಮ ಆಹಾರ ಎನ್ನಬಹುದು. ಇದನ್ನು ಗಂಜಿ ಅಥವಾ ಹುರಿದು ಸ್ನ್ಯಾಕ್ ರೂಪದಲ್ಲಿ ತಿನ್ನಬಹುದು.</p>.<p><strong>ತುಪ್ಪ:</strong> ನಿತ್ಯ ಸೇವಿಸಬಹುದಾದ ಒಳ್ಳೆಯ ಕೊಬ್ಬು. ಒಳ್ಳೆಯ ಕೊಲೆಸ್ಟ್ರಾಲ್ ತಯಾರಿಸಲು ಉತ್ತೇಜಿಸು<br />ತ್ತದೆ. ಮಕ್ಕಳಿಗೆ ಕೊಡಲೇಬೇಕಾದ ದ್ರವ್ಯ. ಇದನ್ನು ಬುದ್ಧಿವರ್ಧಕ ಎಂದೂ ಕರೆಯುವುದು ರೂಢಿ.</p>.<p><strong>ಸೈಂಧವ ಲವಣ:</strong> ಸಂಸ್ಕರಿಸದ ಕಲ್ಲುಪ್ಪು. ನಿತ್ಯ ಬಳಕೆಗೆ ಉತ್ತಮ. ಐದು ಬಗೆಯ ಉಪ್ಪುಗಳಲ್ಲಿಯೇ ಶ್ರೇಷ್ಠ ಹಾಗೂ ರಸಾಯನ ಎಂದೂ ಕರೆಯುವ ರೂಢಿಯಿದೆ.</p>.<p><strong>ಜೇನುತುಪ್ಪ:</strong> ಸೂಕ್ಷ್ಮಾಣು ಪ್ರತಿಬಂಧಕ, ಫಂಗಸ್ ನಿರೋಧಕ ಹಾಗೂ ಆ್ಯಂಟಿ ಆಕ್ಸಿಡೆಂಟ್ ಗುಣಧರ್ಮ<br />ಗಳಿಂದ ಭರ್ತಿಯಾಗಿರುವುದರಿಂದ ಇದು ರೋಗನಿರೋಧಕ.</p>.<p class="Briefhead"><strong>ಸೇವಿಸಬಾರದ/ ಹಾನಿಕಾರಕ ಆಹಾರಗಳು</strong></p>.<p>ಕಡಲೆ ಬೇಳೆ,ಕೆಂಪು ಮಾಂಸ,ಸೋಡಾ,ಸಂಸ್ಕರಿಸಿದ (ಪ್ಯಾಕೆಟ್) ಆಹಾರ,ಹೆಚ್ಚಾಗಿ ಸಕ್ಕರೆ ಇರುವ ಆಹಾರ ಮತ್ತು ಪಾನೀಯ,<br />ಮದ್ಯ.</p>.<p>ಇವೆಲ್ಲವನ್ನು ಹೊರತುಪಡಿಸಿ ಪ್ರಾದೇಶಿಕವಾಗಿ ಬೆಳೆದ ಆಹಾರ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳು ಆಯಾ ಪ್ರದೇಶಗಳ ಜನರಿಗೆ ತುಂಬಾ ಯೋಗ್ಯವಾದದ್ದು.</p>.<p><strong>ನೀರು:</strong> ಎಲ್ಲ ಕಾಲಗಳಲ್ಲಿಯೂ ಉಗುರುಬೆಚ್ಚಗಿನ ನೀರನ್ನು ಕುಡಿದರೆ ಚಯಾಪಚಯ ಕ್ರಿಯೆ ಹೆಚ್ಚಾಗಿ, ರೋಗನಿರೋಧಕ ಶಕ್ತಿ ಕಾಪಿಡುತ್ತದೆ. .</p>.<p><em><strong>(ಲೇಖಕಿ ವೈದ್ಯೆ, ಲೋಟಸ್ ಆಯುರ್ಕೇರ್ ಆಯುರ್ವೇದ ಆಸ್ಪತ್ರೆ, ಬೆಂಗಳೂರು)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>