<p>ಇಲ್ಲ, ಇದು ಹಿಂಗಾಗಿರಲಿಕ್ಕಿಲ್ಲ. ಅವರು ವಾಪಸಾಗಬಹುದು. ಏನೋ ಜಗಳವಾಗಿದೆ... ಜಗಳಗಳು ಯಾರ ನಡುವೆ ಆಗುವುದಿಲ್ಲ ಹೇಳಿ.. ಸಮಯ ಸರಿ ಇಲ್ಲ. ಶನಿ ಕಾಟ ಇದೆ ಅಂತಿದ್ರು.. ಮತ್ತೆ ಮರಳುತ್ತಾರೆ...</p>.<p>ಬಾಂಧವ್ಯವೊಂದರಿಂದ ವ್ಯಕ್ತಿಯೊಬ್ಬ ಕಳಚಿಕೊಂಡ ಮೇಲೂ ಸಂಗಾತಿಗಾಗಿ ತಹತಹಿಸುವವರು ತಮ್ಮನ್ನು ಸಮಾಧಾನ ಮಾಡಿಕೊಳ್ಳುವ ಪರಿ ಇದು.</p>.<p>ಇಲ್ಲ, ಏನೋ ತಪ್ಪಾಯಿತು. ಬಹುಶಃ ನಾನೇ ಈ ಬಾಂಧವ್ಯಕ್ಕೆ ಸೂಕ್ತ ವ್ಯಕ್ತಿ ಆಗಿರಲಿಲ್ಲವೇನೋ? ಅವರಿಗೊಂದು ಒಳಿತಿನ ಜೀವನ ಸಿಗಲಿ... ನಾನೇ ಸರಿ ಇಲ್ಲ.. ಇಂಥದ್ದೊಂದು ಅಪರಾಧ ಭಾವವೂ ಒಂದು ಬಾಂಧವ್ಯದಲ್ಲಿ ಬಿರುಕು ಬಂದಾಗ ಕಾಣಿಸಿಕೊಳ್ಳುತ್ತದೆ.</p>.<p>ಛೆ.. ಅವರೇ ಸರಿ ಇಲ್ಲ. ಇನ್ನವರು ನನ್ನ ಬದುಕಿಗೆ ಬರುವುದು ಬೇಡ. ನಾನವರೊಟ್ಟಿಗೆ ಮಾತನಾಡುವುದಿಲ್ಲ. ಅವರೂ ನನ್ನೊಟ್ಟಿಗೆ ಯಾವ ಬಂಧವನ್ನೂ ಇರಿಸಿಕೊಳ್ಳುವುದು ಬೇಡ. ನನಗಿನ್ನು ಅವರ ಗೊಡವೆಯೇ ಬೇಡ. ಇನ್ನೆಂದಿಗೂ ನಾನವರ ಮುಖ ನೋಡುವುದೇ ಇಲ್ಲ.. ಹೀಗೆ ಒಂದು ಬಾಂಧವ್ಯದಿಂದ ವಿಮುಖರೂ ಆಗುತ್ತಾರೆ.</p>.<p>ಅದೇನೋ ಸಮಯ ಸರಿ ಇರಲಿಲ್ಲ. ಋಣಾನುಬಂಧ ತೀರಿತು. ಬೇಡದ ಬಾಂಧವ್ಯದಲ್ಲಿ ನರಳಾಡುವ ಬದಲು ಆಚೆ ಬಂದರಾಯಿತು ಅಂತನಿಸಿ, ಆ ಬಂಧನದಿಂದಾಚೆ ಬಂದೆ.. ಹೀಗೆ ನಿರ್ಧಾರವನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆ.</p>.<p>ನೋವುಣ್ಣುವ ಇಂಥ ಪರಿಸ್ಥಿತಿಗಳಲ್ಲಿ ಏಳು ಹಂತಗಳಿವೆ ಎಂದು ಮಾನಸಿಕ ಸ್ವಾಸ್ಥ್ಯಕ್ಕಾಗಿ ಇರುವ ‘ಹೆಲ್ತ್ಲೈನ್’ ಜರ್ನಲ್ ಪಟ್ಟಿ ಮಾಡಿದೆ. ನೋವಿನ ತೀವ್ರತೆ ಕಡಿಮೆಯಾಗುವ ಹಂತಗಳನ್ನೂ ಇಲ್ಲಿ ವಿವರಿಸಲಾಗಿದೆ.</p>.<p>ನಿರಾಕರಣ, ಅಪರಾಧಿ ಭಾವ, ನಿರ್ಲಕ್ಷ್ಯ ಹಾಗೂ ಸ್ವಸಮರ್ಥನೆಯನ್ನೇ ಬಿಂಬಿಸುವ ಇವೆಲ್ಲವೂ ವಿದಾಯದ ದುಃಖವನ್ನು ಭರಿಸುವ ಅಥವಾ ಸ್ವೀಕರಿಸುವ ವಿವಿಧ ಭಾವಗಳಾಗಿವೆ.</p>.<p>ಆದರೆ ಇವೆಲ್ಲವೂ ಬಾಂಧವ್ಯಗಳಲ್ಲಿ ಬಿರುಕು ಬಂದಾಗಲೇ ಒಂದು ಸ್ಥಿತಿಗೆ ವಾದ ಮನದೊಳಗೆ ಪೊರೆಯುತ್ತಿರುತ್ತೇವೆ. ಈ ಮೇಲಿನ ಯಾವುದೇ ಭಾವಗಳಾದರೂ ನಮ್ಮಲ್ಲಿ ಮೊದಲೇ ಕಾಣಿಸಿಕೊಂಡಿರುತ್ತವೆ. ಉಳಿದಂತೆ ಒಂದು ವಿದಾಯದ ಸುತ್ತ ಈ ಭಾವಗಳಲ್ಲಿ ಯಾವುದು ಮೇಲುಗೈ ಪಡೆಯುತ್ತದೆಯೋ ಅದೇ ಪರಿಣಾಮವಾಗಿ ಕಾಣಿಸಿಕೊಳ್ಳುತ್ತದೆ.</p>.<p>ಬಯಸಿಯೂ, ಬಯಸದೆಯೂ ವಿದಾಯ ಅನಿವಾರ್ಯವಾದಾಗ ಸಾಮಾನ್ಯವಾಗಿ ಇಂಥ ಭಾವಗಳು ನಮ್ಮನ್ನು ಕಾಡತೊಡಗುತ್ತವೆ. ಈ ಸಮರ್ಥನೆಗಳು ಆ ಕ್ಷಣದ ಪ್ರತಿಕ್ರಿಯೆಗಳಾಗಿರುವುದಿಲ್ಲ. ಇವೆಲ್ಲವೂ ನಮ್ಮೊಳಗಿನ ಸಮಾಧಾನವನ್ನು ಕಾಣುವ ಮಾರ್ಗಗಳಾಗಿರುತ್ತವೆ. ಮಾನಸಿಕವಾಗಿ ಸದೃಢವಾಗಿರುವವರು ಈ ಐದು ವಿಧಗಳಲ್ಲಿ ಯಾವುದೋ ಒಂದಕ್ಕೆ ಕಟ್ಟು ಬಿದ್ದು ಪರಿಸ್ಥಿತಿಯನ್ನು ಸ್ವೀಕರಿಸುತ್ತಾರೆ.</p>.<p>ಇದು ಕೇವಲ ಬಾಂಧವ್ಯದ ತಂತು ಬೇರ್ಪಟ್ಟಾಗ ಇಂಥ ದುಃಖಕ್ಕೆ ಒಳಗಾಗುವುದಿಲ್ಲ. ಕೆಲಸ ಕಳೆದುಕೊಂಡಾಗ, ದೀರ್ಘಕಾಲದ ಕಾಯಿಲೆಗಳಿಗೆ ಒಳಗಾದಾಗ, ಆತ್ಮೀಯರು ಸಾವನ್ನಪ್ಪಿದಾಗಲೆಲ್ಲ ನಾವು ಇಂಥ ದುಃಖಕ್ಕೆ ಒಳಗಾಗುತ್ತೇವೆ.</p>.<p>ಪ್ರತಿಯೊಂದು ದುಃಖದ ಸನ್ನಿವೇಶಗಳೂ ಏಳುಹಂತಗಳನ್ನು ದಾಟುತ್ತವೆ. ನಾವು ಎಷ್ಟು ಬೇಗ ಈ ಹಂತಗಳನ್ನು ದಾಟುತ್ತೇವೆಯೋ.. ಅಷ್ಟು ಬೇಗ ಬದುಕು ಸರಳವಾಗುತ್ತಲೇ ಹೋಗುತ್ತದೆ.</p>.<p>ಮೊದಲನೆಯದ್ದು ಅಪನಂಬಿಕೆ ಅಥವಾ ಅಲ್ಲಗಳೆಯುವಿಕೆ: ಸದ್ಯಕ್ಕೆ ನನ್ನೊಟ್ಟಿಗೆ ಆಗಿರುವುದು ನನಗಾಗಿ ಅಲ್ಲ. ಇದು ತಾತ್ಕಾಲಿಕ ಬೆಳವಣಿಗೆ. ನನ್ನೊಟ್ಟಿಗೆ ಹೀಗಾಗಲು ಸಾಧ್ಯವೇ ಇಲ್ಲ ಎಂಬಂಥ ನಂಬಿಕೆಗಳನ್ನು ಪೋಷಿಸಿಕೊಂಡು ಬರುವುದು.</p>.<p><strong>* ನೋವು ಮತ್ತು ಅಪರಾಧಿಭಾವ:</strong> ಎಲ್ಲಕ್ಕೂ ನಮ್ಮ ಅಸಾಮರ್ಥ್ಯಗಳೇ ಕಾರಣ, ಎಲ್ಲವೂ ನಮ್ಮಿಂದಾದ ತಪ್ಪುಗಳಿಂದಲೇ ಘಟಿಸಿದೆ ಎಂಬ ಸ್ವಹೀಗಳೆಯುವ ಹಂತ</p>.<p><strong>* ಕೋಪ ಮತ್ತು ಚೌಕಾಶಿ: </strong>ಇವೆರಡೂ ವ್ಯತಿರಿಕ್ತ ಭಾವಗಳು. ಅಗಾಧವಾದ ಕೋಪವನ್ನು ತೋರುವುದು, ಕಿರುಚಾಡುವುದು, ದೇಹದಂಡನೆ ಮಾಡಿಕೊಳ್ಳುವುದು, ಇಲ್ಲವೇ ತೀರ ಆರ್ತ್ರನಾಗಿ ಚೌಕಾಶಿಗಿಳಿಯುವುದು.. ಇಷ್ಟಕ್ಕಾದರೂ ಒಪ್ಪಲಿ ಎಂಬ ಸಮಜಾಯಿಷಿಗಳಿಗೆ ಇಳಿಯುವುದು.</p>.<p><strong>* ಖಿನ್ನತೆ: </strong>ಈ ಹಂತದಲ್ಲಿ ಎಲ್ಲ ಸುಖ ಸಂಭ್ರಮ, ಸಾಮಾಜಿಕ ಆಗುಹೋಗುಗಳಿಂದ ದೂರವಾಗ್ತೀರಿ. ಯಾರನ್ನೂ ದೂರದೆ, ವಿನಾಕಾರಣ ಅಳುವುದು, ಸಿಡುಕುವುದು, ಸುಮ್ಮನಿರುವುದು, ಒಳಗೊಳಗೇ ಕೊರಗುವುದು ಮುಂತಾದ ಲಕ್ಷಣಗಳಿಂದ ಬಳಲುವಿರಿ.</p>.<p><strong>* ಮನೋಭೂಮಿಕೆಯ ಮರುನಿರ್ಮಾಣ: </strong>ಆದದ್ದು ಆಗಿ ಹೋಯಿತು. ಇನ್ನು ಚಿಂತಿಸಿ ಫಲವಿಲ್ಲ. ಇವೆಲ್ಲವನ್ನೂ ಪಾಠ ಎಂದುಕೊಂಡರಾಯಿತು. ಮುಂದೆ ಇಂಥ ಸಂದರ್ಭಗಳು ಮರುಕಳಿಸದಂತೆ ನೋಡಿಕೊಂಡರಾಯಿತು ಎಂಬ ಸ್ವ ಸಮಾಧಾನ.</p>.<p><strong>* ಬದುಕಿನ ಮರುನಿರ್ಮಾಣ: </strong>ಅಶಿಸ್ತಿನಿಂದ, ಸಂಯಮವಿಲ್ಲದೆ, ಏರುಪೇರಾದ ಬದುಕಿನ ಗತಿಯನ್ನು ಒಂದು ವೇಗಕ್ಕೆ ಮರು ಸ್ಥಾಪಿಸುವುದು. ಹಾಗೂ ನೀರ ಹರಿವಿನಂತೆ, ಯಾವುದಕ್ಕೂ ಅಂಟಿಕೊಳ್ಳದೆ ಮುಂದೆ ಸಾಗುತ್ತ ಹೋಗುವುದು.</p>.<p><strong>* ಸ್ವೀಕಾರ: </strong>ಆಗಿದ್ದು ಆಗಿ ಹೋಗಿದೆ. ಜೀವನ ಮುಂದೆ ಸಾಗಬೇಕು. ಭಾವನಾತ್ಮಕ ಭಾರಗಳನ್ನು ಹೊತ್ತು ಸಾಗುವುದರಲ್ಲಿ ಅರ್ಥವಿಲ್ಲ. ಒಂದಷ್ಟು ನೆನಪಿನ ಬುತ್ತಿಯಾಗಿ, ಇನ್ನಷ್ಟು ಅನುಭವದ ಪಾಠವಾಗಿ ಆ ಸನ್ನಿವೇಶಗಳನ್ನು ಸ್ವೀಕರಿಸಿದಾಗ ಜೀವನ ಮುಂದೆ ಸಾಗಲಾರಂಭಿಸುತ್ತದೆ.</p>.<p>ಕೆಲವರು ಮಾತ್ರ ಎಲ್ಲವನ್ನೂ ತಾತ್ಕಾಲಿಕವಾಗಿ ಹೊಂದಿಸಿಕೊಳ್ಳುತ್ತ, ಖಿನ್ನತೆಗೆ ಜಾರತೊಡಗುತ್ತಾರೆ. ಇವರಲ್ಲಿ ಮಾನಸಿಕ ಒತ್ತಡ ಹಾಗೂ ಖಿನ್ನತೆ ಎರಡೂ ಒಟ್ಟೊಟ್ಟಿಗೆ ಕಾಣಸಿಗುತ್ತವೆ. ಮುಂದಿನ ಹಂತಗಳಿಗೆ ಸಾಗುವ ಮುನ್ನವೇ ಈ ಗುಹೆಗಳಲ್ಲಿ, ಸುಳಿಗಳಲ್ಲಿ ಸಿಲುಕಿಕೊಳ್ಳುತ್ತಾರೆ.</p>.<p>ತಮ್ಮ ನೋವು ಯಾರಿಗೂ ಅರ್ಥವಾಗದು ಎಂಬ ಭಾವ ಅವರನ್ನು ಆಳುತ್ತದೆ. ಅಂಥವರು ನೋವಿನ ಸನ್ನಿವೇಶಗಳನ್ನು ನಿಭಾಯಿಸುವುದು ಹೇಗೆ?ಈ ಭಾವತೀವ್ರತೆಗಳನ್ನು ನಿಭಾಯಿಸುವುದು ಹೇಗೆ?</p>.<p>ವಿದಾಯದ ಸನ್ನಿವೇಶಗಳನ್ನು ಅರ್ಥ ಮಾಡಿಕೊಳ್ಳಬೇಕು. ಪರಿಸ್ಥಿತಿಯನ್ನು ಸ್ವೀಕರಿಸಿ, ಒಳಿತಿಗಾಗಿ ಬಯಸುವುದು ದುಃಖವನ್ನು ಒಪ್ಪಿಕೊಂಡಂತೆ.</p>.<p><strong>* ಬಾಂಧವ್ಯದಲ್ಲಿ ಬಿರುಕು ಬಂದಲ್ಲಿ: </strong>ಇದು ಒಳಿತಿನ ನಿರ್ಧಾರವಾಗಿದೆ. ಲಭ್ಯ ಇರುವ ಸಾಧ್ಯತೆಗಳಲ್ಲಿ, ಅವಕಾಶಗಳಲ್ಲಿ ಇದು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಒಪ್ಪಿಕೊಳ್ಳುವ ಮನಃಸ್ಥಿತಿ ನಿರ್ಮಾಣವಾಗುತ್ತದೆ.</p>.<p><strong>* ಕೆಲಸ ಕಳೆದುಕೊಂಡಾಗ:</strong> ನನಗಿದು ಅಂತ್ಯವಲ್ಲ. ಇಲ್ಲಿಂದ ಹೊಸ ದಾರಿಯೊಂದನ್ನು ತುಳಿಯಬೇಕಿದೆ. ಹೊಸ ಆರಂಭಕ್ಕಾಗಿಯೇ ವೃತ್ತಿಜೀವನದಲ್ಲಿ ಈ ತಿರುವು ಬಂದೊದಗಿದೆ.</p>.<p><strong>* ಸಾವಿನಿಂದಾಗಿ ಆತ್ಮೀಯರ ಅಗಲುವಿಕೆ: </strong>ಒಂದಷ್ಟು ದಿನಗಳಾದರೂ ಅವರೊಂದಿಗೆ ಕಳೆಯುವ ಅದೃಷ್ಟ ನನಗಿತ್ತಲ್ಲ. ಈ ಸಾಂಗತ್ಯದ ನೆನಪುಗಳು ಸದಾ ಹಸಿರಾಗಿರುತ್ತವೆ.</p>.<p><strong>* ಸುದೀರ್ಘಕಾಲದ ಕಾಯಿಲೆ: </strong>ನನಗಿದು ಈಗಲೇ ಅರಿವಿಗೆ ಬಂದಿದ್ದು ಒಳಿತಾಯ್ತು. ಉಳಿದಿರುವ ದಿನಗಳಲ್ಲಿ ಬಾಕಿ ಕೆಲಸಗಳನ್ನು ಮುಗಿಸಿಕೊಳ್ಳಬೇಕು. ಕೊನೆಯ ದಿನಗಳನ್ನು ಸಮಾಧಾನದಿಂದ ಕಳೆಯುವಂತಾಗಬೇಕು.</p>.<p>ಹೀಗೆ ಸಮಾಧಾನಿಸಿಕೊಳ್ಳುವ ದಿನಗಳು ಬಂದಾಗ ನೀವು, ನಿಮಗಾದ ದುಃಖವನ್ನು ನಿಭಾಯಿಸುವ ಸ್ಥಿತಿಗೆ ನಿಮ್ಮ ಮನಸನ್ನು ಅಣಿಗೊಳಿಸಿದಂತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಲ್ಲ, ಇದು ಹಿಂಗಾಗಿರಲಿಕ್ಕಿಲ್ಲ. ಅವರು ವಾಪಸಾಗಬಹುದು. ಏನೋ ಜಗಳವಾಗಿದೆ... ಜಗಳಗಳು ಯಾರ ನಡುವೆ ಆಗುವುದಿಲ್ಲ ಹೇಳಿ.. ಸಮಯ ಸರಿ ಇಲ್ಲ. ಶನಿ ಕಾಟ ಇದೆ ಅಂತಿದ್ರು.. ಮತ್ತೆ ಮರಳುತ್ತಾರೆ...</p>.<p>ಬಾಂಧವ್ಯವೊಂದರಿಂದ ವ್ಯಕ್ತಿಯೊಬ್ಬ ಕಳಚಿಕೊಂಡ ಮೇಲೂ ಸಂಗಾತಿಗಾಗಿ ತಹತಹಿಸುವವರು ತಮ್ಮನ್ನು ಸಮಾಧಾನ ಮಾಡಿಕೊಳ್ಳುವ ಪರಿ ಇದು.</p>.<p>ಇಲ್ಲ, ಏನೋ ತಪ್ಪಾಯಿತು. ಬಹುಶಃ ನಾನೇ ಈ ಬಾಂಧವ್ಯಕ್ಕೆ ಸೂಕ್ತ ವ್ಯಕ್ತಿ ಆಗಿರಲಿಲ್ಲವೇನೋ? ಅವರಿಗೊಂದು ಒಳಿತಿನ ಜೀವನ ಸಿಗಲಿ... ನಾನೇ ಸರಿ ಇಲ್ಲ.. ಇಂಥದ್ದೊಂದು ಅಪರಾಧ ಭಾವವೂ ಒಂದು ಬಾಂಧವ್ಯದಲ್ಲಿ ಬಿರುಕು ಬಂದಾಗ ಕಾಣಿಸಿಕೊಳ್ಳುತ್ತದೆ.</p>.<p>ಛೆ.. ಅವರೇ ಸರಿ ಇಲ್ಲ. ಇನ್ನವರು ನನ್ನ ಬದುಕಿಗೆ ಬರುವುದು ಬೇಡ. ನಾನವರೊಟ್ಟಿಗೆ ಮಾತನಾಡುವುದಿಲ್ಲ. ಅವರೂ ನನ್ನೊಟ್ಟಿಗೆ ಯಾವ ಬಂಧವನ್ನೂ ಇರಿಸಿಕೊಳ್ಳುವುದು ಬೇಡ. ನನಗಿನ್ನು ಅವರ ಗೊಡವೆಯೇ ಬೇಡ. ಇನ್ನೆಂದಿಗೂ ನಾನವರ ಮುಖ ನೋಡುವುದೇ ಇಲ್ಲ.. ಹೀಗೆ ಒಂದು ಬಾಂಧವ್ಯದಿಂದ ವಿಮುಖರೂ ಆಗುತ್ತಾರೆ.</p>.<p>ಅದೇನೋ ಸಮಯ ಸರಿ ಇರಲಿಲ್ಲ. ಋಣಾನುಬಂಧ ತೀರಿತು. ಬೇಡದ ಬಾಂಧವ್ಯದಲ್ಲಿ ನರಳಾಡುವ ಬದಲು ಆಚೆ ಬಂದರಾಯಿತು ಅಂತನಿಸಿ, ಆ ಬಂಧನದಿಂದಾಚೆ ಬಂದೆ.. ಹೀಗೆ ನಿರ್ಧಾರವನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆ.</p>.<p>ನೋವುಣ್ಣುವ ಇಂಥ ಪರಿಸ್ಥಿತಿಗಳಲ್ಲಿ ಏಳು ಹಂತಗಳಿವೆ ಎಂದು ಮಾನಸಿಕ ಸ್ವಾಸ್ಥ್ಯಕ್ಕಾಗಿ ಇರುವ ‘ಹೆಲ್ತ್ಲೈನ್’ ಜರ್ನಲ್ ಪಟ್ಟಿ ಮಾಡಿದೆ. ನೋವಿನ ತೀವ್ರತೆ ಕಡಿಮೆಯಾಗುವ ಹಂತಗಳನ್ನೂ ಇಲ್ಲಿ ವಿವರಿಸಲಾಗಿದೆ.</p>.<p>ನಿರಾಕರಣ, ಅಪರಾಧಿ ಭಾವ, ನಿರ್ಲಕ್ಷ್ಯ ಹಾಗೂ ಸ್ವಸಮರ್ಥನೆಯನ್ನೇ ಬಿಂಬಿಸುವ ಇವೆಲ್ಲವೂ ವಿದಾಯದ ದುಃಖವನ್ನು ಭರಿಸುವ ಅಥವಾ ಸ್ವೀಕರಿಸುವ ವಿವಿಧ ಭಾವಗಳಾಗಿವೆ.</p>.<p>ಆದರೆ ಇವೆಲ್ಲವೂ ಬಾಂಧವ್ಯಗಳಲ್ಲಿ ಬಿರುಕು ಬಂದಾಗಲೇ ಒಂದು ಸ್ಥಿತಿಗೆ ವಾದ ಮನದೊಳಗೆ ಪೊರೆಯುತ್ತಿರುತ್ತೇವೆ. ಈ ಮೇಲಿನ ಯಾವುದೇ ಭಾವಗಳಾದರೂ ನಮ್ಮಲ್ಲಿ ಮೊದಲೇ ಕಾಣಿಸಿಕೊಂಡಿರುತ್ತವೆ. ಉಳಿದಂತೆ ಒಂದು ವಿದಾಯದ ಸುತ್ತ ಈ ಭಾವಗಳಲ್ಲಿ ಯಾವುದು ಮೇಲುಗೈ ಪಡೆಯುತ್ತದೆಯೋ ಅದೇ ಪರಿಣಾಮವಾಗಿ ಕಾಣಿಸಿಕೊಳ್ಳುತ್ತದೆ.</p>.<p>ಬಯಸಿಯೂ, ಬಯಸದೆಯೂ ವಿದಾಯ ಅನಿವಾರ್ಯವಾದಾಗ ಸಾಮಾನ್ಯವಾಗಿ ಇಂಥ ಭಾವಗಳು ನಮ್ಮನ್ನು ಕಾಡತೊಡಗುತ್ತವೆ. ಈ ಸಮರ್ಥನೆಗಳು ಆ ಕ್ಷಣದ ಪ್ರತಿಕ್ರಿಯೆಗಳಾಗಿರುವುದಿಲ್ಲ. ಇವೆಲ್ಲವೂ ನಮ್ಮೊಳಗಿನ ಸಮಾಧಾನವನ್ನು ಕಾಣುವ ಮಾರ್ಗಗಳಾಗಿರುತ್ತವೆ. ಮಾನಸಿಕವಾಗಿ ಸದೃಢವಾಗಿರುವವರು ಈ ಐದು ವಿಧಗಳಲ್ಲಿ ಯಾವುದೋ ಒಂದಕ್ಕೆ ಕಟ್ಟು ಬಿದ್ದು ಪರಿಸ್ಥಿತಿಯನ್ನು ಸ್ವೀಕರಿಸುತ್ತಾರೆ.</p>.<p>ಇದು ಕೇವಲ ಬಾಂಧವ್ಯದ ತಂತು ಬೇರ್ಪಟ್ಟಾಗ ಇಂಥ ದುಃಖಕ್ಕೆ ಒಳಗಾಗುವುದಿಲ್ಲ. ಕೆಲಸ ಕಳೆದುಕೊಂಡಾಗ, ದೀರ್ಘಕಾಲದ ಕಾಯಿಲೆಗಳಿಗೆ ಒಳಗಾದಾಗ, ಆತ್ಮೀಯರು ಸಾವನ್ನಪ್ಪಿದಾಗಲೆಲ್ಲ ನಾವು ಇಂಥ ದುಃಖಕ್ಕೆ ಒಳಗಾಗುತ್ತೇವೆ.</p>.<p>ಪ್ರತಿಯೊಂದು ದುಃಖದ ಸನ್ನಿವೇಶಗಳೂ ಏಳುಹಂತಗಳನ್ನು ದಾಟುತ್ತವೆ. ನಾವು ಎಷ್ಟು ಬೇಗ ಈ ಹಂತಗಳನ್ನು ದಾಟುತ್ತೇವೆಯೋ.. ಅಷ್ಟು ಬೇಗ ಬದುಕು ಸರಳವಾಗುತ್ತಲೇ ಹೋಗುತ್ತದೆ.</p>.<p>ಮೊದಲನೆಯದ್ದು ಅಪನಂಬಿಕೆ ಅಥವಾ ಅಲ್ಲಗಳೆಯುವಿಕೆ: ಸದ್ಯಕ್ಕೆ ನನ್ನೊಟ್ಟಿಗೆ ಆಗಿರುವುದು ನನಗಾಗಿ ಅಲ್ಲ. ಇದು ತಾತ್ಕಾಲಿಕ ಬೆಳವಣಿಗೆ. ನನ್ನೊಟ್ಟಿಗೆ ಹೀಗಾಗಲು ಸಾಧ್ಯವೇ ಇಲ್ಲ ಎಂಬಂಥ ನಂಬಿಕೆಗಳನ್ನು ಪೋಷಿಸಿಕೊಂಡು ಬರುವುದು.</p>.<p><strong>* ನೋವು ಮತ್ತು ಅಪರಾಧಿಭಾವ:</strong> ಎಲ್ಲಕ್ಕೂ ನಮ್ಮ ಅಸಾಮರ್ಥ್ಯಗಳೇ ಕಾರಣ, ಎಲ್ಲವೂ ನಮ್ಮಿಂದಾದ ತಪ್ಪುಗಳಿಂದಲೇ ಘಟಿಸಿದೆ ಎಂಬ ಸ್ವಹೀಗಳೆಯುವ ಹಂತ</p>.<p><strong>* ಕೋಪ ಮತ್ತು ಚೌಕಾಶಿ: </strong>ಇವೆರಡೂ ವ್ಯತಿರಿಕ್ತ ಭಾವಗಳು. ಅಗಾಧವಾದ ಕೋಪವನ್ನು ತೋರುವುದು, ಕಿರುಚಾಡುವುದು, ದೇಹದಂಡನೆ ಮಾಡಿಕೊಳ್ಳುವುದು, ಇಲ್ಲವೇ ತೀರ ಆರ್ತ್ರನಾಗಿ ಚೌಕಾಶಿಗಿಳಿಯುವುದು.. ಇಷ್ಟಕ್ಕಾದರೂ ಒಪ್ಪಲಿ ಎಂಬ ಸಮಜಾಯಿಷಿಗಳಿಗೆ ಇಳಿಯುವುದು.</p>.<p><strong>* ಖಿನ್ನತೆ: </strong>ಈ ಹಂತದಲ್ಲಿ ಎಲ್ಲ ಸುಖ ಸಂಭ್ರಮ, ಸಾಮಾಜಿಕ ಆಗುಹೋಗುಗಳಿಂದ ದೂರವಾಗ್ತೀರಿ. ಯಾರನ್ನೂ ದೂರದೆ, ವಿನಾಕಾರಣ ಅಳುವುದು, ಸಿಡುಕುವುದು, ಸುಮ್ಮನಿರುವುದು, ಒಳಗೊಳಗೇ ಕೊರಗುವುದು ಮುಂತಾದ ಲಕ್ಷಣಗಳಿಂದ ಬಳಲುವಿರಿ.</p>.<p><strong>* ಮನೋಭೂಮಿಕೆಯ ಮರುನಿರ್ಮಾಣ: </strong>ಆದದ್ದು ಆಗಿ ಹೋಯಿತು. ಇನ್ನು ಚಿಂತಿಸಿ ಫಲವಿಲ್ಲ. ಇವೆಲ್ಲವನ್ನೂ ಪಾಠ ಎಂದುಕೊಂಡರಾಯಿತು. ಮುಂದೆ ಇಂಥ ಸಂದರ್ಭಗಳು ಮರುಕಳಿಸದಂತೆ ನೋಡಿಕೊಂಡರಾಯಿತು ಎಂಬ ಸ್ವ ಸಮಾಧಾನ.</p>.<p><strong>* ಬದುಕಿನ ಮರುನಿರ್ಮಾಣ: </strong>ಅಶಿಸ್ತಿನಿಂದ, ಸಂಯಮವಿಲ್ಲದೆ, ಏರುಪೇರಾದ ಬದುಕಿನ ಗತಿಯನ್ನು ಒಂದು ವೇಗಕ್ಕೆ ಮರು ಸ್ಥಾಪಿಸುವುದು. ಹಾಗೂ ನೀರ ಹರಿವಿನಂತೆ, ಯಾವುದಕ್ಕೂ ಅಂಟಿಕೊಳ್ಳದೆ ಮುಂದೆ ಸಾಗುತ್ತ ಹೋಗುವುದು.</p>.<p><strong>* ಸ್ವೀಕಾರ: </strong>ಆಗಿದ್ದು ಆಗಿ ಹೋಗಿದೆ. ಜೀವನ ಮುಂದೆ ಸಾಗಬೇಕು. ಭಾವನಾತ್ಮಕ ಭಾರಗಳನ್ನು ಹೊತ್ತು ಸಾಗುವುದರಲ್ಲಿ ಅರ್ಥವಿಲ್ಲ. ಒಂದಷ್ಟು ನೆನಪಿನ ಬುತ್ತಿಯಾಗಿ, ಇನ್ನಷ್ಟು ಅನುಭವದ ಪಾಠವಾಗಿ ಆ ಸನ್ನಿವೇಶಗಳನ್ನು ಸ್ವೀಕರಿಸಿದಾಗ ಜೀವನ ಮುಂದೆ ಸಾಗಲಾರಂಭಿಸುತ್ತದೆ.</p>.<p>ಕೆಲವರು ಮಾತ್ರ ಎಲ್ಲವನ್ನೂ ತಾತ್ಕಾಲಿಕವಾಗಿ ಹೊಂದಿಸಿಕೊಳ್ಳುತ್ತ, ಖಿನ್ನತೆಗೆ ಜಾರತೊಡಗುತ್ತಾರೆ. ಇವರಲ್ಲಿ ಮಾನಸಿಕ ಒತ್ತಡ ಹಾಗೂ ಖಿನ್ನತೆ ಎರಡೂ ಒಟ್ಟೊಟ್ಟಿಗೆ ಕಾಣಸಿಗುತ್ತವೆ. ಮುಂದಿನ ಹಂತಗಳಿಗೆ ಸಾಗುವ ಮುನ್ನವೇ ಈ ಗುಹೆಗಳಲ್ಲಿ, ಸುಳಿಗಳಲ್ಲಿ ಸಿಲುಕಿಕೊಳ್ಳುತ್ತಾರೆ.</p>.<p>ತಮ್ಮ ನೋವು ಯಾರಿಗೂ ಅರ್ಥವಾಗದು ಎಂಬ ಭಾವ ಅವರನ್ನು ಆಳುತ್ತದೆ. ಅಂಥವರು ನೋವಿನ ಸನ್ನಿವೇಶಗಳನ್ನು ನಿಭಾಯಿಸುವುದು ಹೇಗೆ?ಈ ಭಾವತೀವ್ರತೆಗಳನ್ನು ನಿಭಾಯಿಸುವುದು ಹೇಗೆ?</p>.<p>ವಿದಾಯದ ಸನ್ನಿವೇಶಗಳನ್ನು ಅರ್ಥ ಮಾಡಿಕೊಳ್ಳಬೇಕು. ಪರಿಸ್ಥಿತಿಯನ್ನು ಸ್ವೀಕರಿಸಿ, ಒಳಿತಿಗಾಗಿ ಬಯಸುವುದು ದುಃಖವನ್ನು ಒಪ್ಪಿಕೊಂಡಂತೆ.</p>.<p><strong>* ಬಾಂಧವ್ಯದಲ್ಲಿ ಬಿರುಕು ಬಂದಲ್ಲಿ: </strong>ಇದು ಒಳಿತಿನ ನಿರ್ಧಾರವಾಗಿದೆ. ಲಭ್ಯ ಇರುವ ಸಾಧ್ಯತೆಗಳಲ್ಲಿ, ಅವಕಾಶಗಳಲ್ಲಿ ಇದು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಒಪ್ಪಿಕೊಳ್ಳುವ ಮನಃಸ್ಥಿತಿ ನಿರ್ಮಾಣವಾಗುತ್ತದೆ.</p>.<p><strong>* ಕೆಲಸ ಕಳೆದುಕೊಂಡಾಗ:</strong> ನನಗಿದು ಅಂತ್ಯವಲ್ಲ. ಇಲ್ಲಿಂದ ಹೊಸ ದಾರಿಯೊಂದನ್ನು ತುಳಿಯಬೇಕಿದೆ. ಹೊಸ ಆರಂಭಕ್ಕಾಗಿಯೇ ವೃತ್ತಿಜೀವನದಲ್ಲಿ ಈ ತಿರುವು ಬಂದೊದಗಿದೆ.</p>.<p><strong>* ಸಾವಿನಿಂದಾಗಿ ಆತ್ಮೀಯರ ಅಗಲುವಿಕೆ: </strong>ಒಂದಷ್ಟು ದಿನಗಳಾದರೂ ಅವರೊಂದಿಗೆ ಕಳೆಯುವ ಅದೃಷ್ಟ ನನಗಿತ್ತಲ್ಲ. ಈ ಸಾಂಗತ್ಯದ ನೆನಪುಗಳು ಸದಾ ಹಸಿರಾಗಿರುತ್ತವೆ.</p>.<p><strong>* ಸುದೀರ್ಘಕಾಲದ ಕಾಯಿಲೆ: </strong>ನನಗಿದು ಈಗಲೇ ಅರಿವಿಗೆ ಬಂದಿದ್ದು ಒಳಿತಾಯ್ತು. ಉಳಿದಿರುವ ದಿನಗಳಲ್ಲಿ ಬಾಕಿ ಕೆಲಸಗಳನ್ನು ಮುಗಿಸಿಕೊಳ್ಳಬೇಕು. ಕೊನೆಯ ದಿನಗಳನ್ನು ಸಮಾಧಾನದಿಂದ ಕಳೆಯುವಂತಾಗಬೇಕು.</p>.<p>ಹೀಗೆ ಸಮಾಧಾನಿಸಿಕೊಳ್ಳುವ ದಿನಗಳು ಬಂದಾಗ ನೀವು, ನಿಮಗಾದ ದುಃಖವನ್ನು ನಿಭಾಯಿಸುವ ಸ್ಥಿತಿಗೆ ನಿಮ್ಮ ಮನಸನ್ನು ಅಣಿಗೊಳಿಸಿದಂತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>