ಯಕೃತ್ತಿಗಾಗಿ ಹೆಸರು ನೋಂದಾಯಿಸಿದ್ದ ರವೀಂದ್ರ ಅವರು, 3 ತಿಂಗಳಿನಿಂದ ಕಸಿಗಾಗಿ ಕಾಯುತ್ತಿದ್ದರು. ದಾನಿ ಸಿಗದ ಪರಿಣಾಮ ಅವರ ಆರೋಗ್ಯವು ಇನ್ನಷ್ಟು ಹದಗೆಟ್ಟಿತ್ತು. ಕಸಿ ಮಾಡದಿದ್ದಲ್ಲಿ ಅವರ ಜೀವಕ್ಕೆ ಅಪಾಯವಾಗುವ
ಸಾಧ್ಯತೆಗಳಿದ್ದವು. ಜ.8ರಂದು ದಾನಿಯು ದೊರೆತ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಮೂರು ವಾರಗಳು ನಿಗಾದಲ್ಲಿ ಇರಿಸಿದ್ದರು. ಬಳಿಕ ಅವರು ಚೇತರಿಸಿಕೊಂಡ ಕಾರಣ ಮನೆಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆ
ತಿಳಿಸಿದೆ.