<p>‘ನಂಬರು, ನಚ್ಚರು ಬರಿದೆ ಕರೆವರು, ನಂಬಿ ಕರೆದರೆ ಓ ಎನ್ನನೇ ಶಿವನು’ ಎಂದು ಬಸವಣ್ಣನವರು ಹೇಳಿದರೆ, ಇದಕ್ಕೆ ಸಂವಾದಿಯಾಗಿ ‘ನಂಬಿ ಕೆಟ್ಟವರಿಲ್ಲವೋ’ ಎಂದು ದಾಸರು ಹಾಡಿದರು. ದೇವರು ಮತ್ತು ಭಕ್ತರ ಮಧ್ಯೆಯ ನಂಬಿಕೆ ಕುರಿತಾದ ಮಾತುಗಳು ಇವು. ಜೀವನದ ಎಲ್ಲ ಕ್ಷೇತ್ರಗಳಲ್ಲಿ ನಂಬಿಕೆ ಕೆಲಸ ಮಾಡುತ್ತದೆ, ಮಾಡಬೇಕು.</p>.<p>ರಾಷ್ಟ್ರಕವಿ ಕುವೆಂಪುರವರು ‘ರವಿಗಿಲ್ಲದ ಭಯ, ಶಶಿಗಿಲ್ಲದ ಭಯ’ ಎನ್ನುತ್ತ ಅಣುಶ್ರದ್ಧೆಯನಿಡು, ನಿನ್ನನ್ನೇ ನೀ ನೈವೇದ್ಯ ನೀಡು ಇಡು ಎಂದು ‘ತೇನ ವಿನಾ’ ಕವನದಲ್ಲಿ ಹಾಡಿದ್ದಾರೆ. ಅಣುಶ್ರದ್ಧೆ ಎರಡು ರೀತಿಯ ಅರ್ಥವನ್ನು ಕೊಡುತ್ತದೆ. ಅಣುರೇಣುತೃಣಕಾಷ್ಠಗಳಲ್ಲೂ ಈ ಚೈತನ್ಯರೂಪಿ ಇದ್ದಾನೆಂದು ನಂಬು ಎಂಬರ್ಥ ಒಂದಾದರೆ, ಈ ಪ್ರಕೃತಿಯಲ್ಲಿ ರವಿ, ಶಶಿ, ತಾರಾಗಣಕ್ಕೆ ಇಲ್ಲದ ಭಯ ಮನುಷ್ಯನಿಗೆ ಮಾತ್ರ ಏಕೆ, ಒಂದು ಅಣುವಿನಷ್ಟಾದರೂ ಶ್ರದ್ಧೆ ಇಡು ಎಂದು ಹೇಳುತ್ತಾರೆ.</p>.<p>ಯಾವುದೋ ಒಂದು ತತ್ವದಲ್ಲಿ, ಚೈತನ್ಯದಲ್ಲಿ ಅಚಲವಾದ ನಂಬಿಕೆ ಇಟ್ಟಾಗ ಅದು ನಿಶ್ಚಿತವಾಗಿ ಸಹಾಯ ಮಾಡಿದ ಘಟನೆ, ಕಥೆಗಳನ್ನು ನಾವು ಕೇಳಿದ್ದೇವೆ. ಅಡವಿಯ ದಾರಿಯಲ್ಲಿ ಸಂಚರಿಸಲು ಭಯಪಡುವ ಬಾಲಕನಿಗೆ, ಅವನಮ್ಮ ನಿನಗೆ ಭಯವಾದಾಗ ನಿನ್ನಣ್ಣ ಗೋಪಾಲನನ್ನು ಕರೆ ಸಹಾಯ ಮಾಡುತ್ತಾನೆ – ಎಂದ ಕುವೆಂಪುರವರ ಬಾಲಗೋಪಾಲಕಥೆ ‘ನಂಬಿಕೆ’ಯನ್ನು ಕುರಿತಾದದ್ದೇ ತಾನೇ? ಗೋವುಗಳನ್ನು ಕಾಯುವ ಗೋಪಾಲ ಬಂದು ಆ ಬಾಲಕನಿಗೆ ಸಹಾಯ ಮಾಡಿದ್ದು ಆ ತಾಯಿ-ಮಗನ ನಂಬಿಕೆಯ ಫಲ ತಾನೆ?</p>.<p>ವೈದ್ಯ-ರೋಗಿಯ ಸಂಬಂಧದಲ್ಲೂ ನಂಬಿಕೆ ಬಹುಮುಖ್ಯ ಪಾತ್ರ ವಹಿಸುತ್ತದೆ. ವೈದ್ಯರ ಹಸ್ತಗುಣ ಅಂದರೆ ಕೈಗುಣ ಎನ್ನುವುದು ನಂಬಿಕೆಗೆ ಸೇರಿದ ವಿಚಾರ ತಾನೆ? ವೈದ್ಯರಲ್ಲಿ ಸಂಪೂರ್ಣ ನಂಬಿಕೆ ಇದ್ದಾಗ ರೋಗಿ ಬೇಗ ಗುಣಮುಖನಾಗುತ್ತಾನೆ, ಈ ವೈದ್ಯರಿಗೆ ಏನು ಗೊತ್ತಿದೆಯೋ ಇಲ್ಲವೋ, ಮಾತ್ರೆ ಸರಿ ಕೊಟ್ಟರೋ ಇಲ್ಲವೋ, ಡೋಸೇಜ್ ಹೆಚ್ಚಾಯಿತೋ, ಕಡಿಮೆ ಆಯಿತೋ ಎಂದು ನಾನಾ ರೀತಿ ಅಪನಂಬಿಕೆಯಲ್ಲಿ ಬಳಲುವವನಿಗೆ ರೋಗ ಗುಣವಾಗುವುದು ಕಷ್ಟ. ಜೀವನದಲ್ಲಿ ಏನೇ ಕಷ್ಟ ಬಂದರೂ ಜೀವನಶ್ರದ್ಧೆಯಿಂದ ಬದುಕಿ ಬಾಳಿದ-ಬಾಳುವ ಹಿರಿಯರಿದ್ದಾರೆ. ಸಣ್ಣ-ಪುಟ್ಟ ವಿಫಲತೆಗೆ ಹೆದರಿ ತಮ್ಮಲ್ಲೇ ತಾವು ನಂಬಿಕೆ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಯುವ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಆಗಬೇಕಾಗಿದೆ.</p>.<p>ಗಂಡ-ಹೆಂಡತಿಯಲ್ಲಿ ಪರಸ್ಪರ ನಂಬಿಕೆ-ಗೌರವಗಳಿದ್ದಾಗ ಮಾತ್ರ ದಾಂಪತ್ಯ ಸುಗಮವಾಗಿರಲು ಸಾಧ್ಯ. ಮಕ್ಕಳ ಮೇಲೆ ತಂದೆ-ತಾಯಿಗೆ ನಂಬಿಕೆ ಬೇಕು. ಅದರಂತೆ ಮಕ್ಕಳು ಆ ನಂಬಿಕೆ ಉಳಿಸಿಕೊಳ್ಳುವಂತೆ ತಮ್ಮ ನಡವಳಿಕೆ-ವಿದ್ಯಾಭ್ಯಾಸ ಮಾಡಬೇಕು. ನಂಬಿಕೆಗೆ ಅರ್ಹರಾದ ಕೆಲಸಗಾರರನ್ನು ಪ್ರೀತಿ-ವಿಶ್ವಾಸದಿಂದ ನೋಡಿಕೊಳ್ಳಬೇಕಾದದ್ದು ಯಜಮಾನರ ಕರ್ತವ್ಯ. ಯಜಮಾನ ತನ್ನಲ್ಲಿ ಇಟ್ಟ ನಂಬಿಕೆಗಾಗಿ ಪ್ರಾಣತ್ಯಾಗ ಮಾಡಿದ ಆಳುಗಳು, ಪ್ರಾಣಿಗಳು ಇವೆ. ನಾಯಿ ತನ್ನ ಈ ‘ನಂಬಿಕೆ’ಯ ಗುಣಕ್ಕಾಗಿಯೇ ಪ್ರಸಿದ್ಧವಾಗಿದೆ.</p>.<p>ಜನಸಾಮಾನ್ಯರು ನಂಬಿಕೆ-ಮೂಢನಂಬಿಕೆಯ ಮಧ್ಯದ ಅಂತರವನ್ನು ಅರಿತಿರಬೇಕು. ಒಬ್ಬರ ನಂಬಿಕೆ ಇನ್ನೊಬ್ಬರಿಗೆ ಮೂಢನಂಬಿಕೆಯಾಗಿ ಕಾಣಬಹುದು. ಮುಗ್ಧರನ್ನು ಶೋಷಣೆ ಮಾಡುವ ಮೂಢನಂಬಿಕೆಗಳು ನಮಗೆ ಬೇಡ. ಜೀವನಶ್ರದ್ಧೆ ಮೂಡಿಸುವ ನಂಬಿಕೆಗಳು ಇರಲಿ. ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವ ನಂಬಿಕೆಗಳಿಂದ ವ್ಯಕ್ತಿಗೂ, ಸಮಾಜಕ್ಕೂ ಹಿತ. ಅಂಥ ನಂಬಿಕೆಗಳು ನಮ್ಮಲ್ಲಿ ಮೂಡಲಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನಂಬರು, ನಚ್ಚರು ಬರಿದೆ ಕರೆವರು, ನಂಬಿ ಕರೆದರೆ ಓ ಎನ್ನನೇ ಶಿವನು’ ಎಂದು ಬಸವಣ್ಣನವರು ಹೇಳಿದರೆ, ಇದಕ್ಕೆ ಸಂವಾದಿಯಾಗಿ ‘ನಂಬಿ ಕೆಟ್ಟವರಿಲ್ಲವೋ’ ಎಂದು ದಾಸರು ಹಾಡಿದರು. ದೇವರು ಮತ್ತು ಭಕ್ತರ ಮಧ್ಯೆಯ ನಂಬಿಕೆ ಕುರಿತಾದ ಮಾತುಗಳು ಇವು. ಜೀವನದ ಎಲ್ಲ ಕ್ಷೇತ್ರಗಳಲ್ಲಿ ನಂಬಿಕೆ ಕೆಲಸ ಮಾಡುತ್ತದೆ, ಮಾಡಬೇಕು.</p>.<p>ರಾಷ್ಟ್ರಕವಿ ಕುವೆಂಪುರವರು ‘ರವಿಗಿಲ್ಲದ ಭಯ, ಶಶಿಗಿಲ್ಲದ ಭಯ’ ಎನ್ನುತ್ತ ಅಣುಶ್ರದ್ಧೆಯನಿಡು, ನಿನ್ನನ್ನೇ ನೀ ನೈವೇದ್ಯ ನೀಡು ಇಡು ಎಂದು ‘ತೇನ ವಿನಾ’ ಕವನದಲ್ಲಿ ಹಾಡಿದ್ದಾರೆ. ಅಣುಶ್ರದ್ಧೆ ಎರಡು ರೀತಿಯ ಅರ್ಥವನ್ನು ಕೊಡುತ್ತದೆ. ಅಣುರೇಣುತೃಣಕಾಷ್ಠಗಳಲ್ಲೂ ಈ ಚೈತನ್ಯರೂಪಿ ಇದ್ದಾನೆಂದು ನಂಬು ಎಂಬರ್ಥ ಒಂದಾದರೆ, ಈ ಪ್ರಕೃತಿಯಲ್ಲಿ ರವಿ, ಶಶಿ, ತಾರಾಗಣಕ್ಕೆ ಇಲ್ಲದ ಭಯ ಮನುಷ್ಯನಿಗೆ ಮಾತ್ರ ಏಕೆ, ಒಂದು ಅಣುವಿನಷ್ಟಾದರೂ ಶ್ರದ್ಧೆ ಇಡು ಎಂದು ಹೇಳುತ್ತಾರೆ.</p>.<p>ಯಾವುದೋ ಒಂದು ತತ್ವದಲ್ಲಿ, ಚೈತನ್ಯದಲ್ಲಿ ಅಚಲವಾದ ನಂಬಿಕೆ ಇಟ್ಟಾಗ ಅದು ನಿಶ್ಚಿತವಾಗಿ ಸಹಾಯ ಮಾಡಿದ ಘಟನೆ, ಕಥೆಗಳನ್ನು ನಾವು ಕೇಳಿದ್ದೇವೆ. ಅಡವಿಯ ದಾರಿಯಲ್ಲಿ ಸಂಚರಿಸಲು ಭಯಪಡುವ ಬಾಲಕನಿಗೆ, ಅವನಮ್ಮ ನಿನಗೆ ಭಯವಾದಾಗ ನಿನ್ನಣ್ಣ ಗೋಪಾಲನನ್ನು ಕರೆ ಸಹಾಯ ಮಾಡುತ್ತಾನೆ – ಎಂದ ಕುವೆಂಪುರವರ ಬಾಲಗೋಪಾಲಕಥೆ ‘ನಂಬಿಕೆ’ಯನ್ನು ಕುರಿತಾದದ್ದೇ ತಾನೇ? ಗೋವುಗಳನ್ನು ಕಾಯುವ ಗೋಪಾಲ ಬಂದು ಆ ಬಾಲಕನಿಗೆ ಸಹಾಯ ಮಾಡಿದ್ದು ಆ ತಾಯಿ-ಮಗನ ನಂಬಿಕೆಯ ಫಲ ತಾನೆ?</p>.<p>ವೈದ್ಯ-ರೋಗಿಯ ಸಂಬಂಧದಲ್ಲೂ ನಂಬಿಕೆ ಬಹುಮುಖ್ಯ ಪಾತ್ರ ವಹಿಸುತ್ತದೆ. ವೈದ್ಯರ ಹಸ್ತಗುಣ ಅಂದರೆ ಕೈಗುಣ ಎನ್ನುವುದು ನಂಬಿಕೆಗೆ ಸೇರಿದ ವಿಚಾರ ತಾನೆ? ವೈದ್ಯರಲ್ಲಿ ಸಂಪೂರ್ಣ ನಂಬಿಕೆ ಇದ್ದಾಗ ರೋಗಿ ಬೇಗ ಗುಣಮುಖನಾಗುತ್ತಾನೆ, ಈ ವೈದ್ಯರಿಗೆ ಏನು ಗೊತ್ತಿದೆಯೋ ಇಲ್ಲವೋ, ಮಾತ್ರೆ ಸರಿ ಕೊಟ್ಟರೋ ಇಲ್ಲವೋ, ಡೋಸೇಜ್ ಹೆಚ್ಚಾಯಿತೋ, ಕಡಿಮೆ ಆಯಿತೋ ಎಂದು ನಾನಾ ರೀತಿ ಅಪನಂಬಿಕೆಯಲ್ಲಿ ಬಳಲುವವನಿಗೆ ರೋಗ ಗುಣವಾಗುವುದು ಕಷ್ಟ. ಜೀವನದಲ್ಲಿ ಏನೇ ಕಷ್ಟ ಬಂದರೂ ಜೀವನಶ್ರದ್ಧೆಯಿಂದ ಬದುಕಿ ಬಾಳಿದ-ಬಾಳುವ ಹಿರಿಯರಿದ್ದಾರೆ. ಸಣ್ಣ-ಪುಟ್ಟ ವಿಫಲತೆಗೆ ಹೆದರಿ ತಮ್ಮಲ್ಲೇ ತಾವು ನಂಬಿಕೆ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಯುವ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಆಗಬೇಕಾಗಿದೆ.</p>.<p>ಗಂಡ-ಹೆಂಡತಿಯಲ್ಲಿ ಪರಸ್ಪರ ನಂಬಿಕೆ-ಗೌರವಗಳಿದ್ದಾಗ ಮಾತ್ರ ದಾಂಪತ್ಯ ಸುಗಮವಾಗಿರಲು ಸಾಧ್ಯ. ಮಕ್ಕಳ ಮೇಲೆ ತಂದೆ-ತಾಯಿಗೆ ನಂಬಿಕೆ ಬೇಕು. ಅದರಂತೆ ಮಕ್ಕಳು ಆ ನಂಬಿಕೆ ಉಳಿಸಿಕೊಳ್ಳುವಂತೆ ತಮ್ಮ ನಡವಳಿಕೆ-ವಿದ್ಯಾಭ್ಯಾಸ ಮಾಡಬೇಕು. ನಂಬಿಕೆಗೆ ಅರ್ಹರಾದ ಕೆಲಸಗಾರರನ್ನು ಪ್ರೀತಿ-ವಿಶ್ವಾಸದಿಂದ ನೋಡಿಕೊಳ್ಳಬೇಕಾದದ್ದು ಯಜಮಾನರ ಕರ್ತವ್ಯ. ಯಜಮಾನ ತನ್ನಲ್ಲಿ ಇಟ್ಟ ನಂಬಿಕೆಗಾಗಿ ಪ್ರಾಣತ್ಯಾಗ ಮಾಡಿದ ಆಳುಗಳು, ಪ್ರಾಣಿಗಳು ಇವೆ. ನಾಯಿ ತನ್ನ ಈ ‘ನಂಬಿಕೆ’ಯ ಗುಣಕ್ಕಾಗಿಯೇ ಪ್ರಸಿದ್ಧವಾಗಿದೆ.</p>.<p>ಜನಸಾಮಾನ್ಯರು ನಂಬಿಕೆ-ಮೂಢನಂಬಿಕೆಯ ಮಧ್ಯದ ಅಂತರವನ್ನು ಅರಿತಿರಬೇಕು. ಒಬ್ಬರ ನಂಬಿಕೆ ಇನ್ನೊಬ್ಬರಿಗೆ ಮೂಢನಂಬಿಕೆಯಾಗಿ ಕಾಣಬಹುದು. ಮುಗ್ಧರನ್ನು ಶೋಷಣೆ ಮಾಡುವ ಮೂಢನಂಬಿಕೆಗಳು ನಮಗೆ ಬೇಡ. ಜೀವನಶ್ರದ್ಧೆ ಮೂಡಿಸುವ ನಂಬಿಕೆಗಳು ಇರಲಿ. ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವ ನಂಬಿಕೆಗಳಿಂದ ವ್ಯಕ್ತಿಗೂ, ಸಮಾಜಕ್ಕೂ ಹಿತ. ಅಂಥ ನಂಬಿಕೆಗಳು ನಮ್ಮಲ್ಲಿ ಮೂಡಲಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>