ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಹೋಟೆಲ್ ಉದ್ಯಮಿಗಳಿಗೆ ಈ ದಿನ ಲಾಭದಾಯಕವಾಗಿರುತ್ತದೆ
Published 13 ಮಾರ್ಚ್ 2024, 4:34 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬಹಳ ದಿನಗಳಿಂದ ನಿಮ್ಮ ಮೇಲಧಿಕಾರಿಗಳು ಬಯಸಿದ ಹೆಚ್ಚಿನ ಜವಾಬ್ದಾರಿ ಉತ್ತಮವಾಗಿ ನಿಭಾಯಿಸಿದ ಕಾರಣ ಅತಿಯಾಗಿ ಮೆಚ್ಚುವರು. ಸಹಚರರಿಗೆ ನಂಬಿಕೆ ವಿಶ್ವಾಸ ಅಧಿಕವಾಗುವುದು.
ವೃಷಭ
ನೀರಿಗೆ ಸಂಬಂಧಿಸಿದ ಸರ್ಕಾರದ ಬೃಹತ್ ಯೋಜನೆಗಳ ಗುತ್ತಿಗೆ ಕೆಲಸಗಳನ್ನು ಪಾಲುದಾರಿಕೆಯಲ್ಲಿ ಪಡೆಯುವುದಕ್ಕೆ ಪ್ರಯತ್ನ ಮಾಡಿ. ದೇವರು ನಿಮ್ಮ ಕೈ ಬಿಡಲಿಲ್ಲವೆಂಬ ವಿಚಾರ ಅನುಭವಕ್ಕೆ ಬರಲಿದೆ.
ಮಿಥುನ
ಸಮಸ್ಯೆಗೆ ಮೂಲ ಏನೆಂಬುದನ್ನು ಕಂಡುಕೊಂಡರೆ ಪರಿಸ್ಥಿತಿ ಸುಧಾರಿ ಸುವುದು. ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಾಗ ಭವಿಷ್ಯದ ದೃಷ್ಟಿ ಇರಲಿ. ತರಕಾರಿ ಮತ್ತು ಹಣ್ಣು ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರ ಇರಲಿದೆ.
ಕರ್ಕಾಟಕ
ಸ್ನೇಹಿತರ ಹಾಗೂ ಕುಟುಂಬದವರ ಸಲಹೆ ಮೇರೆಗೆ ಉತ್ತಮ ಬದಲಾವಣೆಗಳನ್ನು ಮಾಡಿಕೊಳ್ಳುವಿರಿ. ನಿಧಾನಗತಿಯಲ್ಲಿ ತಂದೆಯವರ ಆರೋಗ್ಯ ಉತ್ತಮವಾಗಲಿದೆ. ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ.
ಸಿಂಹ
ಆಲೋಚನೆಯ ಹೊಸ ಕಾರ್ಯಗಳು ಸ್ವಲ್ಪ ತಡವಾಗಿ ಪ್ರಾರಂಭವಾದರೂ ಸ್ವಲ್ಪ ಸಮಯ ಕಳೆದ ಹಾಗೇ ಎಲ್ಲವೂ ನಿಮ್ಮ ಆಸೆಗೆ ತಕ್ಕಂತೆ ನಡೆಯಲಿದೆ. ಯಾವುದೆ ರೀತಿಯ ಅಡೆತಡೆ, ತೊಂದರೆ ಇರಲಾರದು.
ಕನ್ಯಾ
ದಿನಸಿ ವರ್ತಕರಿಗೆ ಉತ್ತಮ ಲಾಭ ಪ್ರಾಪ್ತಿಯಾಗಲಿದೆ. ಸಂಜೆಯ ಸಮಯದಲ್ಲಿ ಆಲಸ್ಯವಾಗಬಹುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಯಗಳು ಕಾಣಲಿದೆ.
ತುಲಾ
ನೂತನ ವಸ್ತ್ರ ಖರೀದಿಯ ಯೋಗವಿದೆ. ಆರೋಗ್ಯದ ವಿಚಾರವಾಗಿ ದೇಹ ಪ್ರಕೃತಿಗೆ ಅನುಗುಣವಾಗಿ ವೈದ್ಯರು ನೀಡಿರುವ ಸಲಹೆಯನ್ನು ಚಾಚೂ ತಪ್ಪದೆ ಆಚರಿಸಿ. ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿದರೆ ಉತ್ತಮ.
ವೃಶ್ಚಿಕ
ಪಾಲುದಾರಿಕೆ ವಿಚಾರವಾಗಿ ನೀಡುವ ಆಶ್ವಾಸನೆ ಸಹೋದರ ವರ್ಗದಲ್ಲಿ ಬಹಳ ಸಂತಸ ಉಂಟಾಗುವುದು. ಅಭಿಪ್ರಾಯಗಳಿಗೆ ಕುಟುಂಬದವರು ಸಮ್ಮತಿಯನ್ನು ಕೊಡಲಿದ್ದಾರೆ. ಗಣಪತಿಯನ್ನು ಆರಾಧಿಸಿ.
ಧನು
ಸಂಶೋಧನಾ ಕಾರ್ಯಗಳಲ್ಲಿ ಆಸಕ್ತಿ ವೃದ್ಧಿಯಾಗುವುದು ಅಥವಾ ಸಂಶೋಧನಾ ವೃತ್ತಿಯಲ್ಲಿರುವವರಿಗೆ ಈ ದಿನ ಅಧ್ಯಯನಕ್ಕೆ ಸುಸಮಯ. ಸುಳ್ಳು ನುಡಿಯುವ ಅಭ್ಯಾಸವನ್ನು ಕಡಿಮೆಮಾಡಿಕೊಳ್ಳಿರಿ.
ಮಕರ
ಎರಡು ದೋಣಿಗೆ ಕಾಲು ಹಾಕಿರುವ ನಿಮ್ಮ ಜೀವನ ಶೈಲಿಯಿಂದ ಸಮಸ್ಯೆಗಳು ಎದುರಾಗಬಹುದು. ಹೋಟೆಲ್ ಉದ್ಯಮಿಗಳಿಗೆ ಮತ್ತು ಅಡುಗೆ ವೃತ್ತಿಯವರಿಗೆ ಈ ದಿನ ಲಾಭದಾಯಕವಾಗಿರುತ್ತದೆ.
ಕುಂಭ
ಏಕಾಂಗಿಯಾಗಿರುವವರಿಗೆ ಸಂಗಾತಿ ಸಿಗುವ ಲಕ್ಷಣಗಳಿವೆ. ಬಿರುಕು ಬಿಟ್ಟಿರುವ ಸಂಬಂಧಗಳನ್ನು ಸರಿಪಡಿಸುವ ಆಲೋಚನೆಯ ಮಾರ್ಗಕ್ಕೆ ಅಡೆತಡೆ ಉಂಟಾಗಬಹುದು. ಪ್ರಯಾಣ ಯೋಗವಿದೆ.
ಮೀನ
ಬಿಡುವಿಲ್ಲದ ವೃತ್ತಿ ಜೀವನವನ್ನು ಒಂದೆರೆಡು ದಿನಗಳ ಮಟ್ಟಿಗೆ ವಿಶ್ರಾಂತಿ ಜೀವನವಾಗಿ ಬದಲಾಯಿಸಿಕೊಳ್ಳುವುದರಿಂದ ನೆಮ್ಮದಿ ಮೂಡುತ್ತದೆ. ನೆನಪಿನಶಕ್ತಿ ವೃದ್ಧಿಗೆ ಶ್ರೀ ಶಾರದೆಯಲ್ಲಿ ಪ್ರಾರ್ಥಿಸಿ.