ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ವಾರ ಭವಿಷ್ಯ15-10-2023ರಿಂದ 21-10-2023 ರವರೆಗೆ
Published 15 ಅಕ್ಟೋಬರ್ 2023, 0:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
( ಅಶ್ವಿನಿ ಭರಣಿ ಕೃತಿಕ 1) ಹಿಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವಿರಿ. ಸಮೂಹದ ಮಧ್ಯೆ ಜನರ ನಡುವೆ ಬಹಳ ಉತ್ತಮವಾಗಿ ಮಾತನಾಡಿ ಅವರ ಸಹಕಾರವನ್ನು ಪಡೆಯಿರಿ. ಗುರುಹಿರಿಯರ ಮನವನ್ನು ಗೆಲ್ಲುವ ಪ್ರಯತ್ನ ಮಾಡುವಿರಿ. ಭಾಷಣಕಾರರಿಗೆ ಉತ್ತಮ ವೇದಿಕೆಗಳು ದೊರೆಯುವ ಸಾಧ್ಯತೆ ಇದೆ. ಸ್ಥಿರಾಸ್ತಿ ಮಾಡಲು ಹೆಚ್ಚುಶ್ರಮ ವಹಿಸಬೇಕು. ಫ್ಯಾಶನ್ ಡಿಸೈನ್ ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ದೊರಕುತ್ತದೆ, ರಕ್ತ ಸಂಬಂಧಿ ತೊಂದರೆಗಳಿರುವವರು ಚಿಕಿತ್ಸೆಗೆ ಹೋಗುವುದು ಉತ್ತಮ. ಅವಿವಾಹಿತರಿಗೆ ವಿವಾಹ ಒದಗುವ ಸಂದರ್ಭಗಳಿವೆ. ಹಣದ ಒಳಹರಿವು ಅವಶ್ಯಕತೆಯನ್ನು ಪೂರೈಸುತ್ತದೆ. ಕೃಷಿಕರಿಗೆ ಕೃಷಿ ವಸ್ತುಗಳಿಂದ ಆದಾಯವು ಬರುವ ಸಾಧ್ಯತೆಗಳಿವೆ. ಹಿರಿಯರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸೂಕ್ತ ಮಾರ್ಗದರ್ಶನ ದೊರೆಯುತ್ತದೆ. ವಿದೇಶಕ್ಕೆ ಹೋಗಲ ಪ್ರಯತ್ನ ಪಡುತ್ತಿರುವವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ವೃಷಭ
(ಕೃತಿಕಾ2 3 4 ರೋಹಿಣಿ ಮೃಗಶಿರಾ1 2) ಕೇಶಾಲಂಕಾರದ ಕಡೆಗೆ ಹೆಚ್ಚು ಗಮನ ಕೊಡುವಿರಿ. ಬಹಳ ಜಾಣ್ಮೆಯಿಂದ ಮಾತನಾಡಿ ನಿಮ್ಮ ಮೇಲಿನದೂರನ್ನು ಬೇರೆಯವರ ಮೇಲೆಹೊರಿಸುವಿರಿ. ಗೃಹ ಸ್ವಚ್ಛತೆಯಕಡೆಗೆ ಹೆಚ್ಚಿನಆದ್ಯತೆ ನೀಡುವಿರಿ. ಆಸ್ತಿ ಕೊಳ್ಳುವುದಕ್ಕಾಗಿ ಸಂಗಾತಿಯು ಕೂಡಿಟ್ಟ ಹಣವನ್ನು ಕೊಡುವರು. ಲೆಕ್ಕಪರಿಶೋಧಕರಿಗೆ ಹೆಚ್ಚಿನ ಕೆಲಸ ದೊರೆತು ಆದಾಯವು ಹೆಚ್ಚುತ್ತದೆ. ನಿಮ್ಮ ಮಕ್ಕಳ ಬಗ್ಗೆ ಸಂತೋಷದ ಮಾತುಗಳನ್ನು ಬಂಧುಗಳಿಂದ ಕೇಳಿ ಬರುತ್ತದೆ. ಆಯುರ್ವೇದ ಅಥವಾ ನಾಟಿ ಔಷಧಿಗಳಿಂದ ಹಳೆಯ ಕಾಯಿಲೆಗಳು ಗುಣವಾಗುತ್ತವೆ. ನಿಮ್ಮ ಕೃಷಿಯ ಆಸಕ್ತಿಗೆ ಸಂಗಾತಿ ಕೈಜೋಡಿಸುವರು. ರೈತರಿಗೆ ಕೃಷಿಯಿಂದ ಬರುವ ಆದಾಯ ಕಡಿಮೆಯಾಗುವ ಸಾಧ್ಯತೆ ಇದೆ. ವಿದೇಶಿ ವ್ಯವಹಾರಗಳನ್ನು ಮಾಡುವ ವರು ಬಹಳ ಎಚ್ಚರವಾಗಿರುವುದು ಒಳ್ಳೆಯದು, ಹಣ ಮುಳುಗುವ ಸಾಧ್ಯತೆ ಇದೆ. ಧನಾದಾಯವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ.
ಮಿಥುನ
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3) ವಾರದ ಆರಂಭ ವ್ಯವಹಾರಿಕವಾಗಿ ಪ್ರಾರಂಭವಾಗುತ್ತದೆ. ನಿರೀಕ್ಷಿತ ಮೂಲಗಳಿಂದ ದನದಾಯವು ಬರುವುದು ನಿಧಾನವಾಗಬಹುದು. ಜಾಣ್ಮೆಯಿಂದ ಮಾತನಾಡಿ ಸಹೋದ್ಯೋಗಿಗಳಿಂದ ಕೆಲಸ ಮಾಡಿಸಿಕೊಳ್ಳುವಿರಿ. ಸ್ಥಿರಾಸ್ತಿ ಮಾಡುವ ವಿಚಾರದಲ್ಲಿ ಪ್ರಗತಿಯನ್ನು ಕಂಡರೂ ಸಹ ದಾಖಲೆ ವಿಚಾರದಲ್ಲಿ ಎಚ್ಚರವಾಗಿರಿ. ರೈತರಿಗೆ ಅವರು ಬೆಳೆದ ಬೆಳೆಗಳಿಂದ ಆದಾಯ ಬರುವ ಸಾಧ್ಯತೆ ಇದೆ. ಕೃಷಿಗಾಗಿ ಹೆಚ್ಚು ಹಣ ಹೂಡಿಕೆ ಮಾಡುವಿರಿ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಸಂಗೀತಗಾರರಿಗೆ ನಿರೀಕ್ಷಿತ ಆದಾಯವಿಲ್ಲ ದಿದ್ದರೂ ನಷ್ಟವಿಲ್ಲ. ಧನದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ದೀರ್ಘಕಾಲಿನ ಕೆಲವು ಕಾಯಿಲೆಗಳು ಔಷಧದಿಂದ ಪರಿಹಾರವಾಗಬಹುದು. ವಿವಾಹ ಅಪೇಕ್ಷಿತರಿಗೆ ಸಂಬಂಧ ಒದಗುವ ಸಾಧ್ಯತೆ ಇದೆ.
ಕರ್ಕಾಟಕ
( ಪುನರ್ವಸು 4 ಪುಷ್ಯ ಆಶ್ಲೇಷ) ವಿದೇಶದಲ್ಲಿದುಡಿಯು ತ್ತಿರುವವರಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ. ವಿದೇಶದಲ್ಲಿ ಓದು ಮುಗಿಸಿ ಕೆಲಸ ಹುಡುಕುತ್ತಿರುವವರಿಗೆ ಕೆಲಸ ಸಿಗುವ ಸಾಧ್ಯತೆ ಇದೆ. ಹಿರಿಯರ ಆಸ್ತಿಯಲ್ಲಿ ನಿಮಗೆ ಪಾಲು ಬರುವ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಪ್ರಗತಿಯನ್ನು ಕಾಣ ಬಹುದು. ಹಣದ ಒಳಹರಿವು ನಿರೀಕ್ಷಿತ ಮಟ್ಟದಲ್ಲಿರುತ್ತದೆ. ಹಿರಿಯರ ಕೃಷಿಯ ಭೂಮಿಯನ್ನು ಕೊಂಡು ಕೊಳ್ಳಬಹುದು. ಕೃಷಿಯಿಂದ ಸ್ವಲ್ಪಮಟ್ಟಿನ ಆದಾಯ ವಿರುತ್ತದೆ. ಉದ್ಯೋಗದಲ್ಲಿ ಆದಾಯ ಹೆಚ್ಚಾ ದರೂ ಸಹ ಅಷ್ಟೇ ಖರ್ಚು ಇರುತ್ತದೆ. ಸಂಗಾತಿಯ ನಡುವೆ ಕಾವೇರಿದ ವಾತಾವರಣ ಇರುತ್ತದೆ. ಹಿರಿಯರ ಸಹಾಯದಿಂದ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು. ಕಚೇರಿಯ ಕೆಲಸದ ಮೇಲೆ ದೂರದ ಊರಿಗೆ ಅಥವಾ ವಿದೇಶಕ್ಕೆ ಹೋಗಿ ಬರುವ ಯೋಗವಿದೆ.
ಸಿಂಹ
( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) ವ್ಯಾಪಾರ ವ್ಯವಹಾರಗಳಲ್ಲಿ ಖಂಡಿತ ಲಾಭವಿರುತ್ತದೆ. ಅದಿರು ಮಾರಾಟಗಾರರಿಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಬಹುದು. ಸರ್ಕಾರಿ ಕಚೇರಿಯ ವ್ಯವಹಾರಗಳಲ್ಲಿ ನಿಧಾನ ಗತಿಯನ್ನು ಕಾಣಬಹುದು. ಸಮಯಕ್ಕೆ ತಕ್ಕಂತೆ ವರ್ತಿಸಿ ನಿಮ್ಮ ಕೆಲಸ ಆಗುವಂತೆ ನೋಡಿಕೊಳ್ಳುವಿರಿ. ಸಾಹಸ ಕಲಾವಿದರಗಳಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ.ಸರ್ಕಾರಿ ಸಹಾಯಧನಗಳು ರಾಗವಾಗಿಸಿಗುತ್ತವೆ.ನೃತ್ಯಪಟುಗಳಿಗೆ ಹೆಚ್ಚು ಅವಕಾಶ ದೊರೆಯುವ ಸಾಧ್ಯತೆ ಇದೆ. ಸರ್ಕಾರದ ಜೊತೆ ಮಾಡಿ ಕೊಂಡ ವ್ಯವಹಾರ ಒಪ್ಪಂದಗಳಲ್ಲಿ ಮುಂಗಡದ ಹಣ ದೊರೆಯುವ ಸಾಧ್ಯತೆ ಇದೆ. ಅಧ್ಯಾಪಕರಿಗೆ ಉತ್ತಮ ಹೆಸರು ಮತ್ತು ಗೌರವ ದೊರೆ ಯುವ ಸಾಧ್ಯತೆ ಇದೆ. ಸಂಗಾತಿಯ ಜಿಪುಣತನ ಸ್ವಲ್ಪ ಬೇಸರ ತರಿಸಬಹುದು. ಬಾಕಿ ಬರಬೇಕಾದ ಸಾಲದ ಹಣವನ್ನು ಈಗ ವಸೂಲು ಮಾಡಬಹುದು.
ಕನ್ಯಾ
( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2) ಅತಿಯಾದ ಆತ್ಮಭಿಮಾನ ನಿಮ್ಮಲ್ಲಿ ಇರುತ್ತದೆ. ಈ ಅಭಿಮಾನದಿಂದ ಆಡುವ ಮಾತುಗಳು ನಿಮಗೆ ತಿರುಗುಬಾಣವಾಗುವ ಸಾಧ್ಯತೆಗಳಿವೆ. ಹಣದ ಒಳ ಹರಿವು ಸಾಮಾನ್ಯಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆ ಸಾಕಷ್ಟು ವ್ಯಾವಹಾರಿಕವಾಗಿರುತ್ತದೆ. ಸಂಗಾತಿಯ ಜೊತೆ ಸ್ವಲ್ಪಮಟ್ಟಿನ ಮುಸುಕಿನ ಗುದ್ದಾಟಗಳಿರುತ್ತವೆ. ವಿದ್ಯಾರ್ಥಿಗಳು ಹೆಚ್ಚು ಶ್ರಮ ಹಾಕಿ ಓದಲೇ ಬೇಕಾದ ಪರಿಸ್ಥಿತಿ ಇದೆ. ಸಾಲ ತೀರಿಸಬೇಕಾದವರು ಸಾಲ ಕೊಟ್ಟವರ ಬಳಿ ತೀರಿಸಲು ಕಾಲಾವಕಾಶ ಕೇಳಬೇಕಾ ಗುತ್ತದೆ. ಆಮದು ಮತ್ತು ರಫ್ತುಮಾಡುವವರಿಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಸಂಗಾತಿಯ ಆದಾಯಕ್ಕಿಂತಲೂ ಖರ್ಚು ಹೆಚ್ಚಾಗಬಹುದು. ಬಂಧುಗಳಿಂದ ಸಿಗುವಸಹಾಯಗಳು ಕಡಿಮೆಯಾಗಬಹುದು. ವೃತ್ತಿಯಲ್ಲಿ ಸಹೋದ್ಯೋಗಿಗಳೊಡನೆ ಯಾವುದೇ ಸಂಘರ್ಷ ಬೇಡ.
ತುಲಾ
( ಚಿತ್ತಾ 3 4 ಸ್ವಾತಿ ವಿಶಾಖ 1 2 3) ಇತರರ ಮೇಲೆ ಅತಿಯಾದ ಕೋಪ ಒಳ್ಳೆಯದಲ್ಲ. ಈ ಕೋಪ ಕೆಲವುಆಪ್ತರನ್ನು ನಿಮ್ಮಿಂದ ದೂರ ಮಾಡುತ್ತದೆ. ಕೃಷಿಯಿಂದ ಆದಾಯ ಬರುತ್ತದೆ. ಹೈನುಗಾರಿಕೆ ಮಾಡುವವರಿಗೂ ಸಹ ಸ್ವಲ್ಪಮಟ್ಟಿನ ಆದಾಯವಿರುತ್ತದೆ. ಸಂಗಾತಿಯು ನಿಮ್ಮ ಕೆಲಸ ಕಾರ್ಯಗಳನ್ನು ಟೀಕೆ ಮಾಡಬಹುದು. ರೈತರಲ್ಲೇ ಸಾಂಪ್ರದಾಯಿಕ ಕೃಷಿ ಮಾಡುವವರಿಗೆ ಹೆಚ್ಚು ಬೆಲೆ ಬರುತ್ತದೆ. ಕೆಲವು ರಾಜಕೀಯ ಮುಖಂಡ ರುಗಳಿಗೆ ರಾಜಕೀಯ ಪಕ್ಷಗಳಲ್ಲಿ ಸ್ಥಾನಮಾನ ಈಗ ದೊರಕುವಸಾಧ್ಯತೆ ಇದೆ. ಸಂಗಾತಿಯಆರೋಗ್ಯಕ್ಕಾಗಿ ಸ್ವಲ್ಪ ಹಣ ಮೀಸಲು ಇಡಬೇಕಾದೀತು. ವಿದೇಶಕ್ಕೆ ಆಹಾರ ವಸ್ತು ಗಳನ್ನು ಹಣ್ಣು ಹಂಪಲುಗಳನ್ನು ರಫ್ತು ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ಕೆಲವರಿಗೆ ವಿದೇಶದಲ್ಲಿರುವ ಸಂಗಾತಿಯ ಬಳಿಗೆ ಹೋಗಿ ಸೇರಿ ಕೊಳ್ಳುವ ಅವಕಾಶ ವಿದೆ. ಸ್ತ್ರೀಯರ ಸಿದ್ಧ ಉಡುಪು ತಯಾರಕರಿಗೆ ಉತ್ತಮ ವ್ಯವಹಾರವಿರುತ್ತದೆ.
ವೃಶ್ಚಿಕ
( ವಿಶಾಖಾ 4 ಅನುರಾಧ ಜೇಷ್ಠ) ಅನಾಸಕ್ತಿಯಿಂದ ಕೆಲಸ ಕಾರ್ಯಗಳಲ್ಲಿ ನಿಧಾನಗತಿ ಆವರಿಸಬಹುದು. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಕೃಷಿ ವಿಜ್ಞಾನವನ್ನು ಓದುತ್ತಿ ರುವವರಿಗೆ ಹೆಚ್ಚಿನ ಅನುಕೂಲತೆ ದೊರೆಯುತ್ತವೆ. ರಾಜಕೀಯ ಮುಖಂಡರೆಂದು ಜನರಿಗೆ ಹೇಳಿಕೊಂಡು ಓಡಾಡುತ್ತಿರುವ ಅವರ ಕೆಲವರ ಬಣ್ಣ ಬಯಲಾಗು ತ್ತದೆ. ವಿದ್ಯಾರ್ಥಿಗಳು ಯಾಸಕ್ಕಾಗಿ ಅಭ್ಯಾಸಕ್ಕಾಗಿ ಹೆಚ್ಚಿನ ಶ್ರಮ ಹಾಕಲೇಬೇಕಾದ ಅನಿವಾರ್ಯತೆ ಇರು ತ್ತದೆ. ಲೇವಾದೇವಿ ವ್ಯವಹಾರಗಳು ಖಂಡಿತ ಬೇಡ. ಕೀಲು ನೋವು ಇರುವವರು ವೈದ್ಯಕೀಯ ತಪಾಸಣೆ ಮಾಡಿಸುವುದು ಮುಖ್ಯ. ಸಂಗಾತಿಯ ಆದಾಯದಲ್ಲಿ ಸ್ವಲ್ಪ ಹೆಚ್ಚಳವನ್ನು ಕಾಣಬಹುದು. ಅನಿರೀಕ್ಷಿತವಾಗಿ ಸರ್ಕಾರಿ ವ್ಯವಹಾರಗಳಲ್ಲಿ ಲಾಭ ಬರುವ ಸಾಧ್ಯತೆ ಇದೆ. ತಾಯಿಯಿಂದ ನಿಮಗೆ ಹೆಚ್ಚಿನ ಸಹಕಾರ ದೊರೆಯುತ್ತದೆ.
ಧನು
( ಮೂಲ ಪೂರ್ವಾಷಾಢ ಉತ್ತರಾಷಾಢ 1 ) ಆತ್ಮವಿಶ್ವಾಸದಿಂದ ಮಾಡಿದ ಕೆಲಸಗಳಲ್ಲಿ ಜಯ ವಿರುತ್ತದೆ. ಧನಾದಾಯವು ಮಂದಗತಿಯಲ್ಲಿ ರುತ್ತದೆ. ನಿಮ್ಮ ಹಿತ ಶತ್ರುಗಳನ್ನು ನಿಗ್ರಹಿಸಲು ನೀವು ಬಳಸುವತಂತ್ರ ಬಹಳ ಪರಿಣಾಮಕಾರಿಯಾಗಿರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ರೀತಿಯ ಯಶಸ್ಸು ಇಲ್ಲದೇ ಸಾಮಾನ್ಯಯಶಸ್ಸು ಇರುತ್ತದೆ. ಕೃಷಿಉಪಕರಣಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ಲಾಭವಿರುತ್ತದೆ. ಬಹಳದಿನಗಳಿಂದ ಅನಾರೋಗ ಪೀಡಿತರಾಗಿದ್ದವರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಉದ್ಯೋಗ ಹುಡುಕುತ್ತಿದ್ದ ಸಂಗಾತಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಕೃಷಿಕರಿಗೆ ನಿರೀಕ್ಷಿತ ಮಟ್ಟದ ಲಾಭ ಬರುವ ಸಾಧ್ಯತೆ ಇದೆ. ಗೃಹಲಂಕಾರ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ವ್ಯವಹಾರ ಹೆಚ್ಚಾಗುತ್ತದೆ. ಸರ್ಕಾರಿ ವೃತ್ತಿಯಲ್ಲಿರುವವರಿಗೆ ಅಭಿವೃದ್ಧಿ ಹೆಚ್ಚುತ್ತದೆ.
ಮಕರ
( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2) ಕೆಲಸ ಮಾಡುವಾಗ ಬಹಳ ಶ್ರದ್ದೆಯನ್ನು ತೋರುವಿರಿ ಇದು ನಿಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದು ಒಳಿತಾಗುತ್ತದೆ. ಮಾತನಾಡುವಾಗ ಎಚ್ಚರಿಕೆ ಇರಲಿ.ಯಾವುದೇ ಆಸ್ತಿಕೊಳ್ಳುವಾಗ ಅದರ ದಾಖಲೆಯ ಪರಿಶೀಲನೆಯು ಸರಿಯಾಗಿನಡೆಯಲಿ. ವಾಹನಗಳನ್ನು ದುರಸ್ತಿ ಮಾಡುವವರಿಗೆ ಬಿಡುವಿಲ್ಲದ ಕೆಲಸದೊರೆತು ಆದಾಯಹೆಚ್ಚುತ್ತದೆ. ಯಂತ್ರೋಪಕರ ಣಗಳ ಬಿಡಿ ಭಾಗಗಳನ್ನು ಮಾರಾಟ ಮಾಡುವವರಿಗೆ ಆದಾಯ ಹೆಚ್ಚುತ್ತದೆ.ಧನಾದಾಯವು ಮಂದಗತಿಯ ಲ್ಲಿರುತ್ತದೆ. ಮಕ್ಕಳ ನಡವಳಿಕೆಗೆ ಬಗ್ಗೆ ಗಮನಿಸುವುದು ಬಹಳ ಮುಖ್ಯ. ನಿಮ್ಮ ಪ್ರೇಮಕ್ಕೆ ತಾಯಿಯು ಸಮ್ಮತಿ ಯನ್ನು ಸೂಚಿಸುವರು. ಲೇವಾದೇವಿ ವ್ಯವಹಾರಗಳು ಅಷ್ಟುಶ್ರೇಯಸ್ಸನ್ನು ತರುವುದಿಲ್ಲ. ಸ್ತ್ರೀಯರುನಡೆಸುವ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಇರುತ್ತದೆ. ಆರೋಗ್ಯ ದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು.
ಕುಂಭ
( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3) ಹಳ್ಳಿಯ ಜೀವನವನ್ನು ನಡೆಸುವ ಆಸಕ್ತಿ ಹೆಚ್ಚಾಗುತ್ತದೆ. ಕೃಷಿಯ ಬಗ್ಗೆ ಹೆಚ್ಚು ಹಲವು ಮೂಡುತ್ತದೆ. ಧನಾದಾಯವು ಮಂದಗತಿಯಲ್ಲಿ ಇರುತ್ತದೆ. ಖರ್ಚು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಹೊಸ ವಾಹನ ಮಾರಾಟಗಾರರ ವ್ಯವಹಾರಗಳು ವೃದ್ಧಿಸಿ ಆದಾಯ ಹೆಚ್ಚಾಗುತ್ತದೆ. ಸಂಗಾತಿಗೆ ತವರು ಮನೆಯಿಂದ ಅಮೂಲ್ಯ ಉಡುಗೊರೆ ಬರುವ ಸಂದರ್ಭ ವಿದೆ. ಯುವಕರ ಪ್ರೀತಿ ಪ್ರೇಮಗಳು ಸುಖಾಂತವಾಗುವುದಿಲ್ಲ. ಮಕ್ಕಳ,ವಿಷಯದಲ್ಲಿ ಶುಭ ವಾರ್ತೆಗಳನ್ನು ಕೇಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಕಾನೂನು ತೊಡಕುಗಳು ಎದುರಾದರೂ ನಂತರ ಬಗೆ ಹರಿಯುತ್ತವೆ. ರೈತರಿಗೆ ಕೃಷಿಉತ್ಪಾದನೆಗಳಿಂದ ಹೆಚ್ಚು ಆದಾಯ ಬರುವಸಾಧ್ಯತೆ ಇದೆ. ರಾಜಕೀಯ ಧುರೀಣ ರಿಗೆ ಬಂದಅವಕಾಶಗಳನ್ನು ಬಳಸಿಕೊಳ್ಳುವ ಜಾಣತನ ಬರುತ್ತದೆ.
ಮೀನ
( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ) ಎಲ್ಲರ ಮೇಲೆ ನಿಮ್ಮ ಪ್ರಭಾವವನ್ನು ಬೀರಲು ಯತ್ನಿಸುವಿರಿ. ಶೀತಬಾಧೆಗಳು ಹೆಚ್ಚು ಕಾಡಬಹುದು. ಹಣದ ಒಳಹರಿವು ಮಧ್ಯಮಗತಿಯಲ್ಲಿದ್ದು ಖರ್ಚು ಕಡಿಮೆ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. . ವಿದ್ಯಾರ್ಥಿಗಳು ತಮ್ಮಫಲಿತಾಂಶಕ್ಕಾಗಿ ಹಾಕುವ ಶ್ರಮ ದಿಂದ ಹೆಚ್ಚು ಉಪಯೋಗವಾಗುತ್ತದೆ. ಪ್ರಸೂತಿ ತಜ್ಞರಿಗೆ ಹೆಚ್ಚು ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ಸರ್ಕಾರಿ ಸಂಸ್ಥೆಗಳ ಜೊತೆ ನಡೆಸುವ ವ್ಯವಹಾರಗಳಲ್ಲಿ ಲಾಭವಿರುತ್ತದೆ. ವೃತ್ತಿಯ ಸ್ಥಳದಲ್ಲಿ ಗೊಂದಲಮಯ ವಾತಾವರಣವಿದ್ದರೂ ಸಹ ನಂತರ ಸರಿಯಾಗುತ್ತದೆ. ದಿನಸಿ ವ್ಯಾಪಾರಿಗಳಿಗೆ ವ್ಯಾಪಾರ ವಿಸ್ತರಿಸಿ ಲಾಭ ಹೆಚ್ಚುತ್ತದೆ. ಬೆಳ್ಳಿಯ ಅಲಂಕಾರಿಕ ವಸ್ತುಗಳನ್ನು ತಯಾರಿಸುವವರೆಗೆ ಬೇಡಿಕೆ ಹೆಚ್ಚುತ್ತದೆ. ವಿದೇಶಿ ಭಾಷಾ ಬೋಧಕರಿಗೆ ಹೆಚ್ಚು ಶಿಷ್ಯರು ದೊರಕುವ ಸಂದರ್ಭವಿದೆ. ಗಣಿ ಉದ್ಯಮನವರಿಗೆ ಲಾಭ ಕಡಿಮೆ ಆಗಬಹುದು .