ಹಂಪಿ ಉತ್ಸವದ ಪ್ರಯುಕ್ತ ವಿರುಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ಶುಕ್ರವಾರ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಲಾಶಯಗಳಲ್ಲಿ ನೀರಿಲ್ಲದೇ ರೈತರು ಕಣ್ಣೀರು ಹಾಕುತ್ತಿರುವ ಸಂದರ್ಭದಲ್ಲಿ ಉತ್ಸವ ಬೇಕಿರಲಿಲ್ಲ. ರೈತರು ಸುಖದಲ್ಲಿ ಇಲ್ಲದಿರುವಾಗ, ರಾಜ ಕೂಡ ಸುಖದಲ್ಲಿ ಇರಬಾರದು ಎಂಬುದು ನೃಪತುಂಗನ ಆಶಯವಾಗಿತ್ತು’ ಎಂದರು.