<p><strong>ನವದೆಹಲಿ</strong>: ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಸ್ಮಾರ್ಟ್ ಬ್ಲ್ಯಾಕ್ಬೋರ್ಡ್, ಸ್ಮಾರ್ಟ್ ತರಗತಿ ಮತ್ತಿತರ ಆಧುನಿಕ ಸೌಲಭ್ಯಗಳಿಗೆ ಅವುಗಳದ್ದೇ ಆದ ಮಹತ್ವವಿದೆ. ಆದರೆ ಸ್ಮಾರ್ಟ್ ಶಿಕ್ಷಕರು ಅದೆಲ್ಲಕ್ಕಿಂತ ಮುಖ್ಯ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಅಭಿಪ್ರಾಯಪಟ್ಟರು.</p>.<p>ತಾವು ಶಿಕ್ಷಕಿಯಾಗಿದ್ದ ಅವಧಿಯನ್ನು ಸ್ಮರಿಸಿದ ಅವರು, ‘ಅದು ಅತ್ಯಂತ ಸುಂದರ ಮತ್ತು ಅರ್ಥಪೂರ್ಣ ಸಮಯ’ ಎಂದು ವರ್ಣಿಸಿದರು.</p>.<p>ವಿಜ್ಞಾನ ಭವನದಲ್ಲಿ ನಡೆದ ‘ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮುರ್ಮು ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.</p>.<p>ನಂತರ ಮಾತನಾಡಿದ ಅವರು, ‘ಸ್ಮಾರ್ಟ್ ಶಿಕ್ಷಕರು ವಿದ್ಯಾರ್ಥಿಗಳ ಉನ್ನತಿಗೆ ಏನು ಅಗತ್ಯವಿದೆ ಎಂದು ತಿಳಿದುಕೊಂಡಿರುತ್ತಾರೆ. ಪ್ರೀತಿ ಮತ್ತು ಸಂವೇದನಾಶೀಲತೆಯಿಂದ ಪರಿಣಾಮಕಾರಿಯಾಗಿ ಮಕ್ಕಳಿಗೆ ಕಲಿಸುತ್ತಾರೆ. ಸಮಾಜ ಮತ್ತು ರಾಷ್ಟ್ರದ ಅಗತ್ಯಕ್ಕೆ ತಕ್ಕಂತಹ ವಿದ್ಯಾರ್ಥಿಗಳನ್ನು ರೂಪಿಸುತ್ತಾರೆ’ ಎಂದು ಹೇಳಿದರು.</p>.<p><strong>ಮುರ್ಮು ಹೇಳಿದ್ದು...</strong></p><ul><li><p>ಕೇವಲ ಸ್ಪರ್ಧೆ, ಪುಸ್ತಕ ಜ್ಞಾನದಲ್ಲಿ ಆಸಕ್ತಿ ಹೊಂದಿರುವ ಮತ್ತು ಸ್ವಾರ್ಥ ಇರುವ ವಿದ್ಯಾರ್ಥಿಗಳಿಗಿಂತ ಸಂವೇದನಾಶೀಲ, ಜವಾಬ್ದಾರಿಯುತ ಮತ್ತು ಸಮರ್ಪಣಾ ಭಾವವಿರುವ ವಿದ್ಯಾರ್ಥಿಗಳೇ ಉತ್ತಮ</p></li><li><p>ಬಡತನದ ಹಿನ್ನೆಲೆ ಇರುವ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಪ್ರಗತಿಯ ಉತ್ತುಂಗಕ್ಕೆ ಏರಬಹುದು</p></li><li><p>ಅಕ್ಷರ ಕಲಿಸಿದ ಶಿಕ್ಷಕರನ್ನು ಜೀವನದುದ್ದಕ್ಕೂ ಸ್ಮರಿಸುವುದೇ ವಿದ್ಯಾರ್ಥಿಗಳು ಶಿಕ್ಷಕರಿಗೆ ನೀಡುವ ಬಹುದೊಡ್ಡ ಕೊಡುಗೆ</p></li><li><p>ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತವನ್ನು ಜಾಗತಿಕ ಜ್ಞಾನದ ಸೂಪರ್ ಪವರ್ ದೇಶವನ್ನಾಗಿಸುವ ಗುರಿ ಹೊಂದಿದೆ</p></li></ul>.<h2><strong>ಯಾರ್ಯಾರಿಗೆ ಪ್ರಶಸ್ತಿ?</strong></h2><p>ಆಂಧ್ರದ ಮೈಲವರಂ ಡಾ. ಲಕಿರೆಡ್ಡಿ ಹನಿಮಿರೆಡ್ಡಿ ಸರ್ಕಾರಿ ಪದವಿ ಕಾಲೇಜಿನ ತೆಲುಗು ವಿಭಾಗದ ಎಂ. ದೇವಾನಂದ ಕುಮಾರ್ ಅವರು ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರು. ತಮ್ಮ ನವೀನ ಬೋಧನಾ ಕ್ರಮಕ್ಕಾಗಿ ಅವರಿಗೆ ಪ್ರಶಸ್ತಿ ಲಭಿಸಿದೆ.</p><p>ದೇವಾನಂದ ಅವರು ತಾಳೆ ಗರಿ ಬಳಸಿ ಹಸ್ತಪ್ರತಿ ರಚಿಸಿದ್ದಾರೆ ಮತ್ತು ಕಲಿಕೆ ನಿರ್ವಹಣಾ ವ್ಯವಸ್ಥೆಗಾಗಿ (ಎಲ್ಎಂಸಿ) ಶೈಕ್ಷಣಿಕ ವಿಡಿಯೊಗಳನ್ನು ಮಾಡಿದ್ದಾರೆ. </p><p>ಅರುಣಾಚಲ ಪ್ರದೇಶದ ರಾಜೀವ್ ಗಾಂಧಿ ಕೇಂದ್ರೀಯ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಪ್ರೊಶಾಂತೋ ಕೆ.ಆರ್. ಸಹಾ ಅವರಿಗೂ ಈ ಪ್ರಶಸ್ತಿ ದೊರೆತಿದೆ. ವಿಧಿವಿಜ್ಞಾನ ಮನೋವಿಜ್ಞಾನ ಮತ್ತು ನರವಿಜ್ಞಾನದಲ್ಲಿ ಪರಿಣತಿ ಹೊಂದಿರುವ ಅವರು 14 ವರ್ಷಗಳಿಗೂ ಹೆಚ್ಚು ಕಾಲ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ನರವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಿದ್ದಾರೆ ಮತ್ತು ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಬೆಂಬಲ ನೀಡಿದ್ದಾರೆ.</p><p>ಪ್ರಶಸ್ತಿ ಪ್ರದಾನಕ್ಕಿಂತ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಸ್ಮಾರ್ಟ್ ಬ್ಲ್ಯಾಕ್ಬೋರ್ಡ್, ಸ್ಮಾರ್ಟ್ ತರಗತಿ ಮತ್ತಿತರ ಆಧುನಿಕ ಸೌಲಭ್ಯಗಳಿಗೆ ಅವುಗಳದ್ದೇ ಆದ ಮಹತ್ವವಿದೆ. ಆದರೆ ಸ್ಮಾರ್ಟ್ ಶಿಕ್ಷಕರು ಅದೆಲ್ಲಕ್ಕಿಂತ ಮುಖ್ಯ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಅಭಿಪ್ರಾಯಪಟ್ಟರು.</p>.<p>ತಾವು ಶಿಕ್ಷಕಿಯಾಗಿದ್ದ ಅವಧಿಯನ್ನು ಸ್ಮರಿಸಿದ ಅವರು, ‘ಅದು ಅತ್ಯಂತ ಸುಂದರ ಮತ್ತು ಅರ್ಥಪೂರ್ಣ ಸಮಯ’ ಎಂದು ವರ್ಣಿಸಿದರು.</p>.<p>ವಿಜ್ಞಾನ ಭವನದಲ್ಲಿ ನಡೆದ ‘ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮುರ್ಮು ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.</p>.<p>ನಂತರ ಮಾತನಾಡಿದ ಅವರು, ‘ಸ್ಮಾರ್ಟ್ ಶಿಕ್ಷಕರು ವಿದ್ಯಾರ್ಥಿಗಳ ಉನ್ನತಿಗೆ ಏನು ಅಗತ್ಯವಿದೆ ಎಂದು ತಿಳಿದುಕೊಂಡಿರುತ್ತಾರೆ. ಪ್ರೀತಿ ಮತ್ತು ಸಂವೇದನಾಶೀಲತೆಯಿಂದ ಪರಿಣಾಮಕಾರಿಯಾಗಿ ಮಕ್ಕಳಿಗೆ ಕಲಿಸುತ್ತಾರೆ. ಸಮಾಜ ಮತ್ತು ರಾಷ್ಟ್ರದ ಅಗತ್ಯಕ್ಕೆ ತಕ್ಕಂತಹ ವಿದ್ಯಾರ್ಥಿಗಳನ್ನು ರೂಪಿಸುತ್ತಾರೆ’ ಎಂದು ಹೇಳಿದರು.</p>.<p><strong>ಮುರ್ಮು ಹೇಳಿದ್ದು...</strong></p><ul><li><p>ಕೇವಲ ಸ್ಪರ್ಧೆ, ಪುಸ್ತಕ ಜ್ಞಾನದಲ್ಲಿ ಆಸಕ್ತಿ ಹೊಂದಿರುವ ಮತ್ತು ಸ್ವಾರ್ಥ ಇರುವ ವಿದ್ಯಾರ್ಥಿಗಳಿಗಿಂತ ಸಂವೇದನಾಶೀಲ, ಜವಾಬ್ದಾರಿಯುತ ಮತ್ತು ಸಮರ್ಪಣಾ ಭಾವವಿರುವ ವಿದ್ಯಾರ್ಥಿಗಳೇ ಉತ್ತಮ</p></li><li><p>ಬಡತನದ ಹಿನ್ನೆಲೆ ಇರುವ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಪ್ರಗತಿಯ ಉತ್ತುಂಗಕ್ಕೆ ಏರಬಹುದು</p></li><li><p>ಅಕ್ಷರ ಕಲಿಸಿದ ಶಿಕ್ಷಕರನ್ನು ಜೀವನದುದ್ದಕ್ಕೂ ಸ್ಮರಿಸುವುದೇ ವಿದ್ಯಾರ್ಥಿಗಳು ಶಿಕ್ಷಕರಿಗೆ ನೀಡುವ ಬಹುದೊಡ್ಡ ಕೊಡುಗೆ</p></li><li><p>ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತವನ್ನು ಜಾಗತಿಕ ಜ್ಞಾನದ ಸೂಪರ್ ಪವರ್ ದೇಶವನ್ನಾಗಿಸುವ ಗುರಿ ಹೊಂದಿದೆ</p></li></ul>.<h2><strong>ಯಾರ್ಯಾರಿಗೆ ಪ್ರಶಸ್ತಿ?</strong></h2><p>ಆಂಧ್ರದ ಮೈಲವರಂ ಡಾ. ಲಕಿರೆಡ್ಡಿ ಹನಿಮಿರೆಡ್ಡಿ ಸರ್ಕಾರಿ ಪದವಿ ಕಾಲೇಜಿನ ತೆಲುಗು ವಿಭಾಗದ ಎಂ. ದೇವಾನಂದ ಕುಮಾರ್ ಅವರು ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರು. ತಮ್ಮ ನವೀನ ಬೋಧನಾ ಕ್ರಮಕ್ಕಾಗಿ ಅವರಿಗೆ ಪ್ರಶಸ್ತಿ ಲಭಿಸಿದೆ.</p><p>ದೇವಾನಂದ ಅವರು ತಾಳೆ ಗರಿ ಬಳಸಿ ಹಸ್ತಪ್ರತಿ ರಚಿಸಿದ್ದಾರೆ ಮತ್ತು ಕಲಿಕೆ ನಿರ್ವಹಣಾ ವ್ಯವಸ್ಥೆಗಾಗಿ (ಎಲ್ಎಂಸಿ) ಶೈಕ್ಷಣಿಕ ವಿಡಿಯೊಗಳನ್ನು ಮಾಡಿದ್ದಾರೆ. </p><p>ಅರುಣಾಚಲ ಪ್ರದೇಶದ ರಾಜೀವ್ ಗಾಂಧಿ ಕೇಂದ್ರೀಯ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಪ್ರೊಶಾಂತೋ ಕೆ.ಆರ್. ಸಹಾ ಅವರಿಗೂ ಈ ಪ್ರಶಸ್ತಿ ದೊರೆತಿದೆ. ವಿಧಿವಿಜ್ಞಾನ ಮನೋವಿಜ್ಞಾನ ಮತ್ತು ನರವಿಜ್ಞಾನದಲ್ಲಿ ಪರಿಣತಿ ಹೊಂದಿರುವ ಅವರು 14 ವರ್ಷಗಳಿಗೂ ಹೆಚ್ಚು ಕಾಲ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ನರವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಿದ್ದಾರೆ ಮತ್ತು ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಬೆಂಬಲ ನೀಡಿದ್ದಾರೆ.</p><p>ಪ್ರಶಸ್ತಿ ಪ್ರದಾನಕ್ಕಿಂತ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>