<p><strong>ಕೋಟ(ರಾಜಸ್ಥಾನ):</strong> ಮದುವೆಪೂರ್ವ ಹಳದಿ ಕಾರ್ಯಕ್ರಮದ ದಿನ ಹೋಟೆಲ್ ಕೊಠಡಿಯಲ್ಲಿ ವಿದ್ಯುತ್ ತಗುಲಿ 29 ವರ್ಷದ ವರ ಮೃತಪಟ್ಟಿರುವ ಘಟನೆ ರಾಜಸ್ಥಾನದ ಕೋಟ ಜಿಲ್ಲೆಯಲ್ಲಿ ನಡೆದಿದೆ.</p><p>ಮದುವೆಗೆ ಕೆಲವೇ ಗಂಟೆಗಳ ಮುನ್ನ ಈ ಅವಘಡ ಸಂಭವಿಸಿದೆ.</p><p> ಕೋಟ ಜಿಲ್ಲೆಯ ಕೇಶವಪುರದ ನಿವಾಸಿ ಸೂರಜ್ ಸಕ್ಸೇನಾ ಇಂದು ಸಂಜೆ ವಿವಾಹವಾಗಬೇಕಿತ್ತು. ಮದುವೆಪೂರ್ವ ಕಾರ್ಯಕ್ರಮದ ವೇಳೆ ವರ ಈಜುಕೊಳದ ಕಡೆಗೆ ತೆರಳಿದ್ದರು ಎಂದು ಕುಟುಂಬ ತಿಳಿಸಿದೆ.</p><p>ಸೂರಜ್ ಸಕ್ಸೇನಾ ಎಲೆಕ್ಟ್ರಿಕ್ ಕಂಬ ಹಿಡಿದುಕೊಂಡಿದ್ದು, ಕೂಡಲೇ ವಿದ್ಯುತ್ ತಾಗಿದೆ ಎಂದು ನಂತ ಪೊಲೀಸ್ ಠಾಣೆಯ ಠಾಣಾಧಿಕಾರಿ ನಾವಲ್ ಕಿಶೋರ್ ಹೇಳಿದ್ದಾರೆ.</p><p>ಪ್ರಜ್ಞಾಹೀನರಾಗಿದ್ದ ಸೂರಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.</p><p>ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಒಪ್ಪಿಸಲಾಗಿದೆ. </p><p>ಹೋಟೆಲ್ ಆಡಳಿತದ ವಿರುದ್ಧ ಐಪಿಸಿ ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಟ(ರಾಜಸ್ಥಾನ):</strong> ಮದುವೆಪೂರ್ವ ಹಳದಿ ಕಾರ್ಯಕ್ರಮದ ದಿನ ಹೋಟೆಲ್ ಕೊಠಡಿಯಲ್ಲಿ ವಿದ್ಯುತ್ ತಗುಲಿ 29 ವರ್ಷದ ವರ ಮೃತಪಟ್ಟಿರುವ ಘಟನೆ ರಾಜಸ್ಥಾನದ ಕೋಟ ಜಿಲ್ಲೆಯಲ್ಲಿ ನಡೆದಿದೆ.</p><p>ಮದುವೆಗೆ ಕೆಲವೇ ಗಂಟೆಗಳ ಮುನ್ನ ಈ ಅವಘಡ ಸಂಭವಿಸಿದೆ.</p><p> ಕೋಟ ಜಿಲ್ಲೆಯ ಕೇಶವಪುರದ ನಿವಾಸಿ ಸೂರಜ್ ಸಕ್ಸೇನಾ ಇಂದು ಸಂಜೆ ವಿವಾಹವಾಗಬೇಕಿತ್ತು. ಮದುವೆಪೂರ್ವ ಕಾರ್ಯಕ್ರಮದ ವೇಳೆ ವರ ಈಜುಕೊಳದ ಕಡೆಗೆ ತೆರಳಿದ್ದರು ಎಂದು ಕುಟುಂಬ ತಿಳಿಸಿದೆ.</p><p>ಸೂರಜ್ ಸಕ್ಸೇನಾ ಎಲೆಕ್ಟ್ರಿಕ್ ಕಂಬ ಹಿಡಿದುಕೊಂಡಿದ್ದು, ಕೂಡಲೇ ವಿದ್ಯುತ್ ತಾಗಿದೆ ಎಂದು ನಂತ ಪೊಲೀಸ್ ಠಾಣೆಯ ಠಾಣಾಧಿಕಾರಿ ನಾವಲ್ ಕಿಶೋರ್ ಹೇಳಿದ್ದಾರೆ.</p><p>ಪ್ರಜ್ಞಾಹೀನರಾಗಿದ್ದ ಸೂರಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.</p><p>ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಒಪ್ಪಿಸಲಾಗಿದೆ. </p><p>ಹೋಟೆಲ್ ಆಡಳಿತದ ವಿರುದ್ಧ ಐಪಿಸಿ ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>