<p><strong>ಬಿಜ್ನೋರ್ (ಉತ್ತರ ಪ್ರದೇಶ):</strong> ಕಾರ್ಯಕ್ರಮವೊಂದಕ್ಕೆ ಆಹ್ವಾನಿಸುವ ನೆಪದಲ್ಲಿ ನಟ ಮುಷ್ತಾಕ್ ಖಾನ್ ಮತ್ತು ಹಾಸ್ಯನಟ ಸುನೀಲ್ ಪಾಲ್ ಅವರ ಅಪಹರಣದಲ್ಲಿ ಭಾಗಿಯಾಗಿದ್ದ ಗ್ಯಾಂಗ್ನ ಮಾಸ್ಟರ್ ಮೈಂಡ್ ಅನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಭಾನುವಾರ ತಡರಾತ್ರಿ ನಡೆದ ಎನ್ಕೌಂಟರ್ನಲ್ಲಿ ಗಾಯಗೊಂಡಿದ್ದ ಆರೋಪಿ ಲಾವಿ ಪಾಲ್ ಅಲಿಯಾಸ್ ರಾಹುಲ್ ಸೈನಿಯನ್ನು ಬಂಧಿಸಲಾಗಿದೆ.</p><p>ಅಕ್ಟೋಬರ್ 15ರಂದು ಆರೋಪಿಗಳು ರಾಹುಲ್ ಸೈನಿಯಂತೆ ನಟಿಸಿ ನಟ ಮುಷ್ತಾಕ್ ಖಾನ್ ಅವರನ್ನು ಭೇಟಿ ಮಾಡಿ ನವೆಂಬರ್ 20ರಂದು ಮೀರತ್ನಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ₹25,000 ಮುಂಗಡ ಮತ್ತು ವಿಮಾನದ ಟಿಕೆಟ್ ನೀಡಿದ್ದರು.</p><p>‘ನವೆಂಬರ್ 20ರಂದು, ಮುಷ್ತಾಕ್ ಅವರನ್ನು ದೆಹಲಿ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಬಿಜ್ನೋರ್ಗೆ ಕರೆತಂದು, ಅಲ್ಲಿ ಲವಿ ಪಾಲ್ಗೆ ಸೇರಿದ ಚಹಶಿರಿಯಲ್ಲಿರುವ ಮನೆಯಲ್ಲಿ ಬಂಧಿಸಿಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.</p><p>ನವೆಂಬರ್ 21ರಂದು ಅಪಹರಣಕಾರರು ನಿದ್ದೆಯಲ್ಲಿರುವಾಗಿ ಮುಷ್ತಾಕ್ ಅಲ್ಲಿಂದ ತಪ್ಪಿಸಿಕೊಂಡು ಸಮೀಪದ ಮಸೀದಿಯಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿಂದ ಅವರು ಸುರಕ್ಷಿತವಾಗಿ ಮನೆಗೆ ಹಿಂದಿರುಗಿದ್ದಾರೆ. ಬಳಿಕ, ಅವರ ಕಾರ್ಯಕ್ರಮ ನಿರ್ವಾಹಕ ಶಿವಂ ಯಾದವ್ ಪೊಲೀಸರಿಗೆ ದೂರು ನೀಡಿದ್ದರು ಎಂದು ಝಾ ಹೇಳಿದ್ದಾರೆ.</p><p>ಮೀರತ್ನಲ್ಲಿ ಪಾಲ್ ಅವರನ್ನು ಗುರಿಯಾಗಿಸಿಕೊಂಡು ಈ ಗ್ಯಾಂಗ್ ಅದೇ ರೀತಿಯ ಕಾರ್ಯಾಚರಣೆ ನಡೆಸಿತ್ತು ಎಂದೂ ಅವರು ಹೇಳಿದ್ದಾರೆ.</p><p>ಖಾನ್ ಅಪಹರಣದ ವೇಳೆ ಅವರ ಮೊಬೈಲ್ ಫೋನ್ ಬಳಸಿಕೊಂಡು ₹2.5 ಲಕ್ಷ ವಹಿವಾಟು ನಡೆಸಲಾಗಿದೆ. ಈ ಗ್ಯಾಂಗ್ನ 6 ಮಂದಿಯನ್ನು ಬಂಧಿಸಿದ್ದ ಪೊಲೀಸರು, ಲವಿ ಪಾಲ್ ಮತ್ತು ಇತರೆ ಮೂವರಿಗಾಗಿ ಹುಡುಕಾಟ ನಡೆಸುತ್ತಿದ್ದರು.</p> <p>ಮಂದಾವರ್ ರಸ್ತೆಯ ಜೈನ್ ಫಾರ್ಮ್ಗೆ ಲವಿ ಪಾಲ್ ಮತ್ತು ಸೋದರ ಸಂಬಂಧಿ ಶುಭಂ ಬರುವ ಕುರಿತಂತೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಅವರು ಗುಂಡಿನ ದಾಳಿ ನಡೆಸಿದ್ದು, ಠಾಣಾಧಿಕಾರಿ ಉದಯ್ ಪ್ರತಾಪ್ ಬುಲೆಟ್ ಪ್ರೂಫ್ ಜಾಕೆಟ್ಗೆ ಬುಲೆಟ್ ಬಡಿದಿದೆ. ಪೊಲೀಸ್ ಪ್ರತಿದಾಳಿಯಲ್ಲಿ ಲವಿ ಪಾಲ್ಗೆ ಗಾಯಗಳಾಗಿದ್ದವು. ಆದರೆ, ಶುಭಂ ತ್ಪ್ಪಿಸಿಕೊಂಡರು ಎಂದು ಝಾ ಹೇಳಿದ್ದಾರೆ. ಪಾಲ್ ಅವರನ್ನು ಬಂಧಿಸಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.</p><p>ಲವಿ ಪಾಲ್ ಬಳಿ ಒಂದು ಕಂಟ್ರ ಪಿಸ್ತೂಲ್, ಎರಡು ಕಾಟ್ರಿಡ್ಜ್ ಮತ್ತು ₹35,000 ಸುಲಿಗೆ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.</p><p>ಲವಿ ಪಾಲ್ ಬಗ್ಗೆ ಮಾಹಿತಿ ನೀಡಿದವರಿಗೆ ₹25,000 ಬಹುಮಾನ ನೀಡುವುದಾಗಿ ಬಿಜ್ನೋರ್ ಮತ್ತು ಮೀರತ್ ಪೊಲೀಸರು ಘೋಷಿಸಿದ್ದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಜ್ನೋರ್ (ಉತ್ತರ ಪ್ರದೇಶ):</strong> ಕಾರ್ಯಕ್ರಮವೊಂದಕ್ಕೆ ಆಹ್ವಾನಿಸುವ ನೆಪದಲ್ಲಿ ನಟ ಮುಷ್ತಾಕ್ ಖಾನ್ ಮತ್ತು ಹಾಸ್ಯನಟ ಸುನೀಲ್ ಪಾಲ್ ಅವರ ಅಪಹರಣದಲ್ಲಿ ಭಾಗಿಯಾಗಿದ್ದ ಗ್ಯಾಂಗ್ನ ಮಾಸ್ಟರ್ ಮೈಂಡ್ ಅನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಭಾನುವಾರ ತಡರಾತ್ರಿ ನಡೆದ ಎನ್ಕೌಂಟರ್ನಲ್ಲಿ ಗಾಯಗೊಂಡಿದ್ದ ಆರೋಪಿ ಲಾವಿ ಪಾಲ್ ಅಲಿಯಾಸ್ ರಾಹುಲ್ ಸೈನಿಯನ್ನು ಬಂಧಿಸಲಾಗಿದೆ.</p><p>ಅಕ್ಟೋಬರ್ 15ರಂದು ಆರೋಪಿಗಳು ರಾಹುಲ್ ಸೈನಿಯಂತೆ ನಟಿಸಿ ನಟ ಮುಷ್ತಾಕ್ ಖಾನ್ ಅವರನ್ನು ಭೇಟಿ ಮಾಡಿ ನವೆಂಬರ್ 20ರಂದು ಮೀರತ್ನಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ₹25,000 ಮುಂಗಡ ಮತ್ತು ವಿಮಾನದ ಟಿಕೆಟ್ ನೀಡಿದ್ದರು.</p><p>‘ನವೆಂಬರ್ 20ರಂದು, ಮುಷ್ತಾಕ್ ಅವರನ್ನು ದೆಹಲಿ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಬಿಜ್ನೋರ್ಗೆ ಕರೆತಂದು, ಅಲ್ಲಿ ಲವಿ ಪಾಲ್ಗೆ ಸೇರಿದ ಚಹಶಿರಿಯಲ್ಲಿರುವ ಮನೆಯಲ್ಲಿ ಬಂಧಿಸಿಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.</p><p>ನವೆಂಬರ್ 21ರಂದು ಅಪಹರಣಕಾರರು ನಿದ್ದೆಯಲ್ಲಿರುವಾಗಿ ಮುಷ್ತಾಕ್ ಅಲ್ಲಿಂದ ತಪ್ಪಿಸಿಕೊಂಡು ಸಮೀಪದ ಮಸೀದಿಯಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿಂದ ಅವರು ಸುರಕ್ಷಿತವಾಗಿ ಮನೆಗೆ ಹಿಂದಿರುಗಿದ್ದಾರೆ. ಬಳಿಕ, ಅವರ ಕಾರ್ಯಕ್ರಮ ನಿರ್ವಾಹಕ ಶಿವಂ ಯಾದವ್ ಪೊಲೀಸರಿಗೆ ದೂರು ನೀಡಿದ್ದರು ಎಂದು ಝಾ ಹೇಳಿದ್ದಾರೆ.</p><p>ಮೀರತ್ನಲ್ಲಿ ಪಾಲ್ ಅವರನ್ನು ಗುರಿಯಾಗಿಸಿಕೊಂಡು ಈ ಗ್ಯಾಂಗ್ ಅದೇ ರೀತಿಯ ಕಾರ್ಯಾಚರಣೆ ನಡೆಸಿತ್ತು ಎಂದೂ ಅವರು ಹೇಳಿದ್ದಾರೆ.</p><p>ಖಾನ್ ಅಪಹರಣದ ವೇಳೆ ಅವರ ಮೊಬೈಲ್ ಫೋನ್ ಬಳಸಿಕೊಂಡು ₹2.5 ಲಕ್ಷ ವಹಿವಾಟು ನಡೆಸಲಾಗಿದೆ. ಈ ಗ್ಯಾಂಗ್ನ 6 ಮಂದಿಯನ್ನು ಬಂಧಿಸಿದ್ದ ಪೊಲೀಸರು, ಲವಿ ಪಾಲ್ ಮತ್ತು ಇತರೆ ಮೂವರಿಗಾಗಿ ಹುಡುಕಾಟ ನಡೆಸುತ್ತಿದ್ದರು.</p> <p>ಮಂದಾವರ್ ರಸ್ತೆಯ ಜೈನ್ ಫಾರ್ಮ್ಗೆ ಲವಿ ಪಾಲ್ ಮತ್ತು ಸೋದರ ಸಂಬಂಧಿ ಶುಭಂ ಬರುವ ಕುರಿತಂತೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಅವರು ಗುಂಡಿನ ದಾಳಿ ನಡೆಸಿದ್ದು, ಠಾಣಾಧಿಕಾರಿ ಉದಯ್ ಪ್ರತಾಪ್ ಬುಲೆಟ್ ಪ್ರೂಫ್ ಜಾಕೆಟ್ಗೆ ಬುಲೆಟ್ ಬಡಿದಿದೆ. ಪೊಲೀಸ್ ಪ್ರತಿದಾಳಿಯಲ್ಲಿ ಲವಿ ಪಾಲ್ಗೆ ಗಾಯಗಳಾಗಿದ್ದವು. ಆದರೆ, ಶುಭಂ ತ್ಪ್ಪಿಸಿಕೊಂಡರು ಎಂದು ಝಾ ಹೇಳಿದ್ದಾರೆ. ಪಾಲ್ ಅವರನ್ನು ಬಂಧಿಸಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.</p><p>ಲವಿ ಪಾಲ್ ಬಳಿ ಒಂದು ಕಂಟ್ರ ಪಿಸ್ತೂಲ್, ಎರಡು ಕಾಟ್ರಿಡ್ಜ್ ಮತ್ತು ₹35,000 ಸುಲಿಗೆ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.</p><p>ಲವಿ ಪಾಲ್ ಬಗ್ಗೆ ಮಾಹಿತಿ ನೀಡಿದವರಿಗೆ ₹25,000 ಬಹುಮಾನ ನೀಡುವುದಾಗಿ ಬಿಜ್ನೋರ್ ಮತ್ತು ಮೀರತ್ ಪೊಲೀಸರು ಘೋಷಿಸಿದ್ದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>