<p><strong>ಚೆನ್ನೈ</strong>: ‘ತ್ರಿಭಾಷಾ ಸೂತ್ರ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಒಪ್ಪಿಕೊಳ್ಳುವವರೆಗೆ ತಮಿಳುನಾಡಿಗೆ ಅನುದಾನ ಒದಗಿಸಲಾಗದು’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭಾನುವಾರ ಖಂಡಿಸಿದ್ದಾರೆ.</p>.<p>ಇದೊಂದು ‘ಬ್ಲ್ಯಾಕ್ಮೇಲ್’ ತಂತ್ರ’ ಎಂದು ಕಿಡಿಕಾರಿದ್ದಾರೆ.</p>.<p>ವಾರಾಣಸಿಯಲ್ಲಿ ಫೆ.15ರಂದು ಈ ಸಂಬಂಧ ಪ್ರಧಾನ್ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಜೊತೆಗೆ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಸ್ಟಾಲಿನ್ ಅವರು, ‘ಇಂತಹ ಬೆದರಿಕೆಯು ಸ್ವೀಕಾರಾರ್ಹವಲ್ಲ. ತಮಿಳುನಾಡು ಇಂತಹದನ್ನು ಸಹಿಸುವುದೂ ಇಲ್ಲ’ ಎಂದಿದ್ದಾರೆ.</p>.<p>‘ಅನುದಾನ ರಾಜ್ಯದ ಹಕ್ಕು. ಬಾಕಿ ಉಳಿದಿರುವ ಅನುದಾನ ಬಿಡುಗಡೆಗೆ ರಾಜ್ಯ ಒತ್ತಾಯಿಸಿದೆ. ಆದರೆ, ತಮ್ಮ ಸ್ವಂತ ಆಸ್ತಿ ಕೇಳುತ್ತಿದ್ದಾರೆ ಎಂಬರ್ಥದಲ್ಲಿ ಅಹಂನಿಂದ ಕೇಂದ್ರ ಸಚಿವರು ಮಾತನಾಡುತ್ತಿದ್ದಾರೆ’ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.</p>.<p>ತ್ರಿಭಾಷಾ ಸೂತ್ರ ಕಡ್ಡಾಯ ಎಂದು ಉಲ್ಲೇಖಿಸಿರುವ ಸಂವಿಧಾನದ ಅಂಶವನ್ನು ಕೇಂದ್ರ ಸಚಿವರು ತೋರಿಸಲಿ ಎಂದು ಮುಖ್ಯಮಂತ್ರಿ ಸವಾಲು ಹಾಕಿದರು.</p>.<p>ಇದಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು, ‘ಮುಖ್ಯಮಂತ್ರಿ ಅವರ ಮೊಮ್ಮಕ್ಕಳು ಖಾಸಗಿ ಶಾಲೆಯಲ್ಲಿ ಮೂರು ಭಾಷೆ ಕಲಿಯುತ್ತಿರುವಾಗ, ಸರ್ಕಾರಿ ಶಾಲೆಯ ಮಕ್ಕಳು ತಮಿಳು, ಇಂಗ್ಲಿಷ್ ಜೊತೆ ಮತ್ತೊಂದು ಭಾಷೆ ಏಕೆ ಕಲಿಯಬಾರದು’ ಎಂದು ಪ್ರಶ್ನಿಸಿದ್ದಾರೆ.</p>.<p>ತಮಿಳುನಾಡು ರಾಜ್ಯ ಭಾರತದ ಸಂವಿಧಾನದ ಅನುಸಾರ ರಚನೆಯಾಗಿದೆ. ತ್ರಿಭಾಷಾ ಸೂತ್ರ ಎಂಬುದು ಈ ನೆಲದ ಕಾನೂನಾಗಿದೆ ಎಂದು ಪ್ರಧಾನ್ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ‘ತ್ರಿಭಾಷಾ ಸೂತ್ರ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಒಪ್ಪಿಕೊಳ್ಳುವವರೆಗೆ ತಮಿಳುನಾಡಿಗೆ ಅನುದಾನ ಒದಗಿಸಲಾಗದು’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭಾನುವಾರ ಖಂಡಿಸಿದ್ದಾರೆ.</p>.<p>ಇದೊಂದು ‘ಬ್ಲ್ಯಾಕ್ಮೇಲ್’ ತಂತ್ರ’ ಎಂದು ಕಿಡಿಕಾರಿದ್ದಾರೆ.</p>.<p>ವಾರಾಣಸಿಯಲ್ಲಿ ಫೆ.15ರಂದು ಈ ಸಂಬಂಧ ಪ್ರಧಾನ್ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಜೊತೆಗೆ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಸ್ಟಾಲಿನ್ ಅವರು, ‘ಇಂತಹ ಬೆದರಿಕೆಯು ಸ್ವೀಕಾರಾರ್ಹವಲ್ಲ. ತಮಿಳುನಾಡು ಇಂತಹದನ್ನು ಸಹಿಸುವುದೂ ಇಲ್ಲ’ ಎಂದಿದ್ದಾರೆ.</p>.<p>‘ಅನುದಾನ ರಾಜ್ಯದ ಹಕ್ಕು. ಬಾಕಿ ಉಳಿದಿರುವ ಅನುದಾನ ಬಿಡುಗಡೆಗೆ ರಾಜ್ಯ ಒತ್ತಾಯಿಸಿದೆ. ಆದರೆ, ತಮ್ಮ ಸ್ವಂತ ಆಸ್ತಿ ಕೇಳುತ್ತಿದ್ದಾರೆ ಎಂಬರ್ಥದಲ್ಲಿ ಅಹಂನಿಂದ ಕೇಂದ್ರ ಸಚಿವರು ಮಾತನಾಡುತ್ತಿದ್ದಾರೆ’ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.</p>.<p>ತ್ರಿಭಾಷಾ ಸೂತ್ರ ಕಡ್ಡಾಯ ಎಂದು ಉಲ್ಲೇಖಿಸಿರುವ ಸಂವಿಧಾನದ ಅಂಶವನ್ನು ಕೇಂದ್ರ ಸಚಿವರು ತೋರಿಸಲಿ ಎಂದು ಮುಖ್ಯಮಂತ್ರಿ ಸವಾಲು ಹಾಕಿದರು.</p>.<p>ಇದಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು, ‘ಮುಖ್ಯಮಂತ್ರಿ ಅವರ ಮೊಮ್ಮಕ್ಕಳು ಖಾಸಗಿ ಶಾಲೆಯಲ್ಲಿ ಮೂರು ಭಾಷೆ ಕಲಿಯುತ್ತಿರುವಾಗ, ಸರ್ಕಾರಿ ಶಾಲೆಯ ಮಕ್ಕಳು ತಮಿಳು, ಇಂಗ್ಲಿಷ್ ಜೊತೆ ಮತ್ತೊಂದು ಭಾಷೆ ಏಕೆ ಕಲಿಯಬಾರದು’ ಎಂದು ಪ್ರಶ್ನಿಸಿದ್ದಾರೆ.</p>.<p>ತಮಿಳುನಾಡು ರಾಜ್ಯ ಭಾರತದ ಸಂವಿಧಾನದ ಅನುಸಾರ ರಚನೆಯಾಗಿದೆ. ತ್ರಿಭಾಷಾ ಸೂತ್ರ ಎಂಬುದು ಈ ನೆಲದ ಕಾನೂನಾಗಿದೆ ಎಂದು ಪ್ರಧಾನ್ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>