‘ಇದು ಮಳೆಗಾಲ ಪ್ರೇರಿತ ಭೂಕಂಪನ. ಎರಡು–ಮೂರು ತಿಂಗಳು ನಿರಂತರವಾಗಿ ಮಳೆ ಬಿದ್ದಾಗ ಬಿರುಕು ಬಿಟ್ಟ ಬಂಡೆಗಳಲ್ಲಿ ನೀರು ಸಂಗ್ರಹವಾಗುತ್ತದೆ. ಆಗ ಬಂಡೆಯ ರಂಧ್ರಗಳಲ್ಲಿ ಒತ್ತಡವು ಹೆಚ್ಚಾಗುತ್ತದೆ. ಹೀಗಾಗಿ ಭೂಮಿ ಕಂಪಿಸುತ್ತದೆ. ಮಳೆಗಾಲ ಮುಗಿದ ನಂತರದ ಅವಧಿಯಲ್ಲಿ ಗಿರ್ ಸೋಮನಾಥ, ಪೋರಬಂದರ್ ಮತ್ತು ಜಾಮ್ನಗರದ ವಿವಿಧ ಭಾಗಗಳಲ್ಲಿ ವಾಸಿಸುವ ಜನರಿಗೆ ಭೂಮಿ ಕಂಪಿಸಿದ ಅನುಭವವಾಗುತ್ತದೆ. ಹಿಂದೆಯೂ ಇಂತಹ ವಿದ್ಯಮಾನಗಳು ಜರುಗಿವೆ. ಹೀಗಾಗಿ ಯಾರೂ ಗಾಬರಿಪಡುವ ಅಗತ್ಯವಿಲ್ಲ’ ಎಂದು ಐಎಸ್ಆರ್ ನಿರ್ದೇಶಕ ಸುಮೇರ್ ಚೋಪ್ರಾ ಮಾಹಿತಿ ನೀಡಿದ್ದಾರೆ.