ನವದೆಹಲಿ (ಪಿಟಿಐ): ಗುಂಪುದಾಳಿಯಲ್ಲಿ ತಂದೆ–ಮಗನ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ವಿರುದ್ಧ ದೋಷಾರೋಪ ಪಟ್ಟಿ ಅಂತಿಮಗೊಳಿಸಲು ದೆಹಲಿಯ ಕೋರ್ಟ್ ಆದೇಶಿಸಿದೆ.
ಐಪಿಸಿ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಆರೋಪ ಅಂತಿಮಗೊಳಿಸಬೇಕು ಎಂದು ವಿಶೇಷ ನ್ಯಾಯಾಧೀಶರಾದ ಎಂ.ಕೆ.ನಾಗಪಾಲ್ ಆದೇಶಿಸಿದ್ದರು. ಕೃತ್ಯವು ನ.1, 1984ರಲ್ಲಿ ಇಲ್ಲಿನ ರಾಜನಗರ್ದಲ್ಲಿ ನಡೆದಿತ್ತು. ದಾಳಿ ನಡೆಸಿದ್ದ ಗುಂಪಿನ ನೇತೃತ್ವವನ್ನು ಸಜ್ಜನ್ ಕುಮಾರ್ ವಹಿಸಿದ್ದರೆನ್ನಲಾಗಿದೆ.