ನಾಗಪಟ್ಟಣಂ/ರಾಮೇಶ್ವರ: ಸಾಗರದಲ್ಲಿ ತೇಲಿಬಂದ ಬಾಟಲಿಯಲ್ಲಿದ್ದ ದ್ರವ ಪದಾರ್ಥವನ್ನು ವಿದೇಶಿ ಮದ್ಯ ಇರಬಹುದು ಎಂದು ಭಾವಿಸಿ ಕುಡಿದ ಪರಿಣಾಮ ಮೂವರು ಮೀನುಗಾರರು ಮೃತಪಟ್ಟಿದ್ದಾರೆ ಎಂದು ತಮಿಳುನಾಡು ಮೀನುಗಾರಿಕೆ ಇಲಾಖೆ ಭಾನುವಾರ ಹೇಳಿದೆ.
38 ವರ್ಷದ ವ್ಯಕ್ತಿ ದೋಣಿಯಲ್ಲಿಯೇ ಮೃತಪಟ್ಟರು. 40 ವರ್ಷದ ಮೀನುಗಾರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು. 26 ವರ್ಷದ ಮೀನುಗಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಮೇಶ್ವರ ಬಳಿ ಈ ಘಟನೆ ನಡೆದಿದೆ. ಆರು ಜನ ಮೀನುಗಾರರು ಮಾರ್ಚ್ 1ರಂದು ರಾಮೇಶ್ವರ ಸಮೀಪದ ಕೋಡಿಯಾಕಾರೈನಿಂದ ಮೀನು ಹಿಡಿಯಲು ತೆರಳಿದ್ದರು ಎಂದೂ ಅಧಿಕಾರಿಗಳು ಹೇಳಿದ್ದಾರೆ.