ಗುಂಡು ಹಾರಿಸಿ ನಾಲ್ವರು ಸಹೋದ್ಯೋಗಿಗಳನ್ನು ಕೊಂದು, ತಾನು ಹತನಾದ ಬಿಎಸ್ಎಫ್ ಯೋಧ

ಅಮೃತಸರ: ಪಂಜಾಬ್ನ ಅಮೃತಸರದ ಖಾಸಾ ಎಂಬಲ್ಲಿರುವ ಸೇನಾ ಶಿಬಿರದಲ್ಲಿ ಭಾನುವಾರ ದುರ್ಘಟನೆ ಸಂಭವಿಸಿದ್ದು, ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಐವರು ಯೋಧರು ಮೃತಪಟ್ಟಿದ್ದಾರೆ.
ಬಿಎಸ್ಎಫ್ ಪೇದೆ ಸಾತೆಪ್ಪ ಎಸ್.ಕೆ ಎಂಬುವವರು ಐವರು ಯೋಧರ ಮೇಲೆ ಗುಂಡು ಹಾರಿಸಿದ್ದಾರೆ. ಈ ಪೈಕಿ ನಾಲ್ವರು ಹತರಾದರೆ, ಘಟನೆಯಲ್ಲಿ ಗಾಯಗೊಂಡಿದ್ದ ಸಾತೆಪ್ಪ ಅವರೂ ಮೃತಪಟ್ಟಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ‘ಐಎಎನ್ಎಸ್’ ವರದಿ ಮಾಡಿದೆ.
ಸಾತೆಪ್ಪ ಎಸ್.ಕೆ ಕರ್ನಾಟಕದವರಾಗಿದ್ದಾರೆ.
ಅಟ್ಟಾರಿ ವಾಘಾ ಗಡಿಯಿಂದ 20 ಕಿ.ಮೀ ದೂರದಲ್ಲಿರುವ ಅಮೃತಸರದ ಖಾಸಾ ಎಂಬಲ್ಲಿನ ಸೇನಾ ಶಿಬಿರ ‘144 ಬಿಎನ್’ನಲ್ಲಿ ಈ ಅವಘಡ ನಡೆದಿದೆ.
ಘಟನೆ ಬಗ್ಗೆ ಸೇನೆಯು ತನಿಖೆಗೆ ಆದೇಶಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.