‘ಮೂರು ದಿನಗಳ ಧರ್ಮ ಸಂಸತ್ನಲ್ಲಿ ಕಾರ್ಯಕ್ರಮದಲ್ಲಿ ಹಿಂದೂ ಸಾಧುಗಳು ಮತ್ತು ಇತರ ನಾಯಕರು ಮಾಡಿದ ಭಾಷಣದ ವಸ್ತು ಕೇಳಿ ನಾವು ವಿಚಲಿತರಾಗಿದ್ದೇವೆ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಅಲ್ಲಿ, ಪದೇ ಪದೇ ಕರೆ ನೀಡಲಾಯಿತು. ಹಿಂದೂ ಧರ್ಮವನ್ನು ಕಾಪಾಡಲುಅಗತ್ಯ ಬಂದರೆ ಶಸ್ತ್ರಗಳನ್ನು ಹಿಡಿದು ಮುಸ್ಲಿಮರನ್ನು ಹತ್ಯೆಮಾಡಿ ಎಂದು ಕರೆ ನೀಡಲಾಯಿತು. ಈ ರೀತಿ ಹಿಂಸೆಗೆ ಪ್ರಚೋದನೆ ನೀಡಲು ನಾವು ಅನುವು ಮಾಡಿಕೊಡಬಾರದು. ಈ ರೀತಿಯ ಪ್ರಚೋದನೆಗಳು ಆಂತರಿಕ ಭದ್ರತೆಯನ್ನು ಮಾತ್ರ ಹಾಳುಮಾಡುವುದಿಲ್ಲ. ಜೊತೆಗೆ ದೇಶದ ಸಾಮಾಜಿಕ ಸಂರಚನೆಗೂ ಹಾನಿ ಉಂಟುಮಾಡುತ್ತವೆ’ ಎಂದು ಪತ್ರದಲ್ಲಿ ಹೇಳಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.