<p><strong>ನವದೆಹಲಿ</strong>: ಹೆತ್ತ ತಾಯಿಯನ್ನೇ ಮಗನೊಬ್ಬ ಶೂಟ್ಔಟ್ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ದೆಹಲಿ ಹೊರವಲಯದ ಮುಂಡಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.</p>.<p>‘ಘಟನೆಯಲ್ಲಿ 55 ವರ್ಷದ ರೋಹಿಣಿ ಎನ್ನುವರು ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ರೋಹಿಣಿ ಅವರ 30 ವರ್ಷದ ಮಗಆರೋಪಿ ಸಂದೀಪ್ ಎನ್ನುವವನು ಪರಾರಿಯಾಗಿದ್ದಾನೆ‘ ಎಂದು ಡಿಸಿಪಿ ಪರ್ವಿಂದರ್ ಸಿಂಗ್ ತಿಳಿಸಿದ್ದಾರೆ.</p>.<p>‘ನಿರುದ್ಯೋಗಿಯಾಗಿದ್ದ ಸಂದೀಪ ಬುಧವಾರ ರಾತ್ರಿ ಮನೆಗೆ ಬಂದು ತನ್ನ ತಾಯಿ ಜೊತೆ ಹಣಕಾಸಿನ ವಿಷಯಕ್ಕೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ಹೋಗಿ ಶೂಟೌಟ್ ಆಗಿದೆ‘ ಎಂದು ಸಿಂಗ್ ತಿಳಿಸಿದ್ಧಾರೆ.</p>.<p>‘ರೀತು ಎನ್ನವರನ್ನು ಮದುವೆಯಾಗಿದ್ದ ಸಂದೀಪ ಹೆಂಡತಿಯನ್ನು ತವರಿನಲ್ಲಿ ಬಿಟ್ಟು ತನ್ನ ತಾಯಿ ಮೆನಯಲ್ಲಿ ಐದು ವರ್ಷದ ಮಗಳ ಜೊತೆ ವಾಸವಿದ್ದ. ತಾಯಿಗೆ ಗುಂಡೇಟು ನೀಡಿ, ನಂತರ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ‘ ಎಂದು ಪೊಲೀಸರು ತಿಳಿಸಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/entertainment/tv/bigg-boss-13-winner-sidharth-shukla-passes-away-by-cardiac-arrest-863163.html" target="_blank">ಬಿಗ್ ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಹೆತ್ತ ತಾಯಿಯನ್ನೇ ಮಗನೊಬ್ಬ ಶೂಟ್ಔಟ್ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ದೆಹಲಿ ಹೊರವಲಯದ ಮುಂಡಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.</p>.<p>‘ಘಟನೆಯಲ್ಲಿ 55 ವರ್ಷದ ರೋಹಿಣಿ ಎನ್ನುವರು ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ರೋಹಿಣಿ ಅವರ 30 ವರ್ಷದ ಮಗಆರೋಪಿ ಸಂದೀಪ್ ಎನ್ನುವವನು ಪರಾರಿಯಾಗಿದ್ದಾನೆ‘ ಎಂದು ಡಿಸಿಪಿ ಪರ್ವಿಂದರ್ ಸಿಂಗ್ ತಿಳಿಸಿದ್ದಾರೆ.</p>.<p>‘ನಿರುದ್ಯೋಗಿಯಾಗಿದ್ದ ಸಂದೀಪ ಬುಧವಾರ ರಾತ್ರಿ ಮನೆಗೆ ಬಂದು ತನ್ನ ತಾಯಿ ಜೊತೆ ಹಣಕಾಸಿನ ವಿಷಯಕ್ಕೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ಹೋಗಿ ಶೂಟೌಟ್ ಆಗಿದೆ‘ ಎಂದು ಸಿಂಗ್ ತಿಳಿಸಿದ್ಧಾರೆ.</p>.<p>‘ರೀತು ಎನ್ನವರನ್ನು ಮದುವೆಯಾಗಿದ್ದ ಸಂದೀಪ ಹೆಂಡತಿಯನ್ನು ತವರಿನಲ್ಲಿ ಬಿಟ್ಟು ತನ್ನ ತಾಯಿ ಮೆನಯಲ್ಲಿ ಐದು ವರ್ಷದ ಮಗಳ ಜೊತೆ ವಾಸವಿದ್ದ. ತಾಯಿಗೆ ಗುಂಡೇಟು ನೀಡಿ, ನಂತರ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ‘ ಎಂದು ಪೊಲೀಸರು ತಿಳಿಸಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/entertainment/tv/bigg-boss-13-winner-sidharth-shukla-passes-away-by-cardiac-arrest-863163.html" target="_blank">ಬಿಗ್ ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>