ಪ್ರಧಾನಿ ಅವರ ಈ ಆರೋಪಕ್ಕೆ ತಿರುಗೇಟು ನೀಡಿರುವ ರಾಹುಲ್ ಗಾಂಧಿ, ‘ ಇಂಧನ ಬೆಲೆ ಏರಿಕೆಗೆ ರಾಜ್ಯಗಳನ್ನು ದೂಷಿಸಲಾಗುತ್ತದೆ, ಕಲ್ಲಿದ್ದಲು ಕೊರತೆಗೂ ರಾಜ್ಯಗಳನ್ನು ದೂರಲಾಗುತ್ತದೆ, ಆಮ್ಲಜನಕ ಸಿಲಿಂಡರ್ಗಳ ಕೊರತೆ ಎದುರಾದರೂ ರಾಜ್ಯಗಳನ್ನೇ ದೂರಲಾಗುತ್ತದೆ. ಇಂಧನದ ಮೇಲಿನ ಶೇ 68 ರಷ್ಟು ತೆರಿಗೆಯನ್ನು ಕೇಂದ್ರವೇ ತೆಗೆದುಕೊಳ್ಳುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ’ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.