ವಿಳಾಸ ಗೊತ್ತಿಲ್ಲದ, ಮಾತು ಬಾರದ ಅಮೀರ್ನನ್ನು ತಾವೇ ಸಾಕುವುದಾಗಿ ಪೊಲೀಸರಿಗೆ ತಿಳಿಸಿ ಅನುಮತಿ ಪಡೆದುಕೊಂಡಿದ್ದರು ದಾಮ್ಲೆ. ಅಮೀರ್ನನ್ನು ಸ್ಥಳೀಯ ಶಾಲೆಗೆ ದಾಖಲಿಸಿ ವಿದ್ಯಾಭ್ಯಾಸ ಕೊಡಿಸಿದರು. ಸದ್ಯ ಅಮೀರ್ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಕಳೆದ ತಿಂಗಳ ಶಾಲೆಯ ಆಡಳಿತ ಮಂಡಳಿಯವರು ಅಮೀರ್ನ ಆಧಾರ್ ಕಾರ್ಡ್ ಕೊಡುವಂತೆ ಕೇಳಿದ್ದಾರೆ. ಆಧಾರ್ ಇಲ್ಲದಿದ್ದರಿಂದ ಹೊಸ ಆಧಾರ್ ಕಾರ್ಡ್ ಪಡೆಯಲು ದಾಮ್ಲೆ, ಅಮೀರ್ನನ್ನುನಾಗಪುರಕ್ಕೆ ಕರೆದುಕೊಂಡು ಬಂದಿದ್ದಾರೆ. ಆಧಾರ್ ಕಾರ್ಡ್ ಕೇಂದ್ರಕ್ಕೆ ಹೋಗಿ ವಿಚಾರಿಸಿದಾಗ ಈಗಾಗಲೇ ಅಮೀರ್ನ ಆಧಾರ್ ಕಾರ್ಡ್ ಇರುವುದಾಗಿ ಗೊತ್ತಾಗಿದೆ.