‘ಕೋವಿಡ್–19 ವ್ಯಾಪಕವಾಗುತ್ತಿರುವ ಆರಂಭಿಕ ದಿನಗಳಲ್ಲಿ, ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಪ್ಯಾಕೇಜ್ ಘೋಷಿಸಿದರು. ವೈಯಕ್ತಿಕವಾಗಿ, ಸಾಮಾಜಿಕ ಹಾಗೂ ಒಂದು ರಾಷ್ಟ್ರವಾಗಿ ಸ್ವಾವಲಂಬನೆ ಸಾಧಿಸುವುದನ್ನು ಅವರು ಪ್ರತಿಪಾದಿಸಿದರು. ಅದನ್ನು ವಿವರಿಸಲು ಅವರು ‘ಆತ್ಮನಿರ್ಭರತಾ’ ಪದವನ್ನು ಬಳಸಿದರು’ ಎಂದು ಆಕ್ಸ್ಫರ್ಡ್ ಲ್ಯಾಂಗ್ವೇಜಸ್ ಪ್ರಕಟಣೆಯಲ್ಲಿ ತಿಳಿಸಿದೆ.