‘ಇಟಾವಾ ಜಿಲ್ಲೆಯ ಸೈಫೈ ಪಟ್ಟಣದಲ್ಲಿ ನಡೆದ ಗಣರಾಜ್ಯೋತ್ಸವ ದಿನ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಯಾದವ್, ‘ಮುಖ್ಯಮಂತ್ರಿಯ ಕೆಲಸಗಳನ್ನು ನೋಡಿದರೆ ಅವರು ನಿಜವಾದ ಯೋಗಿ ಅಲ್ಲ ಎಂದು ನಮಗೆ ಅನಿಸುತ್ತದೆ. ನೀವು ಭಗವಾನ್ ಕೃಷ್ಣ, ಗುರುನಾನಕ್ ಮತ್ತು ಇತರರ ಬೋಧನೆಗಳನ್ನು ಓದಿದರೆ ನಿಜವಾದ ಯೋಗಿಯ ವ್ಯಾಖ್ಯಾನವೇನು ಎಂಬುದನ್ನು ಅರ್ಥಮಾಡಿಕೊಳ್ಳುತ್ತೀರಿ. ಮತ್ತೊಬ್ಬರ ನೋವನ್ನು ಅರ್ಥಮಾಡಿಕೊಳ್ಳುವವನೇ ನಿಜವಾದ ಯೋಗಿ. ಆದಿತ್ಯನಾಥ್ ಅವರಿಗೆ ಯುವಜನರ, ರೈತರ ಮತ್ತು ಇತರರ ನೋವು ಅರ್ಥವಾಗಿದೆಯೇ... ಅವರು ನಿಜವಾದ ಯೋಗಿಯಲ್ಲ’ ಎಂದು ಟೀಕಿಸಿದ್ದಾರೆ.