ದಾಳಿಯ ಕುರಿತ ಬೆದರಿಕೆ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ‘ಯಾತ್ರೆಯನ್ನು ರಾಜಕೀಯ ಮತ್ತು ಸಮುದಾಯದಲ್ಲಿ ಒಡಕು ಮೂಡಿಸುವ ಉದ್ದೇಶಕ್ಕಾಗಿ ಬಳಸಿದರೆ ಪ್ರತಿರೋಧ ದಳವಾದ ನಾವು ಅಂತಹ ಮೂಲಭೂತವಾದಿ ಸಂಘದ ಕೊಳಕು ಉದ್ದೇಶವನ್ನು ಖಂಡಿತ ತಡೆಯುತ್ತೇವೆ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇವೆ’ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದೆ.