ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಈ ಮಣ್ಣಿನ ಮಗನನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಲಿದ್ದೇವೆ ಎಂದ ಅಮಿತ್ ಶಾ, ಮಮತಾ ಅವರಿಗೆ ಕೆಲವು ವಿಷಯಗಳು ಮರೆತಿರಬೇಕು ಅಂದುಕೊಂಡಿದ್ದೇನೆ. ಮಮತಾ ಕಾಂಗ್ರೆಸ್ನಲ್ಲಿದ್ದಾಗ ಅವರು ಇಂದಿರಾ ಗಾಂಧಿಯನ್ನು ಹೊರಗಿನವರು ಎಂದು ಕರೆದಿದ್ದರೇ? ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರನ್ನೂ ಹೊರಗಿನವರು ಎಂದು ಕರೆದಿದ್ದರೇ? ಒಂದು ರಾಜ್ಯದ ಜನರಿಗೆ ಇತರ ರಾಜ್ಯಗಳಿಗೆ ತೆರಳಲು ಅವಕಾಶವಿಲ್ಲದ ದೇಶವನ್ನು ರಚಿಸಲು ಅವರು ಮುಂದಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.