ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್‌ ಇತ್ಯರ್ಥಕ್ಕೆ ಲಂಚ: ಸೇನೆಯ ಲೆಫ್ಟಿನಂಟ್ ಕರ್ನಲ್‌, ಅಧಿಕಾರಿಗೆ ಜೈಲು ಶಿಕ್ಷೆ

Last Updated 6 ಏಪ್ರಿಲ್ 2021, 11:22 IST
ಅಕ್ಷರ ಗಾತ್ರ

ಡೆಹ್ರಾಡೂನ್: ಲಂಚ ಪಡೆದ ಪ್ರಕರಣದಲ್ಲಿ ಸಿಬಿಐವಿಶೇಷ ನ್ಯಾಯಾಲಯವು ಸೇನೆಯ ಲೆಫ್ಟಿನಂಟ್‌ ಕರ್ನಲ್‌ ಅವರಿಗೆ 10 ವರ್ಷ ಹಾಗೂ ಇನ್ನೊಬ್ಬ ಅಧಿಕಾರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಲೆಫ್ಟಿನಂಟ್ ಕರ್ನಲ್‌ ಭರತ್‌ ಜೋಷಿ ಮತ್ತು ಅಧಿಕಾರಿ ಮನೀಶ್‌ ಸಿಂಗ್‌ ಶಿಕ್ಷೆಗೆ ಒಳಗಾದವರು. ಅಲ್ಲದೆ, ಇವರಿಗೆ ಕ್ರಮವಾಗಿ ₹ 55 ಸಾವಿರ ಮತ್ತು ₹ 15 ಸಾವಿರ ದಂಡವನ್ನು ಸಿಬಿಐ ನ್ಯಾಯಾಧೀಶರಾದ ಸುಜಾತಾ ಸಿಂಗ್ ವಿಧಿಸಿದರು.

ಪ್ರಕರಣ ಐದು ವರ್ಷದ ಹಿಂದಿನದಾಗಿದೆ. ಆಗ ಜೋಷಿ ಅವರು ಸೇನೆಯ ಎಂಜಿನಿಯರಿಂಗ್ ಸರ್ವೀಸ್ ವಿಭಾಗದಲ್ಲಿ ಗ್ಯಾರಿಸನ್‌ ಎಂಜಿನಿಯರ್ ಆಗಿದ್ದರು. ಬಿಲ್ ಇತ್ಯರ್ಥಪಡಿಸಲು ಗುತ್ತಿಗೆದಾರರಿಂದ ₹ 38 ಸಾವಿರ ಲಂಚ ಕೇಳಿದ್ದರು. ಆಗ ಸಹಾಯಕ ಗ್ಯಾರಿಸನ್ ಎಂಜಿನಿಯರ್ ಆಗಿದ್ದ ಮನೀಶ್ ಸಿಂಗ್ ಒಂದೇ ಬಾರಿಗೆ ಲಂಚದ ಹಣ ನೀಡಬೇಕು ಎಂದು ಒತ್ತಡ ಹೇರಿದ್ದರು.

ಮೊದಲ ಕಂತಾಗಿ ₹ 10 ಸಾವಿರ ಲಂಚ ನೀಡಿದ್ದ ಗುತ್ತಿಗೆದಾರ, ನಂತರ ಸಿಬಿಐಗೆ ದೂರು ಸಲ್ಲಿಸಿದ್ದರು. ಲಂಚದ ಎರಡನೇ ಕಂತು ಪಡೆಯುವಾಗ ಇಬ್ಬರೂ ಸಿಕ್ಕಿಬಿದ್ದಿದ್ದರು ಎಂದು ಸರ್ಕಾರದ ಪರ ವಾದಿಸಿದ ವಕೀಲ ಸತೀಶ್‌ ಗರ್ಗ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT