ಅಸ್ಸಾಂ ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತು ಅವರು ಮಾತನಾಡಿದರು. ‘ಮೆಟ್ರಿಕ್ (10ನೇ ತರಗತಿ) ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಂಥ ಪ್ರಕರಣಗಳು ನಡೆಯಲೇಬಾರದು. ಇದು ನಮ್ಮ ವಿಫಲತೆಯನ್ನು ತೋರುತ್ತದೆ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಶಾಲೆಯೊಂದರ ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ಈ ಹಗರಣದ ಪ್ರಮುಖ ಆಪಾದಿತ. ಜೊತೆಗೆ, ಮೂವರು ಇತರ ಶಿಕ್ಷಕರೂ ಈ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ’ ಎಂದರು.