<p><strong>ಬಲ್ಲಿಯಾ, ಉತ್ತರಪ್ರದೇಶ: </strong>ಪಾತಕಿ ಅತೀಕ್ ಅಹ್ಮದ್ನನ್ನು ಜೈಲಿನಿಂದ ಹೊರತಂದು ಎನ್ಕೌಂಟರ್ ಮಾಡಿ ಎಂದು ಬಿಜೆಪಿಯ ಮಾಜಿ ಸಂಸದ ಹರಿನಾರಾಯಣ್ ರಾಜ್ಭರ್ ಗುರುವಾರ ಹೇಳಿದ್ದಾರೆ.</p>.<p>ಇದನ್ನು ಮಾಡುವ ಪೊಲೀಸ್ಗೆ ಸ್ವರ್ಗದ ಬಾಗಿಲು ತೆರೆಯಲಿದೆ ಎಂದೂ ತಿಳಿಸಿದ್ದಾರೆ.</p>.<p>ಉಮೇಶ್ ಪಾಲ್ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳು ಪೊಲೀಸ್ ಎನ್ಕೌಂಟರ್ನಲ್ಲಿ ಹತ್ಯೆಗೀಡಾದ ಬಳಿಕ ಹರಿನಾರಾಯಣ್ ಅವರು ಈ ಹೇಳಿಕೆ ನೀಡಿದ್ದಾರೆ. ಎನ್ಕೌಂಟರ್ನಲ್ಲಿ ಹತರಾಗಿರುವ ಇಬ್ಬರೂ ಅತೀಕ್ ಅಹಮ್ಮದ್ನ ಸಹಚರರಾಗಿದ್ದರು.</p>.<p>‘ಜೈಲಿನಲ್ಲಿದ್ದುಕೊಂಡೇ ಅತೀಕ್, ಕೊಲೆಗೆ ಸಂಚು ರೂಪಿಸಿದ್ದ ಮತ್ತು ಆತ ಹಲವು ಜನರನ್ನು ಕೊಂದು ಬಡವರ ಆಸ್ತಿಯನ್ನು ಕಬಳಿಸಿದ್ದಾನೆ’ ಎಂದೂ ರಾಜ್ಭರ್ ಅವರು ಆರೋಪಿಸಿದ್ದಾರೆ.</p>.<p>ಉತ್ತರಪ್ರದೇಶ ಪೊಲೀಸರು ನಡೆಸಿರುವ ಪ್ರತ್ಯೇಕ ಎನ್ಕೌಂಟರ್ಗೆ ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ಕಳವಳ ವ್ಯಕ್ತಪಡಿಸಿದ್ದವು.</p>.<p>ಅತೀಕ್ ಅಹಮ್ಮದ್ ಸದ್ಯ ಗುಜರಾತ್ನ ಜೈಲಿನಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಲ್ಲಿಯಾ, ಉತ್ತರಪ್ರದೇಶ: </strong>ಪಾತಕಿ ಅತೀಕ್ ಅಹ್ಮದ್ನನ್ನು ಜೈಲಿನಿಂದ ಹೊರತಂದು ಎನ್ಕೌಂಟರ್ ಮಾಡಿ ಎಂದು ಬಿಜೆಪಿಯ ಮಾಜಿ ಸಂಸದ ಹರಿನಾರಾಯಣ್ ರಾಜ್ಭರ್ ಗುರುವಾರ ಹೇಳಿದ್ದಾರೆ.</p>.<p>ಇದನ್ನು ಮಾಡುವ ಪೊಲೀಸ್ಗೆ ಸ್ವರ್ಗದ ಬಾಗಿಲು ತೆರೆಯಲಿದೆ ಎಂದೂ ತಿಳಿಸಿದ್ದಾರೆ.</p>.<p>ಉಮೇಶ್ ಪಾಲ್ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳು ಪೊಲೀಸ್ ಎನ್ಕೌಂಟರ್ನಲ್ಲಿ ಹತ್ಯೆಗೀಡಾದ ಬಳಿಕ ಹರಿನಾರಾಯಣ್ ಅವರು ಈ ಹೇಳಿಕೆ ನೀಡಿದ್ದಾರೆ. ಎನ್ಕೌಂಟರ್ನಲ್ಲಿ ಹತರಾಗಿರುವ ಇಬ್ಬರೂ ಅತೀಕ್ ಅಹಮ್ಮದ್ನ ಸಹಚರರಾಗಿದ್ದರು.</p>.<p>‘ಜೈಲಿನಲ್ಲಿದ್ದುಕೊಂಡೇ ಅತೀಕ್, ಕೊಲೆಗೆ ಸಂಚು ರೂಪಿಸಿದ್ದ ಮತ್ತು ಆತ ಹಲವು ಜನರನ್ನು ಕೊಂದು ಬಡವರ ಆಸ್ತಿಯನ್ನು ಕಬಳಿಸಿದ್ದಾನೆ’ ಎಂದೂ ರಾಜ್ಭರ್ ಅವರು ಆರೋಪಿಸಿದ್ದಾರೆ.</p>.<p>ಉತ್ತರಪ್ರದೇಶ ಪೊಲೀಸರು ನಡೆಸಿರುವ ಪ್ರತ್ಯೇಕ ಎನ್ಕೌಂಟರ್ಗೆ ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ಕಳವಳ ವ್ಯಕ್ತಪಡಿಸಿದ್ದವು.</p>.<p>ಅತೀಕ್ ಅಹಮ್ಮದ್ ಸದ್ಯ ಗುಜರಾತ್ನ ಜೈಲಿನಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>