ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಆಗಸ್ಟ್ನಲ್ಲಿ ವಿದ್ಯುತ್ ಚಾಲಿತ ವಾಹನಗಳ ನೀತಿಯನ್ನು ಪ್ರಕಟಿಸಿದ್ದರು. ಆ ವೇಳೆ ಅವರು ನಾಲ್ಕು ಚಕ್ರದ ವಾಹನಗಳ ಖರೀದಿಗೆ ₹ 1.5 ಲಕ್ಷದವರೆಗೂ, ದ್ವಿಚಕ್ರ ವಾಹನ , ಆಟೊರಿಕ್ಷಾ, ಇ–ರಿಕ್ಷಾ ಮತ್ತು ಸರಕು ಸಾಗಣೆ ವಾಹನಗಳ ಖರೀದಿಗೆ₹ 30 ಸಾವಿರದವರೆಗೂ ಪ್ರೋತ್ಸಾಹಧನ ನೀಡುವುದರ ಜತೆಗೆ, ರಸ್ತೆ ತೆರಿಗೆ ಮನ್ನಾ ಹಾಗೂ ನೋಂದಣಿ ಶುಲ್ಕದಿಂದ ವಿನಾಯಿತಿ ನೀಡುವುದಾಗಿ ಹೇಳಿದ್ದರು.