ಬಿಹಾರದಲ್ಲಿ ಉಂಟಾಗುವ ಅಕಾಲಿಕ ಮಳೆ, ತೀವ್ರ ತಾಪಮಾನ, ಅಂತರ್ಜಲ ಕುಸಿತ, ಬರಗಾಲ ಮತ್ತು ಪ್ರವಾಹದಂತಹ ಹವಾಮಾನ ಬದಲಾವಣೆ ಪರಿಣಾಮಗಳನ್ನು ಗಮನಿಸಿ, ‘ಜಲ ಜೀವನ್ ಹರಿಯಾಲಿ ಅಭಿಯಾನ್’ ಯೋಜನೆ ರೂಪಿಸಲಾಗಿದೆ. ಅದರಡಿಜಲಸಂರಕ್ಷಣೆ ಮತ್ತು ಹಸಿರೀಕರಣದಂತಹ ಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಇದರ ಸುತ್ತ ನಮ್ಮ ಅಭಿವೃದ್ಧಿಯ ಕಾರ್ಯತಂತ್ರವನ್ನು ರೂಪಿಸುತ್ತಿದ್ದೇವೆ ಎಂದು ಅವರು ಪೂರ್ವ ಮುದ್ರಿತ ವಿಡಿಯೊ ಸಂದೇಶದ ಮೂಲಕ ವಿವರಿಸಿದ್ದಾರೆ.