ಇತ್ತೀಚೆಗೆ ದಲಿತ ಯುವಕರ ಜೊತೆಗಿನ ಸಂವಾದದ ವೇಳೆ ರಾಹುಲ್ ಪುನರ್ ಜನ್ಮದ ಬಗ್ಗೆ ಪ್ರಶ್ನೆಯೆತ್ತಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂಬಿತ್ ಪಾತ್ರ ಅವರು, 'ರಾಮನ ಇರುವಿಕೆಯ ಪ್ರಶ್ನೆಗಳನ್ನು ಎತ್ತುವ ಮೂಲಕ ಕೆಲವು ನಾಯಕರು ಜನರನ್ನು ಕೆರಳಿಸುತ್ತಿದ್ದಾರೆ. ಇಂಥ ಕೆಲಸಗಳು ನಡೆಯಲೇಬಾರದು. ರಾಮನ ಮೇಲಿನ ಭಾರತೀಯರ ನಂಬಿಕೆಯನ್ನು ಅರಗಿಸಿಕೊಳ್ಳಲು ರಾಹುಲ್ ಗಾಂಧಿ ಅವರಿಗೆ ಸಾಧ್ಯವಾಗುತ್ತಿಲ್ಲ ಎಂಬಂತೆ ಕಾಣುತ್ತಿದೆ. ಇದು ಕಾಂಗ್ರೆಸ್ಸಿನ ಚಾರಿತ್ರ್ಯವನ್ನು ತೋರಿಸುತ್ತದೆ' ಎಂದು ಛೇಡಿಸಿದರು.