ಚೆನ್ನೈ: ನಗರದ ಅಣ್ಣ ಸಲಾಯ್ ರಸ್ತೆಯಲ್ಲಿ ಬಿಜೆಪಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಬಾಲಚಂದರ್ ಅವರನ್ನು ಬುಧವಾರ ಇರಿದು ಹತ್ಯೆಗೈಯಲಾಗಿದೆ.
ಬಾಲಚಂದರ್ ವಿರುದ್ಧ ಏಳು ಮೊಕದ್ದಮೆಗಳು ದಾಖಲಾಗಿದ್ದವು. ಇದು ವೈಯಕ್ತಿಕ ದ್ವೇಷಕ್ಕೆ ಆಗಿರುವ ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ.