ಲಂಡನ್ಗೆ ತೆರಳಿದ್ದಾಗ ರಾಹುಲ್ಗಾಂಧಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ಶಾ, ‘ವಿದೇಶಿ ನೆಲದಲ್ಲಿ ನಿಂತು ರಾಹುಲ್ಗಾಂಧಿ ಭಾರತಕ್ಕೆ ಅವಮಾನಿಸಿದ್ದಾರೆ. ಹೀಗೆಯೇ ಮುಂದುವರಿದರೆ ಈಶಾನ್ಯ ರಾಜ್ಯಗಳಲ್ಲಿ ಅಷ್ಟೇ ಅಲ್ಲ, ಇಡೀ ದೇಶದಿಂದಲೇ ಕಾಂಗ್ರೆಸ್ ನಾಪತ್ತೆಯಾಗಲಿದೆ’ ಎಂದು ಎಚ್ಚರಿಸಿದರು. ‘ಕಾಂಗ್ರೆಸ್ನವರು ಪ್ರಧಾನಿ ಮೋದಿ ಅವರಿಗೆ ಟೀಕಿಸಿದಷ್ಟೂ, ಬಿಜೆಪಿ ಇನ್ನಷ್ಟು ಬೆಳೆಯುತ್ತದೆ‘ ಎಂದು ಹೇಳಿದರು.