ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಘೋಷ್, 'ಇದು ಹೊಸತೇನಲ್ಲ, ಈ ಹಿಂದೆ ನನ್ನ ಮೇಲೆ ಹಲವು ಬಾರಿ ಹಲ್ಲೆ ಮಾಡಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯ ಸೋಲಿನ ಭೀತಿಯಿಂದ ಟಿಎಂಸಿ ಮತ್ತು ಅವರ ಸ್ನೇಹಿತರು ಹತಾಶರಾಗಿದ್ದಾರೆ. ಹೀಗಾಗಿಯೇ ನಮ್ಮ ಮೇಲೆ ದಾಳಿ ಮಾಡಿದ್ದಾರೆ. ಇಲ್ಲಿ ಜನತಂತ್ರವಿದೆಯೇ? ಅವರ ತಂತ್ರಗಳು ಕೆಲಸ ಮಾಡುವುದಿಲ್ಲ. ಜನರು ನಮ್ಮೊಂದಿಗಿದ್ದಾರೆ. ರಾಜಕೀಯ ಹಿಂಸಾಚಾರವನ್ನು ತಡೆಯಲು ನಮಗೆ ಬಂಗಾಳದಲ್ಲಿ ಬದಲಾವಣೆ ಬೇಕು,' ಎಂದು ಹೇಳಿದ್ದಾರೆ.