ಮೊಬೈಲ್ ಅಪ್ಲಿಕೇಶನ್ನ ಸೃಷ್ಟಿಕರ್ತ ಎಂದು ಹೇಳಲಾದ ಬಿಷ್ಣೋಯಿ ಅವರನ್ನು ಇದೇ ಪ್ರಕರಣದಲ್ಲಿ ದೆಹಲಿ ಪೊಲೀಸರು ಈ ತಿಂಗಳ ಆರಂಭದಲ್ಲಿ ಬಂಧಿಸಿದ್ದರು. ನಂತರ, ಮುಂಬೈ ಪೊಲೀಸರು ಬುಲ್ಲಿ ಬಾಯಿ ಆ್ಯಪ್ ಪ್ರಕರಣದ ತನಿಖೆಗಾಗಿ ಅವರನ್ನು ಕಸ್ಟಡಿಗೆ ತೆಗೆದುಕೊಂಡರು.
ಮುಂಬೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೋಮವಾರ ಬಿಷ್ಣೋಯಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದರೊಂದಿಗೆ, ವಿವಾದಾತ್ಮಕ ಬುಲ್ಲಿ ಬಾಯಿ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ನ ಸೈಬರ್ ಸೆಲ್ ವಿಚಾರಣೆ ನಡೆಸುತ್ತಿರುವ ಎಲ್ಲಾ ಆರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಈ ಹಿಂದೆ ವಿಶಾಲ್ ಝಾ, ಮಯಾಂಕ್ ರಾವತ್, ಶ್ವೇತಾ ಸಿಂಗ್, ನೀರಜ್ ಸಿಂಗ್ ಮತ್ತು ಓಂಕಾರೇಶ್ವರ್ ಠಾಕೂರ್ ಅವರನ್ನು ಬಂಧಿಸಿದ್ದರು/