<p class="title">ಧರ್ಮಶಾಲಾ (ಹಿಮಾಚಲ ಪ್ರದೇಶ): ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹದಲ್ಲಿ ಇಲ್ಲಿನ ಧರ್ಮಶಾಲಾದ ಪ್ರವಾಸಿ ತಾಣಗಳಲ್ಲಿರುವ ಹಲವು ಕಟ್ಟಡಗಳು ಮುಳುಗಿದ್ದು, ಕಾರುಗಳು ತೇಲಿಕೊಂಡು ಹೋಗಿವೆ. ಪ್ರತಿಕೂಲ ಹವಾಮಾನದ ಕಾರಣಕ್ಕಾಗಿ ಇಲ್ಲಿನ ವಿಮಾನ ನಿಲ್ದಾಣವನ್ನೂ ಮುಚ್ಚಲಾಗಿದೆ.</p>.<p class="title">ಮೆಕ್ಲೊಡ್ಗಂಜ್ ಪ್ರದೇಶದ ಧರ್ಮಶಾಲಾದ ಮೇಲ್ಭಾಗದಲ್ಲಿರುವ ಭಗ್ಸು ನಾಗ್ ಬಳಿ ಇರುವ ಚರಂಡಿಯು ಪ್ರವಾಹದಿಂದಾಗಿ ತನ್ನ ಹಾದಿಯನ್ನು ಬದಲಿಸಿದೆ. ಪ್ರವಾಹದಲ್ಲಿ ನಾಲ್ಕು ಕಾರುಗಳು ಸೇರಿದಂತೆ ಹಲವು ದ್ವಿಚಕದ್ರ ವಾಹನಗಳು ತೇಲಿಕೊಂಡು ಹೋಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ.</p>.<p class="title">ಭಗ್ಸುನಾಗ್ನಲ್ಲಿರುವ ಸರ್ಕಾರಿ ಶಾಲೆಯ ಕಟ್ಟಡವೂ ಹಾನಿಗೀಡಾಗಿದ್ದು, ಅದರ ಅಕ್ಕಪಕ್ಕದ ಹೋಟೆಲ್ಗಳು ಪ್ರವಾಹದಲ್ಲಿ ಮುಳುಗಿವೆ. ಧರ್ಮಶಾಲಾ ಪಕ್ಕದ ಮಾಂಜ್ಹಿ ಖಾದ್ ಪ್ರದೇಶದಲ್ಲಿ ಪ್ರವಾಹದಿಂದಾಗಿ, ಎರಡು ಕಟ್ಟಡಗಳು ಕೊಚ್ಚಿ ಹೋಗಿದ್ದು, ಇನ್ನೂ ಹಲವು ಕಟ್ಟಡಗಳು ಹಾನಿಗೀಡಾಗಿವೆ ಎಂದು ವರದಿಯಾಗಿದೆ.</p>.<p class="title">ವಿಮಾನ ರದ್ದು: ‘ಪ್ರತಿಕೂಲ ಹವಾಮಾನ ಮತ್ತು ಭಾರಿ ಮಳೆಯ ಕಾರಣಕ್ಕಾಗಿ ಧರ್ಮಶಾಲಾದ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಎಲ್ಲ ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ’ ಎಂದು ವಿಮಾನ ನಿಲ್ದಾಣದ ಸಂಚಾರ ಉಸ್ತುವಾರಿ ಅಧಿಕಾರಿ ಗೌರವ ಕುಮಾರ್ ತಿಳಿಸಿದ್ದಾರೆ.</p>.<p class="title">ಸೇತುವೆಗೆ ಹಾನಿ: ಪ್ರವಾಹದಿಂದಾಗಿ ಮಂಡಿ-ಪಠಾಣ್ಕೋಟ್ ಹೆದ್ದಾರಿಯಲ್ಲಿ ಸೇತುವೆಯೊಂದು ಹಾನಿಗೊಳಗಾಗಿದ್ದು, ಸೇತುವೆಯ ಎರಡೂ ಬದಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.</p>.<p class="title">‘ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸ್ಥಳೀಯರು ಮತ್ತು ಪ್ರವಾಸಿಗರು ನದಿ ತೀರಗಳ ಬಳಿ ತೆರಳಬಾರದು’ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಮನವಿ ಮಾಡಿದ್ದಾರೆ.</p>.<p class="title">‘ಭೂಕುಸಿತಕ್ಕೆ ಒಳಗಾಗುವ ಸೂಕ್ಷ್ಮ ಸ್ಥಳಗಳಿಗೆ ಹೋಗದಂತೆ ಜನರಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿದ್ದ ಕೆಲವು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ. ನಿಪುನ್ ಜಿಂದಾಲ್ ತಿಳಿಸಿದ್ದಾರೆ.</p>.<p class="title">ಭಾರಿ ಮಳೆ ಸಾಧ್ಯತೆ: ‘ಜುಲೈ 13 ಹಾಗೂ ಜುಲೈ 14ರಿಂದ 16ರವರೆಗೆ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸೂಚನೆ ಇದೆ ಎಂದು ಹವಾಮಾನ ಇಲಾಖೆಯ ವರದಿಯು ಮುನ್ಸೂಚನೆ ನೀಡಿದೆ’ ಎಂದೂ ಜಿಂದಾಲ್ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title">ಧರ್ಮಶಾಲಾ (ಹಿಮಾಚಲ ಪ್ರದೇಶ): ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹದಲ್ಲಿ ಇಲ್ಲಿನ ಧರ್ಮಶಾಲಾದ ಪ್ರವಾಸಿ ತಾಣಗಳಲ್ಲಿರುವ ಹಲವು ಕಟ್ಟಡಗಳು ಮುಳುಗಿದ್ದು, ಕಾರುಗಳು ತೇಲಿಕೊಂಡು ಹೋಗಿವೆ. ಪ್ರತಿಕೂಲ ಹವಾಮಾನದ ಕಾರಣಕ್ಕಾಗಿ ಇಲ್ಲಿನ ವಿಮಾನ ನಿಲ್ದಾಣವನ್ನೂ ಮುಚ್ಚಲಾಗಿದೆ.</p>.<p class="title">ಮೆಕ್ಲೊಡ್ಗಂಜ್ ಪ್ರದೇಶದ ಧರ್ಮಶಾಲಾದ ಮೇಲ್ಭಾಗದಲ್ಲಿರುವ ಭಗ್ಸು ನಾಗ್ ಬಳಿ ಇರುವ ಚರಂಡಿಯು ಪ್ರವಾಹದಿಂದಾಗಿ ತನ್ನ ಹಾದಿಯನ್ನು ಬದಲಿಸಿದೆ. ಪ್ರವಾಹದಲ್ಲಿ ನಾಲ್ಕು ಕಾರುಗಳು ಸೇರಿದಂತೆ ಹಲವು ದ್ವಿಚಕದ್ರ ವಾಹನಗಳು ತೇಲಿಕೊಂಡು ಹೋಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ.</p>.<p class="title">ಭಗ್ಸುನಾಗ್ನಲ್ಲಿರುವ ಸರ್ಕಾರಿ ಶಾಲೆಯ ಕಟ್ಟಡವೂ ಹಾನಿಗೀಡಾಗಿದ್ದು, ಅದರ ಅಕ್ಕಪಕ್ಕದ ಹೋಟೆಲ್ಗಳು ಪ್ರವಾಹದಲ್ಲಿ ಮುಳುಗಿವೆ. ಧರ್ಮಶಾಲಾ ಪಕ್ಕದ ಮಾಂಜ್ಹಿ ಖಾದ್ ಪ್ರದೇಶದಲ್ಲಿ ಪ್ರವಾಹದಿಂದಾಗಿ, ಎರಡು ಕಟ್ಟಡಗಳು ಕೊಚ್ಚಿ ಹೋಗಿದ್ದು, ಇನ್ನೂ ಹಲವು ಕಟ್ಟಡಗಳು ಹಾನಿಗೀಡಾಗಿವೆ ಎಂದು ವರದಿಯಾಗಿದೆ.</p>.<p class="title">ವಿಮಾನ ರದ್ದು: ‘ಪ್ರತಿಕೂಲ ಹವಾಮಾನ ಮತ್ತು ಭಾರಿ ಮಳೆಯ ಕಾರಣಕ್ಕಾಗಿ ಧರ್ಮಶಾಲಾದ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಎಲ್ಲ ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ’ ಎಂದು ವಿಮಾನ ನಿಲ್ದಾಣದ ಸಂಚಾರ ಉಸ್ತುವಾರಿ ಅಧಿಕಾರಿ ಗೌರವ ಕುಮಾರ್ ತಿಳಿಸಿದ್ದಾರೆ.</p>.<p class="title">ಸೇತುವೆಗೆ ಹಾನಿ: ಪ್ರವಾಹದಿಂದಾಗಿ ಮಂಡಿ-ಪಠಾಣ್ಕೋಟ್ ಹೆದ್ದಾರಿಯಲ್ಲಿ ಸೇತುವೆಯೊಂದು ಹಾನಿಗೊಳಗಾಗಿದ್ದು, ಸೇತುವೆಯ ಎರಡೂ ಬದಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.</p>.<p class="title">‘ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸ್ಥಳೀಯರು ಮತ್ತು ಪ್ರವಾಸಿಗರು ನದಿ ತೀರಗಳ ಬಳಿ ತೆರಳಬಾರದು’ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಮನವಿ ಮಾಡಿದ್ದಾರೆ.</p>.<p class="title">‘ಭೂಕುಸಿತಕ್ಕೆ ಒಳಗಾಗುವ ಸೂಕ್ಷ್ಮ ಸ್ಥಳಗಳಿಗೆ ಹೋಗದಂತೆ ಜನರಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿದ್ದ ಕೆಲವು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ. ನಿಪುನ್ ಜಿಂದಾಲ್ ತಿಳಿಸಿದ್ದಾರೆ.</p>.<p class="title">ಭಾರಿ ಮಳೆ ಸಾಧ್ಯತೆ: ‘ಜುಲೈ 13 ಹಾಗೂ ಜುಲೈ 14ರಿಂದ 16ರವರೆಗೆ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸೂಚನೆ ಇದೆ ಎಂದು ಹವಾಮಾನ ಇಲಾಖೆಯ ವರದಿಯು ಮುನ್ಸೂಚನೆ ನೀಡಿದೆ’ ಎಂದೂ ಜಿಂದಾಲ್ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>