ನವದೆಹಲಿ: ಲಂಚ ಮತ್ತು ಭ್ರಷ್ಟಾಚಾರ ಆರೋಪದಡಿ ಕೇಂದ್ರ ತನಿಖಾ ದಳದ ಅಧಿಕಾರಿಗಳು (ಸಿಬಿಐ) ಸಫ್ದರ್ಜಂಗ್ ಆಸ್ಪತ್ರೆಯ ನರರೋಗ ತಜ್ಞ ಮನೀಶ್ ರಾವತ್ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಇವರು ರೋಗಿಗಳನ್ನು ನಿರ್ದಿಷ್ಟ ಕಂಪನಿಗಳ ಹೆಚ್ಚಿನ ಬೆಲೆಯ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಖರೀದಿಸುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.