ನವದೆಹಲಿ: ₹1 ಕೋಟಿ ಲಂಚ ಪಡೆದ ಆರೋಪದ ಮೇಲೆ ರೈಲ್ವೆಯ ಹಿರಿಯ ಅಧಿಕಾರಿಯನ್ನು ಸಿಬಿಐ ಭಾನುವಾರ ಬಂಧಿಸಿದೆ.
‘1985ರ ಬ್ಯಾಚ್ನ ಐಆರ್ಇಎಸ್ ಅಧಿಕಾರಿಯಾಗಿರುವ ಮಹೇಂದರ್ ಸಿಂಗ್ ಚೌಹಾಣ್ ಬಂಧನಕ್ಕೊಳಗಾದವರು. ಈಶಾನ್ಯ ಗಡಿ ರೈಲ್ವೆ (ಎನ್ಎಫ್ಆರ್) ಯೋಜನೆಗಳ ಗುತ್ತಿಗೆಗೆ ಅನುಮತಿ ನೀಡಲು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ. ಲಂಚದ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಸಿಬಿಐ ಅಧಿಕಾರಿಗಳು ಹೇಳಿದರು.
‘ಈ ಅಧಿಕಾರಿ ಅಸ್ಸಾಂನ ಮಾಲಿಗಾಂವ್ನಲ್ಲಿರುವ ಎನ್ಎಫ್ಆರ್ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ದೆಹಲಿ, ಅಸ್ಸಾಂ, ಉತ್ತರಾಖಂಡ ಮತ್ತು ಇತರ ಎರಡು ರಾಜ್ಯಗಳ 20 ಪ್ರದೇಶಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸುತ್ತಿದೆ’ ಎಂದು ತಿಳಿಸಿದರು.