ಮಧ್ಯಪ್ರದೇಶದ ಶಹಜಪುರದಲ್ಲಿ ‘ಜನ ಆರ್ಶೀವಾದ ಯಾತ್ರೆ’ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಅಫ್ಗಾನಿಸ್ತಾನದಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯವನ್ನು ಶುಕ್ರವಾರವೇ ಆರಂಭಿಸಿದೆ. ಈ ಪ್ರಕ್ರಿಯೆ ಮೂರು ದಿನಗಳವರೆಗೆ ಮುಂದುವರಿಯಿತು. ಆದರೆ, ಭಾನುವಾರ, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುಂಡಿನ ಸದ್ದು ಕೇಳಿಸಿದ ಕಾರಣ ವಿಮಾನ ಮಾರ್ಗವನ್ನು ಮುಚ್ಚಲಾಗಿತ್ತು. ಇದರಿಂದಾಗಿ ಸೋಮವಾರ ಸ್ಥಳಾಂತರ ಪ್ರಕ್ರಿಯೆಗೆ ಅಡ್ಡಿ ಉಂಟಾಗಿತ್ತು. ಆದರೆ, ಮಂಗಳವಾರ ವಾಯುಪಡೆಯ ವಿಮಾನದ ಮೂಲಕ ಭಾರತೀಯ ನಾಗರಿಕರನ್ನು ಕರೆತರಲಾಯಿತು’ ಎಂದರು.