ಇದಕ್ಕೂ ಮೊದಲು ಈ ಇಬ್ಬರು ನಾಯಕರು ದಾಳಿ ವೇಳೆ ಮೃತಪಟ್ಟಿದ್ದ ಯೋಧರ ಶವಪೆಟ್ಟಿಗೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದರು.ಬಳಿಕ ಸಭೆ ನಡೆಸಿದ್ದರು. ಈ ಕುರಿತುಮಾತನಾಡಿದ್ದ ಶಾ, 'ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹಾಗೂ ರಕ್ಷಣಾ ಪಡೆಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದೇನೆ.ಈ ಹೋರಾಟವು ದುರ್ಬಲಗೊಳ್ಳಬಾರದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಸೈನಿಕರ ಸ್ಥೈರ್ಯವನ್ನು ತೋರಿಸುತ್ತದೆ'ಎಂದುಹೇಳಿದ್ದರು.