ನಗರದಲ್ಲಿ ಕವಿದಿದ್ದ ಮಂಜು ಕ್ರಮೇಣ ಕರಗುತ್ತಿದೆ. ಕೆಲ ದಿನಗಳ ಹಿಂದೆ 100 ಮೀ. ದೂರದಲ್ಲಿದ್ದ ವ್ಯಕ್ತಿ, ವಸ್ತು ಕಾರಣದಷ್ಟು ಮಂಜು ಕವಿದಿತ್ತು. ಈಗ ಆ ಪರಿಸ್ಥಿತಿ ಇಲ್ಲ. ಸಫ್ದರ್ಜಂಗ್ ರಸ್ತೆಯಲ್ಲಿ 1000 ಮೀ. ದೂರದ ವರೆಗೆ ವೀಕ್ಷಿಸಲು ಸಾಧ್ಯವಾಗುತ್ತಿದ್ದರೆ, ಪಾಲಂ ಪ್ರದೇಶದಲ್ಲಿ 800 ಮೀ. ದೂರದ ವರೆಗೆ ನೋಡಲು ಸಾಧ್ಯವಾಗುತ್ತಿದೆ. ಅಷ್ಟರ ಮಟ್ಟಿಗೆ ಮಂಜು ಕರಗಿದೆ ಎಂದು ಶ್ರೀವಾಸ್ತವ ಹೇಳಿದರು.