ನವದೆಹಲಿ (ಪಿಟಿಐ): ‘ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್ನಲ್ಲಿ ಪ್ರಯಾಣಿಸುತ್ತಿದ್ದ ನನ್ನ ಮೇಲೆ ಕುಡಿದ ಅಮಲಿನಲ್ಲಿ ಮೂತ್ರ ವಿಸರ್ಜಿಸಿದ್ದ ಆರೋಪಿ ಶಂಕರ್ ಮಿಶ್ರಾ ಈಗ ತಾನು ಮೂತ್ರ ವಿಸರ್ಜಿಸಿಯೇ ಇಲ್ಲ ಎಂದು ಹೇಳಿದ್ದಾರೆ. ಸ್ವತಃ ನಾನೇ ಮೂತ್ರ ಮಾಡಿಕೊಂಡಿರಬಹುದು ಎಂದೂ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅವರು ಆಡಿರುವ ಮಾತುಗಳು ಅವಹೇಳನಕಾರಿಯಾಗಿವೆ. ಜೊತೆಗೆ ಸತ್ಯಕ್ಕೆ ದೂರವಾಗಿವೆ’ ಎಂದು ಸಂತ್ರಸ್ತ ವೃದ್ಧೆ ಶನಿವಾರ ಕಿಡಿಕಾರಿದ್ದಾರೆ.