ಅರ್ಜುನ್ ಬಜ್ವಾ ಅವರು ಮಾಜಿ ಸಚಿವ ಸತ್ನಂ ಸಿಂಗ್ ಬಜ್ವಾ ಅವರ ಮೊಮ್ಮಗ. ಅಮರೀಂದರ್ ಸಿಂಗ್ ನೇತೃತ್ವದ ಸರ್ಕಾರದ ಪ್ರಕಾರ, ಸತ್ನಂ ಸಿಂಗ್ ಅವರು1987ರಲ್ಲಿ ರಾಜ್ಯದ ಶಾಂತಿ, ಸೌಹಾರ್ದಕ್ಕಾಗಿ ಜೀವತ್ಯಾಗ ಮಾಡಿದ್ದರು. ಅಂತೆಯೇ, ಭೀಷಂ ಪಾಂಡೆ ಅವರು ಮಾಜಿ ಸಚಿವ ಜೋಗಿಂದರ್ ಪಾಲ್ ಪಾಂಡೆ ಅವರ ಮೊಮ್ಮಗ. ಇವರು 1987ರಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು.