<p><strong>ಹೈದರಾಬಾದ್:</strong> ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೈದರಾಬಾದ್ನಲ್ಲಿ ಮಂಗಳವಾರ 'ಭಾರತ್ ಜೋಡೊ ಯಾತ್ರೆ'ಗೆ ಜೊತೆಯಾದರು. ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಯಾತ್ರೆಯಲ್ಲಿ ಪಾಲ್ಗೊಂಡರು.</p>.<p>ನೆಕ್ಲೆಸ್ ರೋಡ್ನ ಇಂದಿರಾ ಗಾಂಧಿ ಅವರ ಪ್ರತಿಮೆ ಬಳಿ ನಡೆದ ಸಭೆಯಲ್ಲಿ ಖರ್ಗೆ ಅವರು ಹಾಜರಾದರು.</p>.<p>ಚಾರ್ಮಿನಾರ್ನಲ್ಲಿ ರಾಹುಲ್ ಗಾಂಧಿ ಅವರು ತ್ರಿವರ್ಣ ಧ್ವಜಾರೋಹಣ ಮಾಡಿದ ಬಳಿಕ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಜೊತೆ ನೆಕ್ಲೆಸ್ ರೋಡ್ನತ್ತ ಹೆಜ್ಜೆ ಹಾಕಿದರು. ವೇದಿಕೆಯಲ್ಲಿ ಖರ್ಗೆ ಅವರನ್ನು ರಾಹುಲ್ ಅಪ್ಪಿಕೊಂಡು ಯಾತ್ರೆಗೆ ಬರಮಾಡಿಕೊಂಡರು.</p>.<p>ಅಕ್ಟೋಬರ್ 16ರಂದು ಬಳ್ಳಾರಿಯಲ್ಲಿ ಯಾತ್ರೆ ಸಾಗುತ್ತಿದ್ದಾಗ ಖರ್ಗೆ ಅವರು ಹೆಜ್ಜೆ ಹಾಕಿದ್ದರು. ಮರುದಿನ ಖರ್ಗೆ ಮತ್ತು ಶಶಿ ತರೂರ್ ನಡುವೆ ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆದಿತ್ತು.</p>.<p>ಹೈದರಾಬಾದ್ನ ಬಹದೂರ್ಪುರದ ಲೆಗಸಿ ಪ್ಯಾಲೆಸ್ನಲ್ಲಿ ಮಧ್ಯಾಹ್ನ ಬಿಡುವು ಮಾಡಿಕೊಳ್ಳಲಾಗಿತ್ತು. ಬಳಿಕ ಶಂಶಾಬಾದ್ನ ಮಾತಾ ದೇವಸ್ಥಾನದಿಂದ ನಡಿಗೆ ಪುನಃ ಆರಂಭಗೊಂಡಿತು. ಬೊವೆನ್ಪಲ್ಲಿಯ ಗಾಂಧಿ ಐಡಿಯಾಲಜಿ ಸೆಂಟರ್ನಲ್ಲಿ ಯಾತ್ರೆ ತಂಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೈದರಾಬಾದ್ನಲ್ಲಿ ಮಂಗಳವಾರ 'ಭಾರತ್ ಜೋಡೊ ಯಾತ್ರೆ'ಗೆ ಜೊತೆಯಾದರು. ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಯಾತ್ರೆಯಲ್ಲಿ ಪಾಲ್ಗೊಂಡರು.</p>.<p>ನೆಕ್ಲೆಸ್ ರೋಡ್ನ ಇಂದಿರಾ ಗಾಂಧಿ ಅವರ ಪ್ರತಿಮೆ ಬಳಿ ನಡೆದ ಸಭೆಯಲ್ಲಿ ಖರ್ಗೆ ಅವರು ಹಾಜರಾದರು.</p>.<p>ಚಾರ್ಮಿನಾರ್ನಲ್ಲಿ ರಾಹುಲ್ ಗಾಂಧಿ ಅವರು ತ್ರಿವರ್ಣ ಧ್ವಜಾರೋಹಣ ಮಾಡಿದ ಬಳಿಕ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಜೊತೆ ನೆಕ್ಲೆಸ್ ರೋಡ್ನತ್ತ ಹೆಜ್ಜೆ ಹಾಕಿದರು. ವೇದಿಕೆಯಲ್ಲಿ ಖರ್ಗೆ ಅವರನ್ನು ರಾಹುಲ್ ಅಪ್ಪಿಕೊಂಡು ಯಾತ್ರೆಗೆ ಬರಮಾಡಿಕೊಂಡರು.</p>.<p>ಅಕ್ಟೋಬರ್ 16ರಂದು ಬಳ್ಳಾರಿಯಲ್ಲಿ ಯಾತ್ರೆ ಸಾಗುತ್ತಿದ್ದಾಗ ಖರ್ಗೆ ಅವರು ಹೆಜ್ಜೆ ಹಾಕಿದ್ದರು. ಮರುದಿನ ಖರ್ಗೆ ಮತ್ತು ಶಶಿ ತರೂರ್ ನಡುವೆ ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆದಿತ್ತು.</p>.<p>ಹೈದರಾಬಾದ್ನ ಬಹದೂರ್ಪುರದ ಲೆಗಸಿ ಪ್ಯಾಲೆಸ್ನಲ್ಲಿ ಮಧ್ಯಾಹ್ನ ಬಿಡುವು ಮಾಡಿಕೊಳ್ಳಲಾಗಿತ್ತು. ಬಳಿಕ ಶಂಶಾಬಾದ್ನ ಮಾತಾ ದೇವಸ್ಥಾನದಿಂದ ನಡಿಗೆ ಪುನಃ ಆರಂಭಗೊಂಡಿತು. ಬೊವೆನ್ಪಲ್ಲಿಯ ಗಾಂಧಿ ಐಡಿಯಾಲಜಿ ಸೆಂಟರ್ನಲ್ಲಿ ಯಾತ್ರೆ ತಂಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>