ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ‘ಮೋದಿಯವರು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು, ತಮ್ಮ ವೈಯಕ್ತಿಕ ಕಾರ್ಯಸೂಚಿಯನ್ನು ಬದಿಗಿಟ್ಟು, ಸುತ್ತಮುತ್ತಲಿನ ಜನರ ನೋವಿಗೆ ಸ್ಪಂದಿಸಬೇಕು. ಜನರ ಸೇವೆಗೆ ಮುಂದಾಗಬೇಕು‘ ಎಂದು ಸೋನಿಯಾ ಸೇರಿದಂತೆ ವಿವಿಧ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರು.