‘ಮೋದಿ ಸರ್ಕಾರವು ಜಿಎಸ್ಟಿ, ಪೆಟ್ರೋಲ್, ಡೀಸೆಲ್ ಮತ್ತು ರಸಗೊಬ್ಬರ ಬೆಲೆಗಳನ್ನು ಹೆಚ್ಚಿಸಿದೆ. ಸಾಂಕ್ರಾಮಿಕ ರೋಗದ ಈ ಕಾಲಘಟ್ಟದಲ್ಲಿ ಮೋದಿ ಸ್ನೇಹಿತರ ಆದಾಯವನ್ನು ಈ ಮೂಲಕ ಹೆಚ್ಚಿಸಿ, ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಅಲ್ಲದೆ ಕೃಷಿ ಸಬ್ಸಿಡಿ, ರೈತರ ಆದಾಯ ಮತ್ತು ಕೇಂದ್ರ ಸರ್ಕಾರದ ಘನತೆಯನ್ನು ಕುಂದಿಸಲಾಗಿದೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ಮಾಡಿದ್ದಾರೆ.