ಈ ಸಂದರ್ಭ ಸ್ಥಳಕ್ಕಾಗಮಿಸಿದ ಪೊಲೀಸ್ ಕಾನ್ಸ್ಟೇಬಲ್ ವಿಕ್ರಮ್, ಸಮೀಪದ ಅಂಗಡಿಯಿಂದ ಸುತ್ತಿಗೆಯನ್ನು ತಂದು ಬೀಗವನ್ನು ಮುರಿದು ಅಗ್ನಿಶಾಮಕ ದಳ ನೇರವಾಗಿ ಪ್ರವೇಶಿಸಿ ಬೆಂಕಿ ನಂದಿಸಲು ನೆರವಾದರು. ಬಳಿಕ ಅವರ ಮನೆಗೆ ಸಂಪರ್ಕ ಕೊಟ್ಟಿದ್ದ ನೈಸರ್ಗಿಕ ಅನಿಲದ ಸರಬರಾಜನ್ನು ಕಡಿತಗೊಳಿಸಿ ಹೆಚ್ಚಿನ ಅನಾಹುತವಾಗದಂತೆ ನೋಡಿಕೊಂಡಿದ್ದಾರೆ.