ಮಹಾರಾಷ್ಟ್ರದ ಅಂಬರ್ನಾಥ ಪಟ್ಟಣದಲ್ಲಿ ಭಾನುವಾರ ಸ್ಥಳೀಯ ಸಂಸ್ಥೆ ಚುನಾವಣಾ ರ್ಯಾಲಿಯನ್ನುದ್ಧೇಶಿಸಿ ಮಾತನಾಡಿದ ಅವರು,‘ ಸೆಂಟ್ರಲ್ ವಿಸ್ತಾ ಯೋಜನೆಗಾಗಿ ಸರ್ಕಾರ ₹800–₹1000 ಕೋಟಿ ಖರ್ಚು ಮಾಡುತ್ತಿದೆ. ಕೋವಿಡ್ ಪಿಡುಗಿನ ಸಂದರ್ಭದಲ್ಲಿ ಇದರ ಅವಶ್ಯಕತೆ ಇರಲಿಲ್ಲ. ಸಂಸದರ ನಿಧಿಯನ್ನು ಸ್ಥಗಿತಗೊಳಿಸಿ, ಆಸ್ಪತ್ರೆ ನಿರ್ಮಿಸಿದ್ದರೆ, ನಾವು ಸಂತೋಷವಾಗಿ ನಿಧಿಯನ್ನು ಬಿಟ್ಟುಕೊಡುತ್ತಿದ್ದೆವು’ ಎಂದರು.