ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 22,272 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ 251 ಜನರು ಮೃತಪಟ್ಟಿದ್ದು, 22,274 ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಇದರೊಂದಿಗೆ, ದೇಶದಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 1.01 ಕೋಟಿ (1,01,69,118) ಮೀರಿದ್ದು, 1,47,343 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು 97.40 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ. ಸದ್ಯ 2,81,667 ಸಕ್ರಿಯ ಪ್ರಕರಣಗಳಿವೆ.
With 22,272 new #COVID19 infections, India's total cases rise to 1,01,69,118
— ANI (@ANI) December 26, 2020
With 251 new deaths, toll mounts to 1,47,343 . Total active cases at 2,81,667
Total discharged cases at 97,40,108 with 22,274 new discharges in the last 24 hours. pic.twitter.com/NmkqV0UTRk
ಡಿಸೆಂಬರ್ 25ರ ವೇಳೆಗೆ 16.71 (16,71,59,289) ಕೋಟಿ ಜನರ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ನಿನ್ನೆ (ಶುಕ್ರವಾರ) 8,53,527 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.
Total number of samples tested up to 25th December is 16,71,59,289 including 8,53,527 samples tested yesterday: ICMR
— ANI (@ANI) December 26, 2020
ಜಾರ್ಖಂಡ್ನಲ್ಲಿ 168 ಹೊಸ ಪ್ರಕರಣ
ಡಾರ್ಖಂಡ್ನಲ್ಲಿ ಕಳೆದ 24 ಗಂಟೆಗಳಲ್ಲಿ (ಡಿ.25) 168 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 176 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 1,13,954ಕ್ಕೆ ಏರಿಕೆಯಾಗಿದ್ದು, ಈವರೆಗೂ 1,11,351 ಜನರು ಗುಣಮುಖರಾಗಿದ್ದಾರೆ. ಈ ಪೈಕಿ 1,016 ಜನರು ಮೃತಪಟ್ಟಿದ್ದು, 1,587 ಸಕ್ರಿಯ ಪ್ರಕರಣಗಳಿವೆ.
ಪಶ್ಚಿಮ ಬಂಗಾಳದಲ್ಲಿ 9,536 ಹೊಸ ಪ್ರಕರಣ
ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ 1,541 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, 31 ಜನರು ಸಾವಿಗೀಡಾಗಿದ್ದಾರೆ. 1,954 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 5,44,755ಕ್ಕೆ ಏರಿಕೆಯಾಗಿದ್ದು, 9,536 ಜನರು ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ 19,13,382, ಕರ್ನಾಟಕದಲ್ಲಿ 9,14,488, ಆಂಧ್ರಪ್ರದೇಶದಲ್ಲಿ 8,80,430, ತಮಿಳುನಾಡಿನಲ್ಲಿ 8,12,142, ಕೇರಳದಲ್ಲಿ 7,32,084 ಮತ್ತು ದೆಹಲಿಯಲ್ಲಿ 6,21,439 ಜನರಿಗೆ ಈವರೆಗೆ ಸೋಂಕು ತಗುಲಿದೆ.
ಇನ್ನುಳಿದಂತೆ ಕೇರಳದಲ್ಲಿ 64,203 ಮತ್ತು ಮಹಾರಾಷ್ಟ್ರದಲ್ಲಿ 57,955 ಸಕ್ರಿಯ ಪ್ರಕರಣಗಳಿದ್ದು, ದೇಶದಲ್ಲಿ ಅತಿಹೆಚ್ಚಿನ ಸಕ್ರಿಯ ಪ್ರಕರಣಗಿರುವ ರಾಜ್ಯಗಳಾಗಿ ಹೊರಹೊಮ್ಮಿವೆ. ಮೂರನೇ ಸ್ಥಾನದಲ್ಲಿ 16,159 ಸಕ್ರಿಯ ಪ್ರಕರಣಗಳೊಂದಿಗೆ ಉತ್ತರ ಪ್ರದೇಶವಿದ್ದು, 14,759 ಸಕ್ರಿಯ ಪ್ರಕರಣಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಛತ್ತೀಸಗಡವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.