ಕಾಸರಗೋಡು: ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಕೇರಳದೊಂದಿಗಿನ ಎಲ್ಲಾ ಗಡಿಯನ್ನು ಮುಚ್ಚಿವೆ. ಇದರಿಂದಾಗಿ ಕೇರಳದ ಕಾಸರಗೋಡು ಜಿಲ್ಲೆಯ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಆರೋಗ್ಯ ಸೇವೆ ಮತ್ತುಇನ್ನಿತರ ಪ್ರಮುಖ ಸೇವೆಗಳಿಗಾಗಿ ಕಾಸರಗೋಡು ಜಿಲ್ಲೆಯ ಜನರು ಮಂಗಳೂರಿನ ಮೇಲೆ ಅವಲಂಬಿತರಾಗಿದ್ದಾರೆ.
ದಕ್ಷಿಣ ಕನ್ನಡದೊಂದಿಗಿನ ಕೇರಳದ ಗಡಿಗಳನ್ನುಸೋಮವಾರ ಮುಚ್ಚಲಾಗಿದೆ. ಇದರಿಂದಾಗಿ ಕೇರಳ–ಕರ್ನಾಟಕ ಗಡಿಯಲ್ಲಿ ಹಲವಾರು ವಾಹನಗಳು ಜಮಾಯಿಸಿವೆ. ಕೋವಿಡ್ನ ನೆಗೆಟಿವ್ ಪ್ರಮಾಣ ಪತ್ರವಿದ್ದವರಿಗೆ ಮಾತ್ರ ಕೇರಳದಿಂದ ಕರ್ನಾಟಕಕ್ಕೆ ಬರಲು ಅವಕಾಶ ಕಲ್ಪಿಸಿಕೊಡಲಾಗಿದೆ.