ರಾಯಪುರ (ಪಿಟಿಐ): ಛತ್ತೀಸ್ಗಡದದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರೊಡನೆ ನಡೆದ ಗುಂಡಿನ ಕಾಳಗದಲ್ಲಿ ಶನಿವಾರ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಅಧಿಕಾರಿಯೊಬ್ಬರು ಮೃತಪಟ್ಟಿದ್ದು, ಯೋಧರೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಡೊಂಗಲ್ ಚಿಂತಾ ನದಿಯ ಬಳಿ ಸಿಆರ್ಪಿಎಫ್ ಗಸ್ತು ತಂಡವು ಅರಣ್ಯವನ್ನು ಸುತ್ತುವರಿದಾಗ ನಕ್ಸಲ್ ಗುಂಪಿನ ಜೊತೆ ಭಾರಿ ಗುಂಡಿನ ಚಕಮಕಿ ನಡೆಯಿತು.ಘಟನೆಯಲ್ಲಿ ಸಿಆರ್ಪಿಎಫ್ನ 168ನೇ ಬೆಟಾಲಿಯನ್ನ ಸಹಾಯಕ ಕಮಾಂಡೆಂಟ್ ಅಧಿಕಾರಿ ಶಾಂತಿ ಭೂಷಣ್ ತಿರ್ಕೆ ಮೃತಪಟ್ಟಿದ್ದಾರೆ. ಯೋಧ ಅಪ್ಪಾ ರಾವ್ ಅವರು ಗಂಭೀರ ಗಾಯಗೊಂಡಿದ್ದಾರೆ’ ಎಂದು ಬಸ್ತರ್ ವಲಯದ ಐಜಿಪಿ ಸುಂದರ್ ರಾಜ್ ಹೇಳಿದರು.