‘ಇತ್ತೀಚೆಗೆ ಬೆಂಗಳೂರಿಗೆ ಬಂದ ರೈಲಿನ ಎಂಜಿನ್ ಅನ್ನು ಸಿಬ್ಬಂದಿ ಪರಿಶೀಲಿಸಿದ್ದರು. ಅದೇ ವೇಳೆ ರುಂಡ ಕಂಡಿತ್ತು.ನಂತರವೇ ರುಂಡದ ಮಾಹಿತಿಯನ್ನು ಬೆತುಲ್ ಪೊಲೀಸರಿಗೆ ತಿಳಿಸಲಾಯಿತು. ಮುಂಡದ ಅಂತ್ಯಕ್ರಿಯೆ ಮುಗಿಸಿರುವ ಸಂಬಂಧಿಕರು, ರುಂಡಕ್ಕಾಗಿ ಬೆಂಗಳೂರಿಗೆ ಬರಲಿಲ್ಲ. ಹೀಗಾಗಿ, ಅವರ ಒಪ್ಪಿಗೆ ಪಡೆದು ನಾವೇ ರುಂಡದ ಅಂತಿಮ ಕ್ರಿಯಾವಿಧಿಗಳನ್ನು ನೆರವೇರಿಸಿದ್ದೇವೆ.